IPL 2022 ರಾಜಸ್ಥಾನ ರಾಯಲ್ಸ್ ಬಲಿಷ್ಠ ತಂಡವನ್ನು ಹೊಂದಿದ್ದು, ಆಟದ ಪ್ರತಿಯೊಂದು ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. ಆದ್ದರಿಂದ ತಂಡದ 13 ವರ್ಷಗಳ ಬಳಿಕ ಮತ್ತೊಮ್ಮೆ ಕಪ್ ಗೆ ಮುತ್ತಿಡುವ ಅವಕಾಶ ಇದೆ. ರಾಯಲ್ಸ್ ಈ ಋತುವಿನಲ್ಲಿ ತಮ್ಮ ತಂಡದಲ್ಲಿ ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್ ಮತ್ತು ಯುಜ್ವೇಂದ್ರ ಚಾಹಲ್ ಅವರಂತಹ ಹಲವು ಸ್ಟಾರ್ ಆಟಗಾರರನ್ನು ಹೊಂದಿದ್ದು ಉತ್ಸಾಹದಿಂದೆ ಎಂದು ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಆದಷ್ಟು ಬೇಗ ಸಮನ್ವಯ ಸಾಧಿಸುವುದು ತಂಡದ ಗೆಲುವಿಗೆ ನಿರ್ಣಾಯಕ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಸಾಧ್ಯವಾದಷ್ಟು ಬೇಗ ಪರಸ್ಪರ ಸಮನ್ವಯವನ್ನು ಸ್ಥಾಧಿಸುವತ್ತ ನಮ್ಮ ಗಮನ ಹರಿಸಿದ್ದೇವೆ ಎಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಸ್ಯಾಮ್ಸನ್ ಹೇಳಿದರು. ಈ ಬಾರಿ ನಾವು ವಿಭಿನ್ನ ತಂಡವನ್ನು ಹೊಂದಿದ್ದೇವೆ. ತಂಡದಲ್ಲಿ ಕೆಲವು ಹೊಸ ಸದಸ್ಯರಿದ್ದಾರೆ. ಆದ್ದರಿಂದ ನಮ್ಮ ತಂಡದ ಸದಸ್ಯರನ್ನು ಸರಿಹೊಂದಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕಳೆದ ಎರಡು ಅಥವಾ ಮೂರು ಸೀಸನ್ಗಳಿಂದ ನಾವು ಖಂಡಿತವಾಗಿಯೂ ಕಲಿತಿದ್ದೇವೆ ಎಂದು ಹೇಳಿದರು. ನಾವು ಕೆಲವು ಆಯ್ಕೆಗಳನ್ನು ಚರ್ಚಿಸಿದ್ದೇವೆ ಮತ್ತು ಈ ಬಗ್ಗೆ ಕೆಲಸ ಮಾಡಿದ್ದೇವೆ ಮತ್ತು ಹರಾಜಿನಲ್ಲಿ ನಾವು ಉತ್ತಮ ತಂಡವನ್ನು ಕಟ್ಟಿದ್ದೇವೆ” ಎಂದು ಸಂಜು ತಿಳಿಸಿದ್ದಾರೆ.
ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಈ ಟೂರ್ನಿಗೆ ರಾಯಲ್ಸ್ ತಂಡಕ್ಕೆ ಸಾಕಷ್ಟು ಆಯ್ಕೆ ಹೊಂದಿದೆ. ತಂಡದಲ್ಲಿ ಸಾಕಷ್ಟು ಭಾರತೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ನಾವು ಎಲ್ಲಾ ಆಟಗಾರರ ಮನಸ್ಥಿತಿ, ಫಿಟ್ನೆಸ್ ಮತ್ತು ಫಾರ್ಮ್ ಅನ್ನು ಅರ್ಥಮಾಡಿಕೊಳ್ಳಬೇಕು. ಲಸಿತ್ ಮಾಲಿಂಗ ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ನ ಬೌಲಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ನಾವು ನೋಡುತ್ತಾ ಬೆಳೆದ ಮಾಲಿಂಗ ಮತ್ತು ಕುಮಾರ ಸಂಗಕ್ಕಾರ (ಕ್ರಿಕೆಟ್ ನಿರ್ದೇಶಕ) ಅವರಂತಹ ದಂತಕಥೆಗಳು ನಮ್ಮೊಂದಿಗೆ ಇರುವುದು ಅದ್ಭುತವಾಗಿದೆ ಎಂದು ಅವರು ಹೇಳಿದರು. ಅವರು ನಮ್ಮಂತಹ ಯುವಕರಿಗೆ ನಮ್ಮ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.