ಎರಡೂ ತಂಡಗಳಲ್ಲೂ ಸಿಕ್ಸರ್ ಹಿಟ್ಟರ್ಗಳಿಗೆ ಕೊರತೆ ಇಲ್ಲ. ಹೇಳಿಕೊಳ್ಳುವಂತಹ ಬೌಲಿಂಗ್ ಲೈನ್ ಅಪ್ ಕೂಡ ಇಲ್ಲ. ಮೇಲಾಗಿ ಬೌಂಡರಿ, ಸಿಕ್ಸರ್ಗಳ ಸ್ವರ್ಗ ಬ್ರೆಬೊರ್ನ್ನಲ್ಲಿ ಪಂದ್ಯಕ್ಕೆ ಅಖಾಡ ಫಿಕ್ಸ್ ಆಗಿದೆ. ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೋರಾಟದ ಲೆಕ್ಕಾಚಾರ ಶುರುವಾಗಿದೆ.
ಚೆನ್ನೈ ತಂಡಕ್ಕೆ ಈ ಬಾರಿಯ ಐಪಿಎಲ್ನಲ್ಲಿ ಜಯದ ರುಚಿ ಸಿಕ್ಕಿಲ್ಲ. ಕೆಕೆಆರ್ ಮತ್ತು ಲಖನೌ ವಿರುದ್ಧದ ಪಂದ್ಯದಲ್ಲಿ ಕೊನೆಯ ತನಕ ಹೋರಾಡಿ ಸೋತುತ್ತು. ಆದರೆ ಹಾಲಿ ಚಾಂಪಿಯನ್ ತಂಡ ಸುಮ್ಮನ್ಎ ಕುಳಿತುಕೊಳ್ಳುವುದಿಲ್ಲ. ತಂಡದಲ್ಲಿ ಬದಲಾವಣೆ ಮಾಡಿಕೊಂಡು ಜಯದ ಲೆಕ್ಕಾಚಾರ ಮಾಡುವುದು ಖಚಿತ.
ಕಳೆದ ಬಾರಿಯ ಆರೇಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ರನ್ ಬೇಟe ಆರಂಭಿಸಿಲ್ಲ ಅನ್ನುವುದು ಸಿಎಸ್ಕೆಯ ಚಿಂತೆ. ಆದರೆ ರಾಬಿನ್ ಉತ್ತಪ್ಪ ಡೇಂಜರಸ್ ಆಗಿ ಆಡುತ್ತಿದ್ದಾರೆ. ಮೊಯಿನ್ ಅಲಿಯ ಬ್ಯಾಟಿಂಗ್ ಬಲ ಸಿಕ್ಕಿದೆ. ಶಿವಂ ದುಬೆ ಭಡ್ತಿ ಪಡೆದು ಬಂದು ಶಕ್ತಿ ತೋರಿಸಿದ್ದಾರೆ. ಅಂಬಟಿ ರಾಯುಡು ಸಂಕಷ್ಟದಲ್ಲಿ ಕೈ ಹಿಡಿಯುವ ಆಟಗಾರ. ಜಡೇಜಾ. ಧೋನಿ, ಬ್ರಾವೋ ಮತ್ತು ಪ್ರಿಟೋರಿಯಸ್ ಫಿನಿಷಿಂಗ್ ಟಚ್ ಕೊಡಲು ಸಿದ್ಧವಾಗಿದ್ದಾರೆ.
ಬೌಲಿಂಗ್ ಕೊಂಚ ವೀಕ್. ಹೀಗಾಗಿ ಫಿಟ್ ಆಗಿರುವ ಆ್ಯಡಂ ಮಿಲ್ನೆ ತುಷಾರ್ ದೇಶಪಾಂಡೆ ಜಾಗಕ್ಕೆ ಬರಬಹುದು. ರಾಜ್ವರ್ಧನ್ ಹಂಗೇರ್ಕರ್ ಮುಕೇಶ್ ಚೌಧರಿ ಜಾಗದಲ್ಲಿ ಆಡಿದರೆ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಡೆಪ್ತ್ ಹೆಚ್ಚುತ್ತದೆ. ಬ್ರಾವೋ ಮತ್ತು ಪ್ರಿಟೋರಿಯಸ್ ಬೌಲಿಂಗ್ ಶಕ್ತಿ ತೋರಿಸಿದ್ದಾರೆ. ಮೊಯಿನ್ ಅಲಿ ಮತ್ತು ರವೀಂದ್ರ ಜಡೇಜಾ ಹೆಚ್ಚು ಬೌಲಿಂಗ್ ಮಾಡಿಲ್ಲ. ಆದರೆ ಅವರ ಶಕ್ತಿ ಬಗ್ಗೆ ಸಂಶಯವಿಲ್ಲ.
ಇನ್ನು ಪಂಜಾಬ್ ಆರ್ಸಿಬಿ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡಿ ಪಂದ್ಯ ಸೋತಿತ್ತು. ಕೆಕೆಆರ್ ವಿರುದ್ಧ ಕಳಪೆ ಆಟ ಆಡಿತ್ತು. ಹೀಗಾಗಿ ತಂಡ ಹೇಗೆ ಆಡುತ್ತದೆ ಅನ್ನುವ ಬಗ್ಗೆ ನಂಬಿಕೆ ಇಲ್ಲ. ಆದರೆ ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ ಆಟ ಬೌಲರ್ಗಳಿಗೆ ತಲೆನೋವು ಗ್ಯಾರೆಂಟಿ. ರಾಜ್ಭಾವಾ, ಶಾರೂಖ್ ಖಾನ್ ಮತ್ತು ಓಡಿನ್ ಸ್ಮಿತ್ ಬಿಗ್ ಹಿಟ್ಟಿಂಗ್ಗೆ ಫೇಮಸ್. ಲಿವಿಂಗ್ ಸ್ಟೋನ್ ಆಟವೂ ಬ್ಯಾಲೆನ್ಸ್ ಇದೆ. ಬೌಲಿಂಗ್ನಲ್ಲಿ ರಬಾಡಾ, ಅರ್ಶದೀಪ್ ಮತ್ತು ರಾಹುಲ್ ಚಹರ್ ಮೇಲೆ ಹೆಚ್ಚು ನಂಬಿಕೆ. ಬ್ರಾರ್ ಮತ್ತು ಇತರೆ ಆಲ್ರೌಂಡರ್ಗಳು ಕೈ ಜೋಡಿಸಿದರೆ ಬೌಲಿಂಗ್ ವಿಭಾಗ ಬಲಿಷ್ಠ ವಾಗುತ್ತದೆ.
ಮುಂಬೈನಲ್ಲಿ ರಾತ್ರಿ 8 ಗಂಟೆಯ ನಂತರ ಬೀಳುವ ಮಂಜು ಪಂದ್ಯದ ಫಲಿತಾಂಶವನ್ನು ನಿರ್ಧಾರ ಮಾಡುತ್ತಿದೆ. ಹೀಗಾಗಿ ಟಾಸ್ ಗೆದ್ದವರು ಪಂದ್ಯ ಗೆಲ್ಲುವುದು ಸಾಮಾನ್ಯವಾಗಿದೆ.