ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ತಾರಾ ಕುಸ್ತಿಪಟುಗಳಾದ ವಿನೀಶ್ ಪೋಗಟ್, ಸಾಕ್ಷಿ ಮಲ್ಲಿಕ್, ಬಜ ರಂಗ್ ಪುನಿಯಾ ಸೇರಿ ಹಲವಾರು ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ತೆಗದುಕೊಂಡ ಘಟನೆ ನಡೆದಿದೆ. ಬಂಧಿಸಿದ ಘಟನೆಯನ್ನು ಕ್ರೀಡಾಪಟಗಳು ಮತ್ತು ರಾಜಕೀಯ ನಾಯಕರು ಖಂಡಿಸಿದ್ದಾರೆ.
ರೆಸ್ಲಿಂಗ್ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಮಹಿಳೆಯರ ಮಹಾಪಂಚಾಯತ್ ಯೋಜನೆಯಂತೆ ಹೊಸ ಸಂಸತ್ ನೂತನ ಕಟ್ಟದತ್ತ ನುಗ್ಗಲು ಯತ್ನಿಸಿದರು.
ಹೊಸ ಸಂಸತ್ ಬಳಿ ಹೋಗದಂತೆ ಪೊಲೀಸರು ಮೊದಲೇ ಕುಸ್ತಿಪಟುಗಳಿಗೆ ಎಚ್ಚರಿಕೆ ನೀಡಿದ್ದರು.
ಜಂತರ್ ಮಂತರ್ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಪೊಲೀಸರು ಮತ್ತು ಕುಸ್ತಿಪಟುಗಳು ನೂಕಾಟ ನಡೆಯಿತು. ವಿನೀಶ್ ಪೋಗಟ್, ಸಹೋದರಿ ಸಂಗೀತಾ ಪೋಗಟ್ ಮತ್ತು ಸಾಕ್ಷಿ ಮಲ್ಲಿಕ್ ಬ್ಯಾರಿಕೇಡ್ಗಳನ್ನು ಮುರಿದು ನುಗ್ಗಲು ಯತ್ನಿಸಿದರು.
ಇದನ್ನು ನೋಡಲು ನನಗೆ ನೋವಾಗಿದೆ. ಇದಕ್ಕಿಂತ ಪ್ರತಿಭಟಿಸಲು ಬೇರೆ ಮಾರ್ಗವಿತ್ತು ಎಂದು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಹೇಳಿದ್ದಾರೆ.
ವಿಡಿಯೋ ಒಂದರಲ್ಲಿ ವಿನೀಶ್ ಮತ್ತು ಸಂಗೀತಾ ಅವರನ್ನು ಪೊಲೀಸ್ ಅಧಿಕಾರಿಗಳು ತಳ್ಳುವ ವಿಡಿಯೋ ವೈರಲ್ ಆಗಿದೆ.
ಸಾಕ್ಷಿ ಮಲ್ಲಿಕ್, ವಿನೀಶ್ ಪೋಗಟ್ ಮತ್ತು ಇತೆರ ಕುಸ್ತಿಪಟುಗಳನ್ನು ನಡೆಸಿಕೊಂಡ ರೀತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.