ಪ್ರೋ ಕಬಡ್ಡಿ ಲೀಗ್ ನಲ್ಲಿ ಕನ್ನಡಿಗರ ದರ್ಬಾರ್ Pro Kabaddi sportskarnataka
ಬೆಂಗಳೂರು : ಕೊರೊನಾ ಕಾರಣದಿಂದ ಎರಡು ವರ್ಷಗಳ ಬಳಿಕ ದೇಸಿ ಕ್ರೀಡೆ ಕಬಡ್ಡಿ ಹಂಗಾಮ ಶುರುವಾಗಿದ್ದು. ಕನ್ನಡದ ಕಲಿಗಳು ದರ್ಬಾರ್ ಮುಂದುವೆರೆದಿದೆ.
ಈ ಬಾರಿಯ ಲೀಗ್ ನಲ್ಲಿ ಒಟ್ಟು 15 ಮಂದಿ ಕನ್ನಡಿಗ ಕಲಿಗಳು ಅಖಾಡಕ್ಕೆ ಧುಮುಕುತ್ತಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ನಮ್ಮೂರ ತಂಡವಾಗಿರುವ ಬೆಂಗಳೂರು ಬುಲ್ಸ್ನಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ.
ಪಾಟ್ನಾ ಪೈರೇಟ್ಸ್ನ ನಾಯಕರಾಗಿ ಪುತ್ತೂರಿನ ಪ್ರಶಾಂತ್ ಕುಮಾರ್ ರೈ ಮಿಂಚುತ್ತಿದ್ದಾರೆ.
ಬೆಂಗಾಲ್ ವಾರಿಯಸ್ ನಲ್ಲಿ ಸುಕೇಶ್ ಹೆಗ್ಡೆ, ರಿಷಾಂಕ್ ದೇವಾಡಿಗ, ಸಚಿನ್ ವಿ, ದರ್ಶನ್, ಮನೋಜ್ ಗೌಡ, ಆನಂದ್ ಇದ್ದಾರೆ.
ತೆಲುಗು ಟೈಟಾನ್ಸ್ನಲ್ಲಿ ರಾಕೇಶ್ ಕುಮಾರ್, ದಬಾಂಗ್ ಡೆಲ್ಲಿಯಲ್ಲಿ ಜೀವಾ ಕುಮಾರ್, ಜೈಪುರ್ ಪಿಂಕ್ ಪ್ಯಾಂಥರ್ಸ್ನಲ್ಲಿ ಪವನ್ ಕುಮಾರ್, ತಮಿಳ್ ತಲೈವಾಸ್ಗೆ ಕನ್ನಡಿಗ ಪ್ರಪಂಚನ್ ಮಿಂಚುತ್ತಿದ್ದಾರೆ.
ಪುಣೇರಿ ಪಲ್ಟನ್ ನಲ್ಲಿ ಚೇತನ್ ಮತ್ತು ವಿಶ್ವಾಸ್ ಕಾಣಿಸಿಕೊಂಡಿದ್ದು, ಗುಜರಾತ್ ತಂಡಲದಲ್ಲಿ ರತನ್.ಕೆ ಮತ್ತು ಯು ಮುಂಬಾದಲ್ಲಿ ಸಚಿನ್ ಪ್ರತಾಪ ಸ್ಥಾನ ಪಡೆದಿದ್ದಾರೆ.
ಆದ್ರೆ ನಮ್ಮೂರ ತಂಡ ಎನಿಸಿಕೊಂಡಿರುವ ಬೆಂಗಳೂರು ಬುಲ್ಸ್ ತಂಡದಲ್ಲಿ ಮಾತ್ರ ಒಬ್ಬರೇ ಒಬ್ಬರು ಕನ್ನಡಿಗರಿಲ್ಲ.