ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದಾಗ ಸ್ಥಿತಿ ಬೇರೆಯೇ ಇತ್ತು. ಕೊಲ್ಕತ್ತಾ ಅಂಕಪಟ್ಟಿಯಲ್ಲಿ ಮೆರೆದಾಡುತ್ತಿತ್ತು. ಮುಂಬೈ ಸೋಲಿನಿಂದ ಹೊರಬರುವ ಪ್ರಯತ್ನದಲ್ಲಿತ್ತು. ಆದರೆ ಈಗಹ ಸ್ಥಿತಿ ಬೇರೆ. ಕೆಕೆಆರ್ 9ನೇ ಸ್ಥಾನಕ್ಕೆ ಜಾರಿದೆ. ಮುಂಬೈ ಸತತ ಸೋಲಿನ ಬಳಿಕ 2 ಗೆಲುವುಗಳನ್ನು ಕಂಡಿದೆ. ಅಷ್ಟೇ ಅಲ್ಲ ಪ್ಲೇ-ಆಫ್ ಚಾನ್ಸ್ ಮುಂಬೈ ಕೈಯಿಂದ ತಪ್ಪಿ ಹೋಗಿದೆ. ಆದರೆ ಲೆಕ್ಕಾಚಾರದಲ್ಲಿ ಮಾತ್ರ ಕೊಲ್ಕತ್ತಾಕ್ಕೆ ಚಾನ್ಸ್ ಇದೆ. ಹೀಗಾಗಿ ಲೀಗ್ನಲ್ಲೇ ಶ್ರೇಯಸ್ ಬಳಗಕ್ಕೆ ನಾಕೌಟ್ ಪಂದ್ಯ ಎದುರಾಗಿದೆ. ಮುಂಬೈ, ಶ್ರೇಯಸ್ ಬಳಗಕ್ಕೆ ಎಕ್ಸಿಟ್ ಪಂಚ್ ನೀಡುವ ತಯಾರಿಯಲ್ಲಿದೆ.
ಕಳೆದ ಬಾರಿ ಮುಖಾಮುಖಿಯಾದಾಗ ಡ್ಯಾನೆಸ್ಯಾಮ್ಸ್ ಒಂದೇ ಓವರ್ನಲ್ಲಿ ಪ್ಯಾಟ್ ಕಮಿನ್ಸ್ 35 ರನ್ ಸಿಡಿಸಿದ್ದರು. ವೆಂಕಟೇಶ್ ಅಯ್ಯರ್ ಅಜೇಯ ಅರ್ಧಶತಕ ಸಿಡಿಸಿದ್ದರು. ಅಜಿಂಕ್ಯಾ ರಹಾನೆ ಆರಂಭಿಕರಾಗಿದ್ದರು. ಆದರೆ ಈಗ ಸ್ಯಾಮ್ಸ್ ಮುಂಬೈ ಪಾಲಿಗೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಕಮಿನ್ಸ್, ವೆಂಕಟೇಶ್ ಅಯ್ಯರ್ ಮತ್ತು ರಹಾನೆ ತಂಡದಲ್ಲಿ ಜಾಗವನ್ನೂ ಪಡೆಯುತ್ತಿಲ್ಲ.
ಈ ಎರಡೂ ತಂಡಗಳ ಸ್ಥಿತಿ ಆಲ್ಮೋಸ್ಟ್ ಒಂದೇ ರೀತಿ ಇದೆ. ಮುಂಬೈ ಈ ಬಾರಿ ಪವರ್ ಪ್ಲೇ ನಲ್ಲಿ ಕೇವಲ 12 ವಿಕೆಟ್ ಗಳನ್ನು ಮಾತ್ರ ಕಳೆದುಕೊಂಡಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ಪವರ್ ಪ್ಲೇ ನಲ್ಲಿ 23 ವಿಕೆಟ್ ಕಳೆದುಕೊಂಡು ಅಗ್ರಸ್ಥಾನದಲ್ಲಿದೆ. ಕೆಕೆಆರ್ 5 ಆರಂಭಿಕ ಜೋಡಿಯನ್ನು ಕಂಡಿದೆ. ಪವರ್ ಪ್ಲೇ ನಲ್ಲಿ 6.53 ರನ್ ರೇಟ್ ಹೊಂದಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಮುಂಬೈ ಒಂದೇ ಓಪನಿಂಗ್ ಜೋಡಿಯನ್ನು ಆಡಿಸಿದೆ. 7.91 ರನ್ ಹೊಂದಿರುವ ಮುಂಬೈ ಪವರ್ ಪ್ಲೇ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಅಗ್ರ 4 ತಂಡಗಳಲ್ಲಿ ಒಂದಾಗಿದೆ.
