ಪಶ್ಚಿಮ ಬಂಗಾಳ ತಂಡ ರಣಜಿ ಟ್ರೋಫಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಪಂದ್ಯದ 5ನೇ ದಿನ ಜಾರ್ಖಂಡ್ ಬೌಲರ್ಗಳನ್ನು ಚೆನ್ನಾಗಿ ರುಬ್ಬಿದ ಪಶ್ಚಿಮ ಬಂಗಾಳ ಬ್ಯಾಟ್ಸ್ಮನ್ಗಳು ಮುನ್ನಡೆಯ ಅಂತರವನ್ನು ಹೆಚ್ಚಿಸಿದರು. ಫಲಿತಾಂಶ ಬಾರದೇ ಇದ್ದಿದ್ದರಿಂದ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಆಧಾರದಲ್ಲಿ ಪಶ್ಚಿಮ ಬಂಗಾಳ ತಂಡ ಸೆಮಿಫೈನಲ್ಗೆ ಎಂಟ್ರಿ ಪಡೆಯಿತು.
ಟಿಎಂಸಿ ಶಾಸಕನಾಗಿರುವ ಮನೋಜ್ ತಿವಾರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ಸಚಿವರು ಹೌದು. ಮೊದಲ ಇನ್ನಿಂಗ್ಸ್ನಲ್ಲಿ 73 ರನ್ಗಳಿಸಿದ್ದ ತಿವಾರಿ 2ನೇ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಮಿಂಚಿದರು. ತಿವಾರಿ 185 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 19 ಬೌಂಡರಿಗಳ ನೆರವಿನಿಂದ 136 ರನ್ ಸಿಡಿಸಿ ರನೌಟ್ ಆದರು. 2ನೆ ಇನ್ನಿಂಗ್ಸ್ನಲ್ಲಿ ಬಂಗಾಳ 7 ವಿಕೆಟ್ ಕಳೆದುಕೊಂಡು 318 ರನ್ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.
ಬಂಗಾಳ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಕಳೆದುಕೊಂಡು 737 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಜಾರ್ಖಂಡ್ ಮೊದಲ ಇನ್ನಿಂಗ್ಸ್ನಲ್ಲಿ 298 ರನ್ಗಳಿಗೆ ಆಲೌಟ್ ಆಗಿತ್ತು. ಜಾರ್ಖಂಡ್ಗೆ 2ನೇ ಇನ್ನಿಂಗ್ಸ್ನಲ್ಲಿ ದೊಡ್ಡ ಟಾರ್ಗೆಟ್ ಸಿಕ್ಕ ಕಾರಣ ಎರಡೂ ತಂಡಗಳ ನಾಯಕರು ಪಂದ್ಯ ಡ್ರಾ ಮಾಡಿಕೊಳ್ಳಲು ಒಪ್ಪಿದರು.