ವಿಶ್ವ ಕ್ರಿಕೆಟ್ನ ಶ್ರೇಷ್ಠ ಆಲ್ರೌಂಡರ್ ಆಗಿ ಕ್ರಿಕೆಟ್ ಅಂಗಳದಲ್ಲಿ ಎದುರಾಳಿಗಳ ಸವಾಲು ಎದುರಿಸುವಲ್ಲಿ ಯಶಸ್ವಿಯಾಗಿರುವ ರವೀಂದ್ರ ಜಡೇಜಾ, ಕ್ಯಾಪ್ಟನ್ ಜವಾಬ್ದಾರಿಯ ಒತ್ತಡ ಎದುರಿಸುವಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. 2022ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಸ್ಟಾರ್ ಪ್ಲೇಯರ್, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.
ಕೊನೆ ಹಂತದಲ್ಲಿ 15ನೇ ಆವೃತ್ತಿಯಲ್ಲಿ ಸಿಎಸ್ಕೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ರವೀಂದ್ರ ಜಡೇಜಾ ಹೆಗಲೇರಿತು. 2022ರ ಸೀಸನ್ನಲ್ಲಿ ಆಡಿರುವ ಮೂರು ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್, ಸೋಲಿನ ಆಘಾತ ಕಂಡಿದೆ. ಈ ನಡುವೆ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿರುವ ರವೀಂದ್ರ ಜಡೇಜಾ, ಒತ್ತಡದ ಸಂದರ್ಭಗಳಲ್ಲಿ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಅವರ ಸಲಹೆ ಪಡೆಯುತ್ತಿದ್ದಾರೆ. ಒತ್ತಡದ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನ ಧೋನಿಗೆ ವಹಿಸಿ, ತಾವು ಬೌಂಡರಿ ಹೊಸ್ತಿಲಲ್ಲಿ ಫೀಲ್ಡಿಂಗ್ ಮಾಡುತ್ತಿರುತ್ತಾರೆ.
ಅಲ್ಲದೇ ಫೀಲ್ಡಿಂಗ್ ವಿಷಯದಲ್ಲಿ ಮಾಜಿ ಕ್ಯಾಪ್ಟನ್ ಧೋನಿ, ವಿಕೆಟ್ ಹಿಂದೆ ನಿಂತು ಪಂದ್ಯವನ್ನ ಗಮನಿಸುತ್ತಿರುತ್ತಾರೆ. ಹೀಗಾಗಿ ಫೀಲ್ಡಿಂಗ್ ವಿಷಯದಲ್ಲಿ ನಾಯಕ ರವೀಂದ್ರ ಜಡೇಜಾ ಅವರಿಗಿಂತ ಧೋನಿ ನಿರ್ಧಾರವೇ ಅಂತಿಮ ಎನ್ನುವಂತಾಗಿದ್ದು, ಹಲವು ಸಂದರ್ಭಗಳಲ್ಲಿ ಧೋನಿ ಅವರೇ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರೆ. ನಾಯಕ ರವೀಂದ್ರ ಜಡೇಜಾ ಕ್ಷೇತ್ರ ರಕ್ಷಣೆ ಕಾರ್ಯದಲ್ಲಿ ತೊಡಗಿರುತ್ತಾರೆ.
ಪ್ರಸಕ್ತ ಸರಣಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ಸಿಎಸ್ಕೆ, ಕಮ್ಬ್ಯಾಕ್ ಮಾಡಲಿದೆ ಎಂದು ರವೀಂದ್ರ ಜಡೇಜಾ ವಿಶ್ವಾಸ ವ್ಯಕ್ತಪಡಿಸಿದಾರೆ. ಸತತ ಸೋಲು ಕಂಡಿರುವ ಚೆನ್ನೈ, ಬಲಿಷ್ಠ ಕಮ್ಬ್ಯಾಕ್ ಮಾಡುವ ನಿರೀಕ್ಷೆ ಹೊಂದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಒಮ್ಮೆ ಗೆಲುವಿನ ಕಂಡರೆ, ಪ್ರಾಬಲ್ಯ ಮೆರೆಯಬಹುದಾಗಿದ್ದು, ನಾವು ಸಹ ಆ ಗೆಲುವಿನ ಹುಡುಕಾಟದಲ್ಲಿದ್ದೇವೆ ಎಂದು ಸಿಎಸ್ಕೆ ನಾಯಕ ರವೀಂದ್ರ ಜಡೇಜಾ ತಿಳಿಸಿದ್ದಾರೆ.