ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲು ತಮ್ಮ ಕ್ರೀಡಾ ವೃತ್ತಿ ಬದುಕನ್ನು ತ್ಯಾಗ ಮಾಡಲು ಸಿದ್ಧವಿರುವುದಾಗಿ ಪ್ರತಿಭಟನೆ ನಿರತ ಕುಸ್ತಿಪಟುಗಳು ಹೇಳಿದ್ದಾರೆ.
ಜೂ.10ರಿಂದ ಜೂ.18ರೆವರೆಗೆ ಕಿರ್ಗಿಸ್ಥಾನದಲ್ಲಿ ಅಂಡರ್ 17 ಮತ್ತು ಅಂಡರ್ 23 ಏಷ್ಯನ್ ಚಾಂಪಿಯನ್ಶಿಪ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನ ಸಮಿತಿ ಟ್ರಯಲ್ಸ್ ನಡೆಸಲು ಚಿಂತನೆ ನಡೆಸಿದೆ. ಕುಸ್ತಿಪಟುಗಳು ಈ ಕ್ರಮವನ್ನು ಸ್ವಾಗತಿಸಿದೆ.
ರಾಜ್ ಘಾಟ್ಗೆ ಭೇಟಿ ನೀಡಿದ ನಂತರ ಮಾತನಾಡಿದ ಕುಸ್ತಿಪಟುಗಳು, ಲೈಂಗಿಕ ಕಿರುಕುಳ ನೀಡಿದ ರೆಸ್ಲಿಂಗ್ ಫೆಡರೇಶನ್ ಅಧ್ಯಯಕ್ಷ ಬ್ರಿಜ್ ಭೂಷಣ್ ಬಂಧನವಾಗುವವರೆಗೂ ಪ್ರತಿಭಟನೆ ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದರು.
ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಮುಂದುವರೆಯುತ್ತದೆ. ಇಡೀ ದೇಶದಿಂದ ನಮಗೆ ಬೆಂಬಲ ಸಿಕ್ಕಿದೆ. ಸರ್ಕಾರದ ಉದ್ದೇಶ ಭೇಟಿ ಬಚಾವೊ ಬೇಟಿ ಪಡೊವ್ ಮನಸ್ಸಿನಲ್ಲಿಟ್ಟುಕೊಳ್ಳಬೇಕೆಂದು ಬಜರಂಗ್ ಪುನಿಯಾ ಹೇಳಿದರು.
ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದರೆ ಅದೇ ನಮಗೆ ದೊಡ್ಡ ಪದಕ. ನಾವು ತ್ಯಾಗಕ್ಕೂ ಸಿದ್ಧರಿದ್ದೇವೆ. ಫೆಡರೇಶನ್ನಲ್ಲಿರುವ ಒಳ್ಳೆಯವರಿಗಾಗಿ ನಮ್ಮ ಹೋರಾಟ. ಬ್ರಿಜ್ ಭೂಷಣ್ ಅಂತವರಿಗಲ್ಲ ಎಂದಿದ್ದಾರೆ.
ಟ್ರಯಲ್ಗಳನ್ನು ಮತ್ತೆ ಆರಂಭಿಸಿದನ್ನು ಸ್ವಾಗತಿಸುತ್ತೇನೆ. ಸಮಿತಿಯನ್ನು ನಾವು ಜಾಗೃತಿಯಿಂದ ನೋಡಬೇಕೆ ಹೊರತು ಬ್ರಿಜ್ `ಭೂಷಣ್ ಅವರನ್ನಲ್ಲ . ಸಮಿತಿಯನ್ನು ನಾವು ಯಾವತ್ತೂ ವಿರೋಧಿಸಿಲ್ಲ ಎಂದರು.
ನಾವು ಕುಸ್ತಿಪಟುಗಳನ್ನು ಇಲ್ಲಿ ಬಂದು ಪ್ರತಿಭಟಿಸಿ ಎಂದು ಹೇಳುವುದಿಲ್ಲ. ಅಭ್ಯಾಸಕ್ಕೆ ತೊಂದರೆಯಾಗುವುದು ನಮಗೆ ಇಷ್ಟವಿಲ್ಲ ಎಂದು ಬಜರಂಗ್ ಹೇಳಿದ್ದಾರೆ.
ಹನುಮಾನ್ ಮಂದಿರಕ್ಕೆ ಪಾದಯಾತ್ರೆ
ಪ್ರತಿಭಟನೆ ನಿರತ ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರು ಜಂತರ್ ಮಂತರ್ನಿಂದ ಕನ್ಪಾಟ್ಪ್ಲೇಸ್ನಲ್ಲಿರುವ ಹನುಮಾನ್ ಮಂದಿರಕ್ಕೆ ಮಂಗಳವಾರ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಭೀಮ್ ಆರ್ಮಿ ಅಧ್ಯಕ್ಷ ಚಂದ್ರ ಶೇಖರ್ ಅಜಾದ್ ಜತೆ ನೂರಾರರು ಕುಸ್ತಿಪಟುಗಳು ಜತೆಗೂಡಿದರು.