IPL Mega Auction 2022-ಅಂದು ಬ್ಯಾಟಿಂಗ್ ಮಾಡುವಾಗ ನಡುಗುತ್ತಿದ್ದ ಕೈಗೆ ಈಗ 2.6 ಕೋಟಿ ರೂಪಾಯಿ..!
![IPL Mega Auction 2022- ಅಂದು ಬ್ಯಾಟಿಂಗ್ ಮಾಡುವಾಗ ನಡುಗುತ್ತಿದ್ದ ಕೈಗೆ ಈಗ 2.6 ಕೋಟಿ ರೂಪಾಯಿ..! 3 Abhinav Manohar manish pandey sports karnataka ipl 2022](http://sportskarnataka.com/wp-content/uploads/2022/02/abhinav-and-manish-pandey.jpg)
ಇದು ಸುಮಾರು 20 ವIrfan Saitರ್ಷಗಳ ಹಿಂದಿನ ನೈಜ ಘಟನೆ.. ಬೆಂಗಳೂರಿನ ಕೆಐಒಸಿ ಅಕಾಡೆಮಿಯಲ್ಲಿ ರೂಪುಗೊಂಡ ಕ್ರಿಕೆಟ್ ಆಟಗಾರರನ ಕಥೆ. ಆ ಬಾಲಕನಿಗೆ ಕ್ರಿಕೆಟ್ ಆಟದ ಬಗ್ಗೆ ಒಂಚೂರು ಪ್ರೀತಿನೂ ಇರಲಿಲ್ಲ. ಆಸಕ್ತಿನೂ ಇರಲಿಲ್ಲ. ಅಪ್ಪನ ಒತ್ತಾಯಕ್ಕೆ ಕ್ರಿಕೆಟ್ ಅಕಾಡೆಮಿ ಸೇರಿಕೊಂಡು ಇಂದು ಹೊಡಿಬಡಿ ಆಟಗಾರನಾಗಿದ್ದಾನೆ.
ಅಷ್ಟೇ ಅಲ್ಲ, ಬ್ಯಾಟಿಂಗ್ ಮಾಡಲು ಹೆದರುತ್ತಿದ್ದ ಹುಡುಗ ಇಂದು ಕೋಟಿ ಕೋಟಿ ಒಡೆಯನಾಗಿದ್ದಾನೆ. ಬೌಲರ್ ಗಳನ್ನು ಕಂಡಾಗ ಬ್ಯಾಟ್ ಹಿಡಿದ ಕೈ ನಡುಗುತ್ತಿತ್ತು. ಆದ್ರೆ ಇಂದು ಅದೇ ಕೈಯಲ್ಲಿ ಬ್ಯಾಟ್ ಹಿಡಿದು ಆರಾಮವಾಗಿ ಚೆಂಡನ್ನು ಸಿಕ್ಸರ್ ಗಟ್ಟುತ್ತಿದ್ದಾನೆ.
ಅಬ್ಬಾ ಈ ಹುಡುಗನ ಸಾಮಥ್ರ್ಯ ಈಗ ಫ್ರಾಂಚೈಸಿಗಳ ಕಣ್ಣಿಗೆ ಬಿದ್ದಿದೆ. ಜೊತೆ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 2.6 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾನೆ.
ಹೌದು, ಈ ಕಥೆಯ ಪಾತ್ರಧಾರಿಯ ಹೆಸರು ಅಭಿನವ್ ಮನೋಹರ್. ವಯಸ್ಸು 26.
ಈಗಾಗಲೇ ಕೆಪಿಎಲ್ ಮತ್ತು ರಾಜ್ಯ ಕ್ರಿಕೆಟ್ ನಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಅಭಿನವ್ ಮನೋಹರ್ ಐಪಿಎಲ್ ಫ್ರಾಂಚೈಸಿಗಳಿಗೆ ಬೇಡಿಕೆಯ ಆಟಗಾರನಾಗಿದ್ದಾನೆ.
ಅಭಿನವ್ ಮನೋಹರ್ ಕ್ರಿಕೆಟ್ ಜರ್ನಿಯ ಸೂತ್ರಧಾರಿಯ ಹೆಸರು ಮನೋಹರ್. ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಫುಟ್ ವೇರ್ ಮಾಲೀಕ. ನಿರ್ದೇಶನ ನೀಡಿದ್ದು ಕೆಐಒಸಿ ಅಕಾಡೆಮಿಯ ಮುಖ್ಯಸ್ಥ ಇರ್ಫಾನ್ ಸೇಠ್.
ನಿಜಿ, ಮನೋಹರ್ ಮತ್ತು ಇರ್ಫಾನ್ ಸೇಠ್ ಅವರು ಸ್ನೇಹಿತರಾಗಿದ್ದರು. ಮನೋಹರ್ ಫುಟ್ ವೇರ್ ಮಾಲೀಕ. ಇರ್ಫಾನ್ ಸೇಠ್ ಅವರು ಕ್ರಿಕೆಟ್ ಅಕಾಡೆಮಿಯ ಜೊತೆ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಬಟ್ಟೆ ಅಂಗಡಿಯ ಮಾಲೀಕರೂ ಆಗಿದ್ದರು. Abhinav Manohar scared of facing the bowlers when he first came to my academy- coach Irfan Sait
![IPL Mega Auction 2022- ಅಂದು ಬ್ಯಾಟಿಂಗ್ ಮಾಡುವಾಗ ನಡುಗುತ್ತಿದ್ದ ಕೈಗೆ ಈಗ 2.6 ಕೋಟಿ ರೂಪಾಯಿ..! 4 Abhinav Manohar sports karnataka ipl 2022](http://sportskarnataka.com/wp-content/uploads/2022/02/abhinav-2.jpg)
ಹೀಗೆ ಒಂದು ದಿನ ಇರ್ಫಾನ್ ಸೇಠ್ ಬಳಿ ತನ್ನ ಮಗನನ್ನು ನಿಮ್ಮ ಕ್ರಿಕೆಟ್ ಅಕಾಡೆಮಿಗೆ ಸೇರಿಸಿಕೊಳ್ಳಿ ಅಂದ್ರು. ಗೆಳೆಯನ ಮಗನನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುವುದು ಹೇಗೆ ? ಸರಿ ಅಂತ ಒಪ್ಪಿಕೊಂಡ್ರು.
