ಪ್ರೊ ಕಬಡ್ಡಿಯ 9ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಜೈಪುರ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಇದರೊಂದಿಗೆ ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ. ಫೈನಲ್ನಲ್ಲಿ ಜೈಪುರ ಹಾಗೂ ಪುಣೇರಿ ತಂಡಗಳು ಮುಖಾಮುಖಿಯಾಗಲಿವೆ.
ಮುಂಬನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬುಲ್ಸ್ ಬಲಿಷ್ಠ ಜೈಪುರ ವಿರುದ್ಧ 49-29 ಅಂಕಗಳಿಂದ ಹೀನಾಯವಾಗಿ ಸೋಲು ಕಂಡಿತು. ಮೊದಲಾರ್ಧದಲ್ಲಿ ಜೈಪುರ ತಂಡ 24-15 ಅಂಕಗಳಿಂದ ಮುನ್ನಡೆ ಪಡೆಯಿತು.
ಮೊದಲ ಅವಧಿಯಲ್ಲಿ ಜೈಪುರ ಬುಲ್ಸ್ ತಂಡವನ್ನು 2 ಬಾರಿ ಆಲೌಟ್ ಮಾಡಿತು. ಎರಡನೆ ಅವಧಿಯಲ್ಲಿ ಬುಲ್ಸ್ ತಂಡವನ್ನು 4 ಬಾರಿ ಆಲೌಟ್ ಮಾಡಿತು.
ಜೈ ಪುರ ಪರ ರೈಡರ್ಗಳಾದ ಅಜೀತ್ 13 ಅಂಕ, ಸಾಹುಲ್ ಕುಮಾರ್ 10 ಅಂಕಗಳನ್ನು ತಂದುಕೊಟ್ಟರು. ಉಳಿದಂತೆ ಬುಲ್ಸ್ ಪರ ರೈಡರ್ ನೀರಜ್ ನರ್ವಾಲ್ 4, ಸೌರಭ್ ಹಾಗೂ ನಂದಾಲ್ ತಲಾ 4 ಅಂಕ ಸಂಪಾದಿಸಿದರು. ವಿಕಾಶ್ ಕಾಂಡೊಲಾ ರೈಡಿಂಗ್ನಲ್ಲಿ 5 ಅಂಕ ಪಡೆದರು.
ರೋಚಕವಾಗಿ ಗೆದ್ದ ಪುಣೇರಿ
ಎರಡನೆ ಸೆಮಿಫೈನಲ್ನಲ್ಲಿ ಪುಣೇರಿ ಪಲ್ಟಾನ್ ತಮಿಳ್ ತಲೈವಾಸ್ ವಿರುದ್ಧ 39-37 ಅಂಕಗಳಿಂದ ರೊಚಕ ಗೆಲುವು ಸಾಧಿಸಿ ಫೈನಲ್ ತಲುಪಿತು. ನಿರ್ಣಾಯಕ ಪಂದ್ಯದಲ್ಲಿ ಪುಣೆ ತಂಡ ಮೊದಲ ಬಾರಿಗೆ ಪೆ ಕಬಡ್ಡಿಯಲ್ಲಿ ಫೈನಲ್ ತಲುಪಿದೆ.
ಮೊದಲ ಅವಯಲ್ಲಿ ತಮಿಳ್ ತಲೈವಾಸ್ 21-15 ಅಂಕಗಳಿಂದ ಮುನ್ನಡೆ ಪಡೆದಿತ್ತು. ಎರಡನೆ ಅವಧಿಯಲ್ಲಿ ಪುಣೇರಿ ತಂಡ ತಲೈವಾಸ್ ತಂಡವನ್ನು ನಾಲ್ಕು ಬಾರಿ ಆಲೌಟ್ ಮಾಡಿ ಅಂಕ ಹೆಚ್ಚಿಸಿಕೊಂಡಿತು.
ತಲೈವಾಸ್ ಪರ ಏಕಾಂಗಿ ಹೋರಾಟ ಮಾಡಿದ ರೈಡರ್ ಪಂಕಜ್ ಮೋಹಿತೆ 16 ಅಂಕ ಸಂಪಾದಿಸಿದರು. ತಂಡದ ಆಲ್ರೌಂಡರ್ ಮೊಹ್ಮದ 6 ಅಂಕ ಪಡೆದರು. ತಮಿಳ್ ತಲೈವಾಸ್ ಪರ ರೈಡರ್ಗಳಾದ ನರೇಂದರ್ 12 ಅಂಕ,ಜಿಂಕ್ಯ ಪವಾರ್ 7 ಅಂಕ ತಂದುಕೊಟ್ಟರು.