ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೃಷ್ಟದ ತಂಡವಾಗಿದೆ. ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಅಂತಿಮ ಓವರ್ ತನಕ ಆರ್ಸಿಬಿಯ ಪ್ಲೇ-ಆಫ್ ಆಸೆ ಅಲುಗಾಡುತ್ತಿತ್ತು. ಆದರೆ ಮುಂಬೈ, ಡೆಲ್ಲಿಯನ್ನು ಸೋಲಿಸಿದ್ದೇ ತಡ ಆರ್ಸಿನಿ ಎಲಿಮಿನೇಟರ್ ಆಡು ಕ್ವಾಲಿಫೈ ಆಯಿತು. ಈಗ ಹಳೆಯ ಮಾತು ಬೇಡ. ಲಖನೌ ವಿರುದ್ಧದ ನಾಕೌಟ್ ಮ್ಯಾಚ್ ಹೇಗೆ ಗೆಲ್ಲಬೇಕು ಅನ್ನುವ ಲೆಕ್ಕಾಚಾರ ಮಾಡಬೇಕಿದೆ.
ಬ್ಯಾಟಿಂಗ್ಗೆ ಬೇಕು ಬೂಸ್ಟ್:
ಯಸ್, ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಆರ್ಸಿಬಿ ಬ್ಯಾಟ್ಸ್ಮನ್ಗಳು ಇಡೀ ಟೂರ್ನಿಯಲ್ಲಿ ಸಂಘಟಿತರಾಗಿ ಆಡಿದ್ದು ಇಲ್ವೇ ಇಲ್ಲ. ದಿನೇಶ್ ಕಾರ್ತಿಕ್ ಕೆಲ ಪಂದ್ಯಗಳನ್ನು ಗೆಲ್ಲಿಸಿದರೆ, ಫಾಫ್ ಕೆಲ ಪಂದ್ಯಗಳಲ್ಲಿ ಮಿಂಚಿದರು. ವಿರಾಟ್ ಕೊಹ್ಲಿ ಕೊನೆಯ ಪಂದ್ಯದಲ್ಲಿ ಬ್ಯಾಟ್ ಬೀಸಿದರು. ಗ್ಲೆನ್ ಮ್ಯಾಕ್ಸ್ ವೆಲ್ ಮಿಂಚಲೇ ಇಲ್ಲ. ಹೀಗಾಗಿ ಕೆಜಿಎಫ್ ಖ್ಯಾತಿಯ ಕೊಹ್ಲಿ, ಗ್ಲೆನ್ ಮತ್ತು ಫಾಫ್ ಒಟ್ಟಾಗಿ ಮಿಂಚಿದರೆ ಮಾತ್ರ ಎದುರಾಳಿಯನ್ನು ಖೆಡ್ಡಾಕ್ಕೆ ಕೆಡವಬಹುದು.
ಡೆತ್ ಓವರ್ ಬ್ಯಾಟಿಂಗ್ ಬೋನಸ್:
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿಯ ಟಾಪ್ ಆರ್ಡರ್ ಪಟಪಟನೆ ಉದುರಿದ್ದು ಮಾಮೂಲಿ.ಆದರೆ ಡೆತ್ ಓವರ್ ಬ್ಯಾಟಿಂಗ್ ಬೋನಸ್ ಆಗಿದೆ. ಟಾಪ್ ಆರ್ಡರ್ ಮತ್ತು ಮಿಡಲ್ ಆರ್ಡರ್ ಮಿಂಚಿದರೆ ಡೆತ್ ಓವರುಗಳಲ್ಲಿ ದಿನೇಶ್ ಕಾರ್ತಿಕ್ ಮತ್ತು ಶಹಬಾಸ್ ಅಹ್ಮದ್ ಪಂದ್ಯವನ್ನು ಎಲ್ಲಿಗೆ ಬೇಕಾದರೆ ಕೊಂಡೊಂಯ್ಯಬಲ್ಲರು. ಹೀಗಾಗಿ ಅಗ್ರ ಬ್ಯಾಟರ್ಗಳಿಂದ ದೊಡ್ಡ ಕಾಣಿಕೆ ಬೇಕೇ ಬೇಕು.
ಬೌಲಿಂಗ್ ಪ್ಲಾನ್:
ಲಖನೌ ತಂಡದ ಟಾಪ್ ಆರ್ಡರ್ ಬ್ಯಾಟಿಂಗ್ ಮಾತ್ರ ಬಲಿಷ್ಠ. ಹೀಗಾಗಿ ರಾಹುಲ್, ಡಿ ಕಾಕ್ ಮತ್ತು ಹೂಡ ಈ ಮೂರು ವಿಕೆಟ್ ಬೇಗನೆ ಪಡೆಯಬೇಕು. ಅದಕ್ಕಾಗಿ ಜೋಶ್ ಹ್ಯಾಜಲ್ವುಡ್ ಮತ್ತು ವನಿಂದು ಹಸರಂಗ ಇವರನ್ನು ಬೇಗನೆ ಬೌಲಿಂಗ್ ಮಾಡಿಸಿ, ವಿಕೆಟ್ ಕೀಳಬೇಕು. ಹಾಗಂತ ಟಾಪ್ ಆರ್ಡರ್ ಬ್ಯಾಟರ್ ಗಳನ್ನು ಔಟ್ ಮಾಡಿದ ಮೇಲೂ ಸಂಭ್ರಮಿಸುವಂತಿಲ್ಲ. ಯಾಕಂದರೆ ಕೃನಾಲಲ್, ಬಧೋನಿ ಮತ್ತು ಸ್ಟೋಯ್ನಿಸ್ ತಾಕತ್ತು ಕಡಿಮೆ ಇಲ್ಲ.
ಆತ್ಮವಿಶ್ವಾಸ ಮತ್ತು ಟಾಸ್:
ಇವೆರಡರ ಕಡೆಗೆ ಆರ್ಸಿಬಿ ಹೆಚ್ಚು ಒತ್ತು ಕೊಡಬೇಕು. ಆತ್ಮವಿಶ್ವಾಸದಿಂದ ಮೈದಾನಕ್ಕಿಳಿದರೆ ಅರ್ಧ ಮ್ಯಾಚ್ ಗೆದ್ದಂತೆ. ಲೀಗ್ನಲ್ಲಿ ಅನುಭವಿಸಿದ ವೈಫಲ್ಯದ ಬಗ್ಗೆ ಮರೆತು ಹೊರ ಹೊಸ ಪಂದ್ಯವನ್ನು ಆಡಲು ಸಜ್ಜಾಗಬೇಕಿದೆ. ಕೊಲ್ಕತ್ತಾದಲ್ಲಿ ಟಾಸ್ ಗೆದ್ದವರು ಫೀಲ್ಡಿಂಗ್ ಮಾಡುತ್ತಿರುವುದು ಸಾಮಾನ್ಯ ಹೀಗಾಗಿ ಒಂದು ಕಣ್ಣು ಇದರ ಮೇಲೂ ಇರಬೇಕು. ಒಟ್ಟಿನಲ್ಲಿ ಫರ್ಫೆಕ್ಟ್ ಮ್ಯಾಚ್ ಆಡಲು ಆರ್ಸಿಬಿ ತಯಾರಿ ಮಾಡಿಕೊಂಡರೆ ಮಾತ್ರ ಎದುರಾಳಿಯನ್ನು ಕಟ್ಟಿಹಾಕಿ ಕ್ವಾಲಿಫೈಯರ್-2ಕ್ಕೆ ಎಂಟ್ರಿ ಕೊಡಬಹುದು.