ಆಂಗ್ಲರ ನಾಡಲ್ಲಿ ಐತಿಹಾಸಿಕ ಏಕದಿನ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ವನಿತೆಯರ ಕ್ರಿಕೆಟ್ ತಂಡ ನಾಳೆಯಿಂದ ಏಷ್ಯಾ ಕಪ್ ಟೂರ್ನಿ ಆಡಲಿದ್ದಾರೆ.
ಬಾಂಗ್ಲಾದೇಶ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಶನಿವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಟಿ20 ಆವೃತ್ತಿಯಲ್ಲಿ ಉಪಖಂಡದಲ್ಲಿ ಹರ್ಮನ್ ಪ್ರೀತ್ ಪಡೆ ಒಳ್ಳೆಯ ಸಾಧನೆ ಮಾಡಿದೆ. ಹೀಗಾಗಿ ಭಾರತ ವನಿತೆಯರು ಏಷ್ಯಾಕಪ್ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.
ಕಳೆದ ಆವೃತ್ತಿ ಹೊರತುಪಡಿಸಿ 2004ರಿಂದ ಉಳಿದ ಎಲ್ಲಾ ನಾಲ್ಕು ಏಷ್ಯಾಕಪ್ಗಳನ್ನು ಭಾರತ ಗೆದ್ದುಕೊಂಡಿದೆ.(ಏಕದಿನ ಆವೃತ್ತಿ 2 ಟಿ20 ಆವೃತ್ತಿ).
2012ರಲ್ಲಿ ಏಷ್ಯಾಕಪ್ ಟೂರ್ನಿಯನ್ನು ಏಕದಿನ ಆವೃತ್ತಿಯಿಂದ ಟಿ20 ಆವೃತ್ತಿಗೆ ಬದಲಾಯಿಸಲಾಯಿತು. ಬದಲಾದ ಆವೃತ್ತಿಯಲ್ಲಿ ಭಾರತ ಎರಡು ಬಾರಿ ಗೆದ್ದಿದೆ. 2018ರ ಆವೃತ್ತಿಯಲ್ಲಿ ಬಾಂಗ್ಲಾದೇಶ ಚಾಮಪಿಯನ್ನಾಗಿ ಹೊರಹೊಮ್ಮಿತ್ತು.
ಕೊರೋನಾದಿಂದಾಗಿ 2020ರ ಆವೃತ್ತಿಯನ್ನು 2021ಕ್ಕೆ ಮುಂದೂಡಲ್ಪಟ್ಟಿತ್ತು.
ಸದ್ಯ ಭಾರತ ವನಿತೆಯರ ತಂಡದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಆದರೆ ಶೆಫಾಲಿ ವರ್ಮಾ, ಸಬ್ಯಿನೇನಿ ಮೇಘನಾ ಹಾಗೂ ಡಿ. ಹೇಮಲತಾ ಕಳಪೆ ಆಟವಾಡುತ್ತಿದ್ದಾರೆ.
ಗಾಯದಿಂದ ಹೊರಗುಳಿದಿದ್ದ ಜೆಮ್ಮಿಮಾ ರಾಡ್ರಿಗಸ್ ಮತ್ತು ವಿಕೆಟ್ ಕೀಪರ್ ರೀಚಾ ಘೋಷ್ ಮತ್ತೆ ತಂಡ ಸೇರಿಕೊಂಡಿದ್ದಾರೆ.
ರೇಣುಕಾ ಸಿಂಗ್ ಹಾಗೂ ರಾಧಾ ಯಾದವ್ ವೇಗಿಗಳಿದ್ದಾರೆ. ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮಾ ಸ್ಪಿನ್ನರ್ ಗಳಾಗಿದ್ದಾರೆ.