ಐಪಿಎಲ್ನಲ್ಲಿ ಯಾರೂ ಅಂದುಕೊಳ್ಳದೇ ಇರುವುದು ನಡೆಯುವುದು ಸಾಮಾನ್ಯ. ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಇರಲೇ ಇಲ್ಲ. ಮುಂಬೈ-ಡೆಲ್ಲಿ ಮ್ಯಾಚ್ ಮತ್ತು ಇತರೆ ಪಂದ್ಯಗಳಲ್ಲಿ ಅಂದುಕೊಂಡ ಫಲಿತಾಂಶ ಬಾರದೇ ಇದ್ದಿದ್ದು ಆರ್ಸಿಬಿಗೆ ಬೋನಸ್ ಆಯಿತು. ಎಲಿಮಿನೇಟರ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ಸಿಬಿ ಲಕ್ನೋ ಸೂಪರ್ ಜೈಂಟ್ಸ್ಗೆ ಶಾಕ್ ನೀಡಿ ಕ್ವಾಲಿಫೈಯರ್ 2 ಪ್ರವೇಶಿಸಿದೆ. ಈಗ ಫೈನಲ್ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ.
ಆರ್ಸಿಬಿ ಪ್ಲೇ-ಆಫ್ನಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್ ಶಕ್ತಿ ಹೆಚ್ಚಿದೆ. ವಿರಾಟ್, ಫಾಫ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಬಾಕಿ ಇರುವ ಇನ್ನಿಂಗ್ಸ್ ಬಂದರೆ ಎಲ್ಲಾ ಲೆಕ್ಕ ಚುಕ್ತಾ ಆಗಲಿದೆ. ರಜತ್ ಪಾಟೀದಾರ್ ಬೆಂಗಳೂರು ಪಾಲಿಗೆ ಚಿನ್ನದ ಹುಡುಗ. ಮಹಿಪಾಲ್ ಲೊಮ್ರೊರ್ ಮತ್ತು ದಿನೇಶ್ ಕಾರ್ತಿಕ್ ಬಲದ ಬಗ್ಗೆ ಗೊತ್ತಿದೆ. ಶಹಬಾಸ್ ಅಹ್ಮದ್ ಟೀಮ್ ಮ್ಯಾನ್.
ಬೌಲಿಂಗ್ನಲ್ಲಿ ಸಮಸ್ಯೆ ದೂರವಾದಂತಿದೆ. ಜೋಶ್ ಹ್ಯಾಜಲ್ವುಡ್ ಎಂದಿನ ಲಯದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಬಿಗ್ ಮ್ಯಾಚ್ ಪ್ಲೇಯರ್. ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ವಿಕೆಟ್ ಬೇಟೆಯಲ್ಲಿದ್ದಾರೆ. ಮ್ಯಾಕ್ಸಿ, ಲೊಮ್ರೊರ್ ಮತ್ತು ಶಹಬಾಸ್ 5ನೇ ಬೌಲರ್ ಕೆಲಸ ಮಾಡುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ಮೊದಲ ಕ್ವಾಲಿಫೈಯರ್ನಲ್ಲಿ ಗುಜರಾತ್ ವಿರುದ್ಧ ಸೋತು ಈಗ ಫೈನಲ್ಗೇರುವ 2ನೇ ಅವಕಾಶದಲ್ಲಿ ಆಡುತ್ತಿದೆ. ಆರ್. ಆರ್. ಬ್ಯಾಟಿಂಗ್ ಬಗ್ಗೆ ಮಾತಿಲ್ಲ. ಜೋಸ್ ಬಟ್ಲರ್ ಒಬ್ಬರೇ ಎಲ್ಲಾ ಕೆಲಸ ಮಾಡಿ ಮುಗಿಸಬಲ್ಲರು. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಕೂಡ ಲಯದಲ್ಲಿದ್ದಾರೆ. ಪಡಿಕಲ್ ಮತ್ತು ಹೆಟ್ಮಯರ್ ಆಟ ನಿರ್ಣಾಯಕ. ಅಶ್ವಿನ್ ಆಲ್ರೌಂಡರ್. ರಿಯಾನ್ ಪರಾಗ್ ಆಟದ ಝಲಕ್ ಸಿಕ್ಕಿದೆ.
ಟ್ರೆಂಟ್ ಬೋಲ್ಟ್ ಬೌಲಿಂಗ್ ವಿಭಾಗದ ನಾಯಕನಾದರೂ ಹೆಚ್ಚು ರನ್ ಕೊಡುತ್ತಿದ್ದಾರೆ. ಪ್ರಸಿಧ್ ಕೃಷ್ಣ ಮತ್ತು ಕುಲ್ದೀಪ್ ಸೇನ್ ಗುಜರಾತ್ ವಿರುದ್ಧ ಮುಗ್ಗರಿಸಿದ್ದರು. ಅಶ್ವಿನ್ ಮತ್ತು ಚಹಲ್ ಜೋಡಿ ವಿಕೆಟ್ ಎತ್ತಿ ರನ್ಗೆ ಕಡಿವಾಣ ಹಾಕಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಸ್ಪಿನ್ ಬೌಲರ್ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ದೊಡ್ಡ ಮೊತ್ತದ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.