ಮಿಡಲ್ ಓವರ್ನಲ್ಲಿ ಕೊಲ್ಕತ್ತಾ 8.97 ರನ್ ರೇಟ್ ಹೊಂದಿ ಅಗ್ರಸ್ಥಾನದಲ್ಲಿದೆ. ಆದರೆ ಮುಂಬೈ ಮಿಡಲ್ ಓವರ್ನಲ್ಲಿ 7.42 ರನ್ ಹೊಂದಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಸತತ 8 ಪಂದ್ಯಗಳ ಸೋಲಿನ ಬಳಿಕ ಈಗ 2 ಗೆಲುವುಗಳನ್ನು ಪಡೆದುಕೊಂಡಿದೆ. ಇಶನ್ ಕಿಶನ್, ರೋಹಿತ್ ಶರ್ಮಾ ಕಳೆದೆರಡು ಪಂದ್ಯಗಳಿಂದ ಟಚ್ ಕಂಡುಕೊಂಡಿದ್ದಾರೆ. ತಿಲಕ್ ವರ್ಮಾ ಮತ್ತುಸೂರ್ಯ ಕುಮಾರ್ ಯಾದವ್ ದಿ ಬೆಸ್ಟ್ ಟಚ್ನಲ್ಲಿದ್ದಾರೆ. ಪೊಲ್ಲಾರ್ಡ್ ವೈಫಲ್ಯ ತಲೆ ನೋಡುವ ತಂದಿದೆ. ಆದರೆ ಟಿಮ್ ಡೇವಿಡ್ ಭವಿಷ್ಯದ ಆಟಗಾರ ಅನ್ನುವುದನ್ನು ನಿರೂಪಿಸಿದ್ದಾರೆ. ಜಸ್ ಪ್ರಿತ್ ಬುಮ್ರಾ, ಡೇನಿಯಲ್ ಸ್ಯಾಮ್ಸ್ ಮತ್ತು ರಿಲಿ ಮೆರಿಡಿತ್ ಫಾಸ್ಟ್ ಬೌಲರ್ಗಳು. ಮುರುಗನ್ ಅಶ್ವಿನ್ ಮತ್ತು ಕುಮಾರ್ ಕಾರ್ತಿಕೇಯ ಸ್ಪಿನ್ ಸ್ಪೆಷಲಿಸ್ಟ್ಗಳು.
ಕೊಲ್ಕತ್ತಾ ನೈಟ್ ರೈಡರ್ಸ್ ಕಳೆದ 5 ಪಂದ್ಯಗಳ ಪೈಕಿ 1ನ್ನು ಮಾತ್ರ ಗೆದ್ದಿದೆ. ಹೀಗಾಗಿ 11 ಪಂದ್ಯಗಳಿಂದ ಕೇವಲ 8 ಅಂಕ ಮಾತ್ರ ಸಂಪಾದಿಸಿದೆ. ಈ ಪಂದ್ಯವನ್ನು ಸೋತರೆ ಕೊಲ್ಕತ್ತಾ ಪ್ಲೇ-ಆಫ್ ಅವಕಾಶದಿಂದ ವಂಚಿತವಾಗುತ್ತದೆ. ಕೆಕೆಆರ್ ಆ್ಯರೋನ್ ಫಿಂಚ್ ಬದಲಿಗೆ ಸ್ಯಾಮ್ ಬಿಲ್ಲಿಂಗ್ಸ್ ರನ್ನು ಇನ್ನಿಂಗ್ಸ್ ಆರಂಭಿಸಲು ಕಳುಹಿಸಬೇಕು. ಶೆಲ್ಡನ್ ಜಾಕ್ಸನ್ಗೆ ಬಾಬಾ ಇಂದ್ರಜಿತ್ ಸ್ಥಾನದಲ್ಲಿ ಅವಕಾಶ ನೀಡಬೇಕು. ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ನೈಜ ಆಟ ಆಡಬೇಕು. ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕು. ಬೌಲಿಂಗ್ನಲ್ಲಿ ಫಿಟ್ ಆದರೆ ಹರ್ಷಿತ್ ರಾಣಾ ಅಥವಾ ಶಿವಂ ಮಾವಿ ಜಾಗದಲ್ಲಿ ಆಡಬಹುದು. ಸೌಥಿ, ಅನುಕೂಲ್ ರಾಯ್, ನರೈನ್ ಮತ್ತು ಆ್ಯಂಡ್ರೆ ರಸೆಲ್ ವಿಕೆಟ್ ಪಡೆದರೆ ಮಾತ್ರ ಗೆಲುವು ಸಾಧ್ಯ.
ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಹೀಗಾಗಿ ಬ್ಯಾಟ್ಸ್ ಮನ್ ಮತ್ತು ಬೌಲರ್ಗಳಿಗೆ ಸಮಾನ ಅವಕಾಶ ಸಿಗಲಿದೆ.