ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಜು.4ರಂದು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಚುನಾಚಣೆ ನಡೆಸಲು ತೀರ್ಮಾನಿಸಿದೆ. ಜಮ್ಮು ಕಾಶ್ಮೀರದ ಮಾಜಿ ನ್ಯಾಯಾೀಶ ಮಹೇಶ್ ಮಿತ್ತಲ್ ಅವರನ್ನು ಚುನಾವಣಾಕಾರಿಯಾಗಿ ನೇಮಿಸಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಸಿಇಒ ಕಲ್ಯಾಣ್ ಚೌಬೆ, ಮಾಜಿ ನ್ಯಾಯಾಧೀಶ ಮಹೇಶ್ ಮಿತ್ತಲ್ ಅವರ ನೇಮಕವನ್ನು ಘೋಷಿಸಿದರು.
ರೆಸ್ಲಿಂಗ್ ಕಾರ್ಯ ನಿರ್ವಹಕರ ಸಮಿತಿಯ ಚುನಾವಣೆ ನಡೆಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದೆ. ಮಾಜಿ ನ್ಯಾಯಾಧೀಶ ಮಹೇಶ್ ಮಿತ್ತಲ್ ಅವರನ್ನು ಚುನಾವಣಾಕಾರಿಯಾಗಿ ನೇಮಕ ಮಾಡಲು ಸಂತಸವಾಗಿದೆ ಮತ್ತು ಸಹಾಯಕ ಸಿಬ್ಬಂದಿಗಳು ಚುನಾವಣೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಿಇಒ ಕಲ್ಯಾಣ್ ಚೌಬೆ ತಿಳಿಸಿದರು.
ಚುನಾವಣೆ ಎಸ್ಜಿಎಂ ನಲ್ಲಿ ನಡೆಯಲಿದ್ದು, ಸಮಯ ನಿಗದಿಯಂತೆ ಚುನಾವಣೆ ನಡೆಯಲಿದೆ. ಶಾಂತಿಯುತ ಚುನಾವಣೆ ಬಯಸುವುದಾಗಿ ತಿಳಿಸಿದೆ.
ಕೇಂದ್ರ ಕ್ರೀಡಾ ಸಚಿವ ಜೂ.7ರಂದು ಕುಸ್ತಿ ಫೆಡರೇಶನ್ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಆದರೆ ಮಂಡಳಿಯ ವಿಶೇಷ ಸಭೆ ನಡೆದು 21 ದಿನ ಸಮಯ ಕೊಡಬೇಕಾಗಿರುವುದರಿಂದ ಜೂ.30ರಂದು ಚುನಾವಣೆ ಅಸಾಧ್ಯ ಎಂದು ತಿಳಿಸಿದರು.
ಚಂಡಿಗಢ ಮತ್ತು ದೆಹಲಿ ಸೇರಿ 25 ರೆಸ್ಲಿಂಗ್ ಫೆಡರೇಶನ್ ಮಂಡಳಿಗಳಿವೆ.
ರಾಜ್ಯ ಫೇಡರೇಶನ್ ನಡುವೆ ಒಗ್ಗಟಿಲ್ಲ
ಈ ಹಿಂದೆ ಕೆಲವು ರಾಜ್ಯ Àಡೆರೇಶನ್ಗಳು ಕಿತ್ತಾಟದಿಂದಾಗಿ ಮಂಡಳಿ ವಿಸರ್ಜನೆಗೊಂಡಿದ್ದವು. ಮಹಾರಾಷ್ಟ್ರ, ಮಧ್ಯಪ್ರದೇಶ, ಹರ್ಯಾಣ ಮತ್ತು ಕರ್ನಾಟಕ ಮಂಡಳಿಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತದಾರರ ಪಟ್ಟಿಯನ್ನು ಕಳಿಸಿವೆ ಎಂದು ತಿಳಿದು ಬಂದಿದೆ.
2022ರಲ್ಲಿ ಭ್ರಷ್ಟಾಚಾರ ಮತ್ತು ಅವ್ಯಸ್ಥೆಯಿಮದಾಗಿ ರೆಸ್ಲಿಂಗ್ Éಡರೇಶನ್ ಕರ್ನಾಟಕ, ಹಯ್ಣಾ ಮತ್ತು ಮಹಾರಾಷ್ಟ್ರ ಕಾರ್ಯನಿರ್ವಹಕ ಮಂಡಳಿಯನ್ನು ವಿಸರ್ಜಿಸಿತ್ತು.
ಕುಸ್ತಿಪಟುಗಳಿಗೆ ಸಚಿವ ಅನುರಾಗ್ ಠಾಕೂರ್ ಭರವಸೆ
ಈ ಬಾರಿಯ ಚುನಾವಣೆಯಲ್ಲಿ ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಕುಟುಂಬದವರಾಗಲಿ ಅಥವಾ ಸ್ನೇಹಿತರನ್ನಾಗಲಿ ಚುನಾವಣೆಯಲ್ಲಿ ಸ್ರ್ಪಸಲು ಅವಕಾಶ ನೀಡುವುದಿಲ್ಲ ಎಂದು ಕ್ರೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿಪಟುಗಳಿಗೆ ಭರವಸೆ ನೀಡಿದ್ದಾರೆ.