ಆದ್ರೆ ಅಲ್ಲಿ ಒಂದು ಸಮಸ್ಯೆ ಎದುರಾಯ್ತು. ಅಪ್ಪ ಮನೋಹರ್ ಗೆ ಮಗನನ್ನು ಕ್ರಿಕೆಟ್ ಆಟಗಾರರನ್ನಾಗಿ ಮಾಡಬೇಕು ಎಂಬ ಕನಸು. ಅದಕ್ಕೆ ತಕ್ಕಂತೆ ಗೆಳೆಯನ ಬೆಂಬಲವೂ ಇದೆ. ಆದ್ರೆ ಮಗ ಅಭಿನವ್ ಗೆ ಕ್ರಿಕೆಟ್ ಮೇಲೆ ಆಸಕ್ತಿಯೂ ಇರಲಿಲ್ಲ. ಪ್ರೀತಿಯೂ ಇರಲಿಲ್ಲ. ಆದ್ರೂ ಪ್ರತಿ ದಿನ ಮನೋಹರ್ ಅವರು ಸಂಜೆ ಅಭಿನವ್ ನನ್ನು ಕ್ರಿಕೆಟ್ ತರಬೇತಿಗೆ ಕರೆದುಕೊಂಡು ಬರುತ್ತಿದ್ದರು.
ಬಹುಶಃ ಅಭಿನವ್ ಗೆ ಆರು ವರ್ಷ. ನನಗೆ ಇನ್ನೂ ನೆನಪಿದೆ. ಆರಂಭದ ದಿನಗಳಲ್ಲಿ ಅಭಿನವ್ ಬ್ಯಾಟಿಂಗ್ ಮಾಡಲು ಹೆದರುತ್ತಿದ್ದ. ಬೌಲರ್ ಗಳನ್ನು ಕಂಡಾಗ ಭಯಪಡುತ್ತಿದ್ದ. ಇÀದೇ ವೇಳೆ ಅಭಿನವ್ ಸಂಬಂಧಿ ಶರಣ್ಯ ಕೂಡ ನಮ್ಮ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಕ್ರಮೇಣ ಕ್ರಿಕೆಟ್ ಆಟದ ಮೇಲೆ ಅಭಿನವ್ ಆಸಕ್ತಿ ತೋರುತ್ತಿದ್ದ. ಅದು ಹೇಗೆ ಅಂದ್ರೆ ಪ್ರತಿ ದಿನ ಸಂಜೆ ಅಭ್ಯಾಸ ಮಾಡಲು ಬರುತ್ತಿದ್ದ. ಹೋಗುತ್ತಿದ್ದ. ಅದಕ್ಕಿಂತ ಹೆಚ್ಚೇನೂ ಇರಲಿಲ್ಲ ಅಂತ ಹೇಳ್ತಾರೆ ಇರ್ಫಾನ್ ಸೇಠ್.
ಆದ್ರೆ 2006ರಲ್ಲಿ ಎಲ್ಲವೂ ಬದಲಾಗಿ ಹೋಯ್ತು. ಹೈದ್ರಬಾದ್ 14 ವಯೋಮಿತಿ ತಂಡದ ವಿರುದ್ದ ನಮ್ಮ ಅಕಾಡೆಮಿಯು ಅಭ್ಯಾಸ ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ ಅಭಿನವ್ ಕೂಡ ಆಡಿದ್ದ. ಈ ಪಂದ್ಯದಲ್ಲಿ ಅಭಿನವ್ ಹಣೆಗೆ ಏಟು ಬಿದ್ದಿತ್ತು. ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದೇವು. ಕೆಲವು ಸ್ಟಿಚ್ ಗಳನ್ನು ಹಾಕಲಾಗಿತ್ತು. ಆಗ ನಾನು ಅಂದುಕೊಂಡಿದ್ದೆ.. ಈತ ಮತ್ತೆ ಕ್ರಿಕೆಟ್ ಆಡಲು ಬರುವುದಿಲ್ಲ ಎಂದು. ಆದ್ರೆ ಮರುದಿನ ನನ್ನ ಊಹೆ ತಪ್ಪಾಗಿ ಹೋಯ್ತು. ಅಲ್ಲದೆ ಬ್ಯಾಟಿಂಗ್ ಮುಂದುವರಿಸಿದ್ದ ಅಭಿನವ್ ಶತಕ ಕೂಡ ದಾಖಲಿಸಿದ್ದ. ಇದು ಅಭಿನವ್ ನ ಕ್ರಿಕೆಟ್ ಜರ್ನಿಯ ಟರ್ನಿಂಗ್ ಪಾಯಿಂಟ್ ಅಂತಾರೆ ಇರ್ಫಾನ್ ಸೇಠ್.
![IPL Mega Auction 2022- ಅಂದು ಬ್ಯಾಟಿಂಗ್ ಮಾಡುವಾಗ ನಡುಗುತ್ತಿದ್ದ ಕೈಗೆ ಈಗ 2.6 ಕೋಟಿ ರೂಪಾಯಿ..! 5 Abhinav Manohar sports karnataka ipl 2022](http://sportskarnataka.com/wp-content/uploads/2022/02/abhinav.jpg)