15ನೇ ಆವೃತ್ತಿಯಲ್ಲಿ ಅಸ್ಥಿರ ಪ್ರದರ್ಶನ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಎದುರಿಸುತ್ತಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯಕ್ಕಾಗಿ ಎರಡು ತಂಡಗಳು ಸಜ್ಜಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಂದಿನ ಪಂದ್ಯಕ್ಕಾಗಿ ಎರಡು ತಂಡಗಳು ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಮುಂಬೈ ಪರ ಗಾಯಳು ಸೂರ್ಯಕುಮಾರ್ ಬದಲಿಗೆ ರಮಣ್ದೀಪ್ ಸಿಂಗ್ ಕಣಕ್ಕಿಳಿಯುತ್ತಿದ್ದಾರೆ. ಕೆಕೆಆರ್ ಭಾರೀ ಬದಲಾವಣೆ ಮಾಡಿಕೊಂಡಿದ್ದು, ರಹಾನೆ, ವೆಂಕಟೇಶ್ ಅಯ್ಯರ್, ಪ್ಯಾಟ್ ಕಮ್ಮಿನ್ಸ್, ವರುಣ್ ಚಕ್ರವರ್ತಿ ಹಾಗೂ ಶೆಲ್ಡಾನ್ ಜ್ಯಾಕ್ಸನ್ ತಂಡಕ್ಕೆ ಮರಳಿದ್ದಾರೆ.
ಈಗಾಗಲೇ ಐಪಿಎಲ್ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ಗೆ ಈ ಪಂದ್ಯ ಪ್ರತಿಷ್ಠೆಯ ಕದನವಾಗಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ಗೆ ಈ ಹಣಾಹಣಿ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿನ ಲೆಕ್ಕಾಚಾರದಲ್ಲಿ ಕಣಕ್ಕಿಳಿಯಲಿದೆ. ಮೇಲ್ನೋಟಕ್ಕೆ ಆರಂಭಿಕ ಸೋಲಿನ ಆಘಾತದ ನಡುವೆಯೂ ಜಯದ ಹಾದಿಗೆ ಮರಳಿರುವ ಮುಂಬೈ ಇಂದಿನ ಪಂದ್ಯದಲ್ಲಿ ಮೇಲುಗೈ ಹೊಂದಿದೆ. ಆದರೆ ಆರಂಭದಲ್ಲಿ ಮಿಂಚಿದ್ದರು ನಂತರದಲ್ಲಿ ಸತತ ಸೋಲಿನ ಆಘಾತ ಕಂಡಿರುವ ಕೊಲ್ಕತ್ತಾ ಕಮ್ಬ್ಯಾಕ್ ನಿರೀಕ್ಷೆಯಲ್ಲಿದೆ.
ತಂಡಗಳ ಮುಖಾಮುಖಿ:
ಪಂದ್ಯಗಳು – 30, ಮುಂಬೈ ಗೆಲುವು – 22, ಕೆಕೆಆರ್ ಗೆಲುವು – 8
ಉಭಯ ತಂಡಗಳು:
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್, ರೋಹಿತ್ ಶರ್ಮ(ನಾಯಕ), ತಿಲಕ್ ವರ್ಮ, ರಮಣ್ದೀಪ್ ಸಿಂಗ್, ಕೈರನ್ ಪೊಲಾರ್ಡ್, ಟಿಮ್ ಡೇವಿಡ್, ಡೆನಿಯಲ್ ಸ್ಯಾಮ್ಸ್, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯನ್, ಜಸ್ಪ್ರೀತ್ ಬುಮ್ರಾ, ರೈಲಿ ಮೆರಿಡಿತ್.
ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯಾ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನೀಲ್ ನರೈನ್, ಶೆಲ್ಡಾನ್ ಜ್ಯಾಕ್ಸನ್, ಪ್ಯಾಟ್ ಕಮ್ಮಿನ್ಸ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.