ವಿರಾಟ್ ಕೊಹ್ಲಿ ಪರ ಮದನ್ ಲಾಲ್ ಬ್ಯಾಟ್ Virat Kohli saaksha tv
ಏಕದಿನ ಕ್ರಿಕೆಟ್ ನ ನಾಯಕರಾಗಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರೋದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿ ಅವರಿಂದ ನಾಯಕತ್ವ ಕಿತ್ತುಕೊಂಡಿರುವ ಬಗ್ಗೆ ಭಾರತ ತಂಡದ ಮಾಜಿ ನಾಯಕ ಮದನ್ ಲಾಲ್ ಅಸಮಾಧಾನ ಹೊರ ಹಾಕಿದ್ದಾರೆ. ಬಿಸಿಸಿಐ ಆಯ್ಕೆಗಾರರು ತೆಗೆದುಕೊಂಡ ಈ ನಿರ್ಧಾರವನ್ನು ಕೊಹ್ಲಿ ವಿರೋಧಿಸಬಹುದಿತ್ತು ಎಂದು ಮದನ್ ಲಾಲ್ ಹೇಳಿದ್ದಾರೆ.
“ವಿರಾಟ್ ಕೊಹ್ಲಿ ಅವರನ್ನು ಆಯ್ಕೆಗಾರರು ಯಾಕೆ ವಜಾ ಮಾಡಿದ್ದಾರೋ ನನಗೆ ತಿಳಿಯುತ್ತಿಲ್ಲ. ಟೀಂ ಇಂಡಿಯಾಗೆ ಕೊಹ್ಲಿ ಹೆಚ್ಚು ಗೆಲುವುಗಳನ್ನು ತಂದುಕೊಡುತ್ತಿದ್ದರೇ ಅವರನ್ನ ಯಾಕೆ ವಜಾ ಮಾಡಬೇಕು..?
ಟಿ 20 ನಾಯಕತ್ವದಿಂದ ವಿರಾಟ್ ಏಕೆ ಕೆಳಗಿಳಿದರೋ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಕೊಹ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನತ್ತ ಹೆಚ್ಚು ಗಮನ ಹರಿಸಲು ಟಿ 20 ನಾಯಕತ್ವದಿಂದ ಕೆಳಗಿಳಿದರು. ಹೀಗಾಗಿ 2023ರ ಏಕದಿನ ವಿಶ್ವಕಪ್ ವರೆಗೆ ಕೊಹ್ಲಿ ನಾಯಕನಾಗಿ ಮುಂದುವರಿಯುತ್ತಾರೆ ಎಂದು ನಾನು ಭಾವಿಸಿದ್ದೆ. ಬಲಿಷ್ಠ ತಂಡವನ್ನು ಕಟ್ಟುವುದು ತುಂಬಾ ಕಷ್ಟ. ಆದರೆ ಆ ತಂಡವನ್ನು ನಾಶಪಡಿಸುವುದು ತುಂಬಾ ಸುಲಭ ಎಂದು ಆಯ್ಕೆ ಸಮಿತಿ ವಿರುದ್ಧ ಮದನ್ ಲಾಲ್ ಕಿಡಿಕಾರಿದ್ದಾರೆ.
ಇದೇ ವೇಳೆ ಏಕದಿನ ಮತ್ತು ಟಿ20 ಮಾದರಿಗಳಿಗೆ ಇಬ್ಬರು ವಿಭಿನ್ನ ನಾಯಕರನ್ನು ಹೊಂದಿರುವುದು ಗೊಂದಲಕ್ಕೆ ಕಾರಣವಾಗಿರುತ್ತೆ ಎಂಬ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿಕೆಗೆ ಮದನ್ ಲಾಲ್ ಟಾಂಗ್ ನೀಡಿದರು.