5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್.. ಈ ಎರಡು ತಂಡಗಳು ಐಪಿಎಲ್ನ ಸ್ಪೆಷಲಿಸ್ಟ್ಗಳು. ಆದರೆ 15ನೇ ಆವೃತ್ತಿಯ ಟೂರ್ನಿಯಲ್ಲಿ ಈ ಎರಡೂ ತಂಡಗಳು ಗೆಲುವಿನ ರುಚಿ ಕಂಡಿಲ್ಲ. ತಂಡ ಬಲಿಷ್ಠವಾಗಿದ್ದರೂ ಬೇಕಾಗಿದ್ದ ಆರಂಭ ಸಿಕ್ಕಿಲ್ಲ.
ಡ್ಯಾಡೀಸ್ ಟೀಮ್ಗೆ ಸ್ಥಿರತೆ ಪ್ರಾಬ್ಲಂ..?
ಚೆನ್ನೈ ತಂಡಕ್ಕೆ ಓಲ್ಡ್ ಡ್ಯಾಡಿಸ್ ಟೀಮ್ ಅನ್ನುವ ಹಣೆ ಪಟ್ಟಿ ಇದೆ. ಮಹೇಂದ್ರ ಸಿಂಗ್ ಧೋನಿ, ಡ್ವೈನ್ ಬ್ರಾವೋ, ಅಂಬಟಿ ರಾಯುಡುರಂತಹ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಆದರೂ ಐಪಿಎಲ್ನಲ್ಲಿ ಆಡುತ್ತಿದ್ದಾರೆ. ಅನುಭವ ಏನೋ ಇದೆ.. ಆದರೆ ಈ ಆಟಗಾರರಿಂದ ಸ್ಥಿರವಾದ ಆಟ ಬರುತ್ತಿಲ್ಲ ಅನ್ನುವುದು ಚಿಂತೆಗೆ ಕಾರಣವಾಗಿದೆ,
ಬ್ಯಾಟಿಂಗ್ನಲ್ಲಿ ಹೇಗೋ ಸಿಎಸ್ಕೆ ಸುಧಾರಿಸಿಕೊಂಡು ಹೋಗಬಹುದು. ಆದರೆ ಬೌಲಿಂಗ್ ವಿಭಾಗ ತೀರಾ ದುರ್ಬಲ. ದೀಪಕ್ ಚಹರ್ ಇಲ್ಲದೇ ಇರುವುದು ವೇಗದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಿದೆ. ಮುಕೇಶ್ ಚೌಧರಿ ಮತ್ತು ತುಷಾರ್ ದೇಶಪಾಂಡೆ ರನ್ ಹೊಡೆಸಿಕೊಳ್ಳುವುದೇ ರೂಢಿ ಮಾಡಿಕೊಂಡಿದ್ದಾರೆ. ಸರಿಯಾದ ಸ್ಪಿನ್ನರ್ ಕೂಡ ಇಲ್ಲದೇ ಇರುವುದು ಚೆನ್ನೈಗೆ ಹೊಡೆತ ನೀಡಿದೆ. ಇಡೀ ತಂಡದಲ್ಲಿ ಲೆಗ್ ಸ್ಪಿನ್ನರ್ ಇಲ್ಲದೇ ಇರುವುದು ಕಾಂಬಿನೇಷನ್ ಮೇಲೆ ಹೊಡೆತ ಕೊಟ್ಟಿದೆ.
ಮುಂಬೈ ಕೈ ತಪ್ಪಿದ ಲೆಕ್ಕಾಚಾರ
ಮುಂಬೈ ತಂಡಕ್ಕೂ ಬ್ಯಾಟಿಂಗ್ ಸಮಸ್ಯೆ ಅಲ್ಲ. ಬೌಲಿಂಗ್ ಕೈ ಕೊಡುತ್ತಿದೆ. ಜಸ್ ಪ್ರಿತ್ ಬುಮ್ರಾ ಜೊತೆ ಜೋಫ್ರಾ ಆರ್ಚರ್ ಇದ್ದಾರೆ ಅನ್ನುವ ಧೈರ್ಯ ಮುಂಬೈಗಿತ್ತು. ಆದರೆ ಆರ್ಚರ್ ಗಾಯದಿಂದಾಗಿ ಆಡುತ್ತಿಲ್ಲ. ಇದು ಹೊಡೆತ ಕೊಟ್ಟಿದೆ. ಆಫ್ ಸ್ಪಿನ್ನರ್ ಕೊರತೆ ಮತ್ತು 5ನೇ ಬೌಲರ್ ಕೊರತೆಯೂ ಮುಂಬೈ ತಂಡಕ್ಕೆ ಕಾಡುತ್ತಿದೆ.
ಒಟ್ಟಿನಲ್ಲಿ ಐಪಿಎಲ್ನ 2 ಬಲಿಷ್ಠ ತಂಡಗಳು ಸೋಲಿನ ಸುಳಿಯಲ್ಲಿವೆ ಅಂತ ಉಳಿದ ಲೆಕ್ಕಾಚಾರ ಹಾಕಿದರೆ ಅದು ತಪ್ಪಾಗಬಹುದು. ಯಾಕಂದರೆ ಈ ತಂಡಗಲೂ ಒಂದು ಬಾರಿ ಗೆಲುವಿನ ರುಚಿ ಹಿಡಿದರೆ ಬೇರೆ ತಂಡಗಳಿಗೆ ನೀರು ಕುಡಿಸಿಬಿಡುತ್ತವೆ.