ಕಾನ್ಪುರ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ನೀಡಿದ ಹೋರಾಟ ಬಳಿಕ ಟೀಮ್ ಇಂಡಿಯಾ ಅಲರ್ಟ್ ಆಗಿದೆ. ಕಿವೀಸ್ ತಂಡಕ್ಕೆ ಅವಕಾಶ ನೀಡಿದರೆ ತಮ್ಮದೇ ಕಿವಿ ಹಿಂಡುತ್ತಾರೆ ಅನ್ನುವುದು ಕನ್ ಫರ್ಮ್ ಆಗಿದೆ. ಹೀಗಾಗಿ ಮುಂಬೈ ಟೆಸ್ಟ್ಗೆ ಟೀಮ್ ಇಂಡಿಯಾ ಎಲ್ಲಾ ಪ್ರಿಪರೇಷನ್ಗಳನ್ನು ಮಾಡಿ ಮುಗಿಸಿದೆ. 2ನೇ ಟೆಸ್ಟ್ ಪಂದ್ಯ ಗೆದ್ದು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಮತ್ತೆ ಮುಂದೆ ಬರುವ ಯೋಜನೆ ರೂಪಿಸಿದೆ.
ವಿರಾಟ್ ಕೊಹ್ಲಿ ಬ್ರೇಕ್ನಿಂದ ವಾಪಾಸಗಿರುವುದರಿಂದ ಕ್ಯಾಪ್ಟನ್ಸಿ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಆದರೆ ವಿರಾಟ್ಗಾಗಿ ಸ್ಥಾನ ಬಿಡುವವರು ಯಾರು ಅನ್ನುವುದು ಚರ್ಚೆಯಲ್ಲಿದೆ. ಕಳಪೆ ಫಾರ್ಮ್ನಲ್ಲಿರುವ ಅಜಿಂಕ್ಯಾ ರಹಾನೆ ಬಲಿಯಾಗುತ್ತಾರೋ, ಇತ್ತೀಚಿನ ದಿನಗಳಲ್ಲಿ ಲಯ ಕಳೆದುಕೊಂಡಿರುವ ಚೇತೇಶ್ವರ ಪೂಜಾರಾ ಸ್ಥಾನ ಬಿಡುತ್ತಾರೋ ಅನ್ನುವ ಚರ್ಚೆ ನಡೆಯುತ್ತಿದೆ. ಇದೆಲ್ಲದರ ಜೊತೆಗೆ ಮಯಾಂಕ್ ಅಗರ್ವಾಲ್ ಒಂದು ಟೆಸ್ಟ್ನಲ್ಲಿ ಅನುಭವಿಸಿದ ವೈಫಲ್ಯ ದುಬಾರಿ ಆಗುತ್ತೋ ಅನ್ನುವ ಚರ್ಚೆ ಇದೆ.
ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಕೂಡ ಕತ್ತು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಫಿಟ್ ಆಗಿರುವ ಕೆ.ಎಸ್. ಭರತ್ಗೆ ಅವಕಾಶ ನೀಡುವ ಕುರಿತು ಯೋಜನೆಗಳಿರುವುದು ಸುಳ್ಳಲ್ಲ. ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಜಾಗ ಸದ್ಯಕ್ಕೆ ಸೇಫ್.
ಬೌಲಿಂಗ್ನಲ್ಲಿ ಅಶ್ವಿನ್, ಜಡೇಜಾ ಮತ್ತು ಅಕ್ಸರ್ ಪಟೇಲ್ ಜಾಗ ಗ್ಯಾರೆಂಟಿ. ಇವರಿಂದ ಬ್ಯಾಟಿಂಗ್ ಬಲವೂ ಹೆಚ್ಚಾಗಲಿದೆ. ಉಮೇಶ್ ಯಾದವ್ ಆಡುವುದು ಪಕ್ಕಾ. ಆದರೆ ಇಶಾಂತ್ ಮತ್ತು ಸಿರಾಜ್ ಆಯ್ಕೆ ನಡುವೆ ಗೊಂದಲವೂ ಇದೆ.
ನ್ಯೂಜಿಲೆಂಡ್ ತಂಡ ಕಾನ್ಪುರ ಟೆಸ್ಟ್ ನಲ್ಲಿ ಸೋಲಿನಿಂದ ಗ್ರೇಟ್ ಎಸ್ಕೇಪ್ ಆಗಿತ್ತು. ಟಾಮ್ ಲೇಥಂ ಮತ್ತು ವಿಲ್ ಯಂಗ್ ರನ್ನು ಬಿಟ್ಟರೆ ಬ್ಯಾಟಿಂಗ್ನಲ್ಲಿ ಯಾರೂ ಮಿಂಚಿರಲಿಲ್ಲ. ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಸ್ಥಾನದ ಬಗ್ಗೆ ಅನುಮಾನವಿಲ್ಲ. ಟಾಮ್ ಬ್ಲಂಡಲ್ ಅನಿವಾರ್ಯ ಆಗಿದ್ದಾರೆ. ಆದರೆ ಹೆನ್ರಿ ನಿಕೊಲಸ್ ಗ್ಲೆನ್ ಫಿಲಿಪ್ಸ್ಗೆ ಅವಕಾಶ ಮಾಡಿಕೊಡುತ್ತಾರಾ ಅನ್ನುವ ಚರ್ಚೆ ಇದೆ. ವಿಲಿಯಂ ಸೊಮರ್ ವಿಲ್ಲೆ ಮತ್ತು ಅಜಝ್ ಪಟೇಲ್ ಮೊದಲ ಟೆಸ್ಟ್ನಲ್ಲಿ ಪರಿಣಾಮ ಬೀರದೇ ಇರುವುದರಿಂದ ಮಿಚೆಲ್ ಸ್ನಾಂಟ್ನರ್ ಮತ್ತು ಈಶ್ ಸೋಧಿ ಕಡೆಗೆ ಗಮನವಿದೆ. ಒಟ್ಟಿನಲ್ಲಿ ಮುಂಬೈ ಟೆಸ್ಟ್ ಪಂದ್ಯ ಟೀಮ್ ಇಂಡಿಯಾಕ್ಕೆ ಎಷ್ಟು ಪ್ರಮುಖವೋ ಅಷ್ಟೇ ನ್ಯೂಜಿಲೆಂಡ್ ಪಾಲಿಗೂ ಇಂಪಾರ್ಟೆಂಟ್.