ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಮೇ 21ರೊಳಗೆ ಬಂಧಸದಿದ್ದರೆ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ 31 ಸದಸ್ಯರನ್ನೊಳಗೊಂಡ ಸಮಿತಿ ಕುಸ್ತಿಪಟುಗಳಿಗೆ ಸಲಹೆ ನೀಡಿದೆ. ನಮ್ಮ ಪ್ರತಿಭಟನೆಯನ್ನು ರೈತರು ಹೈಜಾಕ್ ಮಾಡಿಲ್ಲ ಎಂದು ಮಹಿಳಾ ಕುಸ್ತಿಪಟು ವಿನೀಶ್ ಪೋಗಟ್ ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟೀಕಾಯತ್, ಖಾಪ್ ಮಾಹಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಮತ್ತು ಸಂಕ್ಯುತ್ ಕಿಸಾನ್ ಮೊರ್ಚಾದ ಬಾಲ್ದೆವ್ ಸಿಂಗ್ ಸಿರ್ಸಾ ಮಾತನಾಡಿದರು.
ಖಾಪ್ ಪಂಚಾಯತ್ ಮತ್ತು ಎಸ್ಕೆಎಂ ಸಭೆಯಲ್ಲಿ ಭಾಗವಹಿಸಿದ್ದೆವು. ಪ್ರತಿ ದಿನ ಪ್ರತಿಭಟನಾ ಸ್ಥಳಕ್ಕೆ ಬರಲು ನಿರ್ದರಿಸಿದ್ದೇವೆ. ಹಗಲಿನ ಹೊತ್ತು ಇದ್ದು ಸಂಜೆ ವೇಳೆಗೆ ವಾಪಸ್ ಬರಲಿದ್ದಾರೆ.
ಮೇ21ಕ್ಕೆ ಸಭೆ ನಿಗದಿಪಡಿಸಲಾಗಿದೆ. ಕುಸ್ತಿಪಟುಗಳ ಸಮಿತಿ ಪ್ರತಿಭಟನಾನಿರತರರ ಜವಾಬ್ದಾರಿ ತೆಗೆದುಕೊಳ್ಳಲಿದೆ.ಸರ್ಕಾರ ನಿರ್ಧಾರ ಹೊರಡಿಸದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ತುರ್ತು ಸಂದರ್ಭಗಳು ಬಂದರೆ ಅಥವಾ ಕುಸ್ತಿಪಟುಗಳಿಗೆ ತೊಂದರೆ ಆದರೆ ಇಡೀ ದೇಶ ಅವರೊಂದಿಗೆ ನಿಲ್ಲಲಿದೆ ಎಂದರು.
ಕುಸ್ತಿಪಟುಗಳಿಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತೇವೆ ಎಂದು ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟೀಕಾಯತ್ ಹೇಳಿದರು.