ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಕರ್ನಾಟಕ ತಂಡ ಸರ್ವಿಸ್ ತಂಡದ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಸಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ರಣಜಿ ಟೂರ್ನಿಯ 3ನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಸರ್ವಿಸ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 261 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಕರ್ನಾಟಕ ತಂಡ 43 ರನ್ಗಳ ಮುನ್ನಡೆ ಪಡೆಯಿತು.
ಮೊದಲ ಇನ್ನಿಂಗ್ಸ್ ಮುಂದುವರೆಸಿದ ನಾಯಕ ರಜತ್ ಪಾಲಿವಾಲ್ 124 ರನ್ ಹೊಡೆದು ಗೋಪಾಲ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಸಿಂಗ್ 36 ರನ್, ದೀವೇಶ್ ಪಾಥಾನಿಯಾ 11 ರನ್ ಗಳಿಸಿದರು. ಅರ್ಪಿತ್ ಗುಲೇರಿಯಾ ಅಜೇಯ 7 ರನ್ ಗಳಿಸಿದರು.
ಕರ್ನಾಟಕ ಪರ ವಿಶ್ವತ್ ಕಾವೇರಪ್ಪ 64ಕ್ಕೆ 4, ರೋನಿತ್ ಮೋರೆ 54ಕ್ಕೆ 3 ವಿಕೆಟ್ ಪಡದರು. ವಿಜಯ್ ಕುಮಾರ್ ಹಾಗೂ ಕೆ.ಗೌತಮ್ ತಲಾ 1 ವಿಕೆಟ್ ಪಡೆದರು.
ಎರಡನೆ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ (ಅಜೇಯ 47) ಆರ್.ಸಮರ್ಥ್ ಅಜೇಯ 40 ರನ್ ಗಳಿಸಿದರು. ಕರ್ನಾಟಕ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 90 ರನ್ ಗಳಿಸಿದೆ. ಒಟ್ಟು ಕರ್ನಾಟಕ ತಂಡ ಒಟ್ಟು 133 ರನ್ ಮುನ್ನಡೆ ಸಾಧಿಸಿದೆ.