ಐಪಿಎಲ್ನಲ್ಲಿ ಸೂಪರ್ ಶನಿವಾರದ ಸೆಣಸಾಟ ಹೈಲೈಟ್ ಆಗುತ್ತಿದೆ. ಟೂರ್ನಿಯಲ್ಲಿ ಗೆಲುವೇ ಕಾಣದ ತಂಡಗಳು ಈಗ ಅಖಾಡಕ್ಕೆ ಇಳಿಯುತ್ತಿವೆ. ಒಂದು ಪಂದ್ಯವನ್ನಾದರೂ ಗೆದ್ದು ಹಳೆಯ ಸೋಲುಗಳನ್ನು ಮರೆಯಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ಸಿದ್ಧತೆ ಮಾಡಿಕೊಳ್ಳುತ್ತಿವೆ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಸೋತವರ ನಡುವೆ ನಡೆಯುವ ಕದನ ತೀವ್ರ ಕುತೂಹಲ ಕೆರಳಿಸಿದೆ.
ಚೆನ್ನೈ ಚಿಂತೆ
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಯಾವುದೂ ಕೈ ಹಿಡಿಯುತ್ತಿಲ್ಲ. ಆದರೂ ಟೂರ್ನಿಯಲ್ಲಿ ಸ್ಟ್ರಾಂಗ್ ಕಂ ಬ್ಯಾಕ್ ನಿರೀಕ್ಷೆ ಇದೆ. ರುತುರಾಜ್ ಗಾಯಕ್ವಾಡ್ 3 ಪಂದ್ಯಗಳಲ್ಲಿ ವೈಫಲ್ಯ ಕಂಡರೂ ಭರವಸೆ ಇದೆ. ರಾಬಿನ್ ಉತ್ತಪ್ಪ ಮತ್ತೊಮ್ಮೆ ಮಿಂಚು ಹರಿಸುವ ನಿರೀಕ್ಷೆ ಇದೆ. ಮೊಯಿನ್ ಅಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಕಮಾನ್ ಮಾಡೋದು ಬಾಕಿ ಇದೆ. ಅಂಬಟಿ ರಾಯುಡು ಹಳೆಯ ಟಚ್ ಮರೆತಿದ್ದರೂ ತಂಡಕ್ಕೆ ಬೇಕೇ ಬೇಕು. ಜಡೇಜಾ, ಧೋನಿ ಮತ್ತು ಬ್ರಾವೋ ಇನ್ನಿಂಗ್ಸ್ ಫಿನಿಷ್ ಮಾಡಿದರೆ ಸಂಕಷ್ಟ ದೂರ. ಪ್ರಿಟೋರಿಯಸ್ ಕೂಡ ಬಿಗ್ ಹಿಟ್ ಮಾಡಬಲ್ಲರು. ಮುಕೇಶ್ ಚೌಧರಿ ಬದಲು ಅಂಡರ್ 19 ತಂಡದಲ್ಲಿದ್ದ ಆಲ್ರೌಂಡರ್ ರಾಜ್ ವರ್ಧನ್ ಹಂಗೇರ್ಕರ್ ಸ್ಥಾನ ಪಡೆಯಬಹುದು. ಕ್ರಿಸ್ ಜೋರ್ಡಾನ್ ಮತ್ತು ಶಿವಂ ದುಬೆ ಸಿಎಸ್ಕೆ ತಂಡದ ಕೀ ಪ್ಲೇಯರ್ಸ್.
ಬೌಲಿಂಗ್ ಲೆಕ್ಕದಲ್ಲೇ ಹಿಂದೆ ಬಿದ್ದಿರುವ ಸಿಎಸ್ಕೆ ಕ್ರಿಸ್ ಜೊರ್ಡಾನ್ ಮತ್ತು ಹಂಗರ್ಗೇಕರ್ ರಿಂದ ಬೌಲಿಂಗ್ ಆರಂಭಿಸಬಹುದು. ಮೊಯಿನ್ ಅಲಿಯನ್ನು ಬಳಸಿಕೊಳ್ಳಲೇಕು. ಜಡೇಜಾ ಮಿಡಲ್ ಓವರ್ನಲ್ಲಿ ಕಡಿವಾಣ ಹಾಕಬಹುದು. ಪ್ರಿಟೋರಿಯಸ್ ಮತ್ತು ಬ್ರಾವೋ ಡೆತ್ನಲ್ಲಿ ಬೌಲಿಂಗ್ ಮಾಡಿದರೆ ರನ್ ಹರಿವನ್ನು ಕಂಟ್ರೋಲ್ ಮಾಡಬಹುದು.
ಸನ್”ರೈಸ್” ಆಸೆ
ಆಡಿರುವ 2 ಪಂದ್ಯಗಳನ್ನೂ ಕಳೆದುಕೊಂಡಿರುವ ಸನ್ ರೈಸರ್ಸ್ ಸೋಲಿನ ಸರಪಳಿಯಿಂದ ಹೊರಬರುವ ಯೋಚನೆಯಲ್ಲಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಖಚಿತ. ಕೇನ್ ವಿಲಿಯಮ್ಸನ್ ಫಾರ್ಮ್ ಕಂಡುಕೊಳ್ಳಬೇಕಿದೆ. ಅಭಿಷೇಕ್ ಶರ್ಮಾ ಬದಲು ಪ್ರಿಯಂ ಗಾರ್ಗ್ ಇನ್ನಿಂಗ್ಸ್ ಆರಂಭಿಸಬಹುದು. ರಾಹುಲ್ ತ್ರಿಪಾಠಿ ಮತ್ತು ನಿಕೋಲಸ್ ಪೂರನ್ ಕ್ರೀಸ್ನಲ್ಲಿ ಇದ್ದಷ್ಟು ಹೊತ್ತು ಡೇಂಜರಸ್. ಏಡಿಯನ್ ಮಾರ್ಕ್ ರಾಂ ಮತ್ತುಗ್ಲೆನ್ ಫಿಲಿಪ್ಸ್ ತಂಡದ ಬ್ಯಾಟಿಂಗ್ ಬಲ ಹೆಚ್ಚು ಮಾಡಬಹುದು. ಶ್ರೇಯಸ್ ಗೋಪಾಲ್ ಮತ್ತು ವಾಷಿಂಗ್ಟನ್ ಸುಂದರ್ ಆಲ್ರೌಂಡರ್ ಪಾತ್ರ ನಿಭಾಯಿಸಬೇಕು. ಭುವನೇಶ್ವರ್, ರೊಮರಿಯೊ ಶೆಫರ್ಡ್ ಮತ್ತು ಟಿ ನಟರಾಜನ್ ಸ್ಪೆಷಲಿಸ್ಟ್ ಬೌಲರ್ಗಳು.
ಪಿಚ್ & ಕಂಡೀಷನ್:
ಡಿ.ವೈ. ಪಾಟೀಲ್ ಕ್ರೀಡಾಂಗಣದ ಬಗ್ಗೆ ನಿಖರವಾಗಿ ಏನೂ ಹೇಳುವ ಹಾಗಿಲ್ಲ. ಕೆಲ ಪಂದ್ಯಗಳಲ್ಲಿ ಬೌಲರ್ಗಳು ಮಿಂಚಿದರೆ, ಇನ್ನು ಕೆಲ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳದ್ದೇ ಕಾರುಬಾರು. ಆದರೆ ಪಂದ್ಯದ ಕೊನೆಯ ಅವಧಿಯಲ್ಲಿ ಬೀಳುವ ಮಂಜು ಪಂದ್ಯದ ಫಲಿತಾಂಶ ಬದಲಿಸುತ್ತಿದೆ.