ಕಳಪೆ ಬೌಲಿಂಗ್ ಮಾಡಿದ ಕರ್ನಾಟಕ ತಂಡ ಅಸ್ಸಾಂ ವಿರುದ್ಧ ವಿಜಯ್ ಹಜಾರೆ ಟೂರ್ನಿಯಲ್ಲಿ 6 ವಿಕೆಟ್ಗಳಿಂದ ಸೋಲು ಕಂಡಿದೆ. ಇದರೊಂದಿಗೆ ಮಯಾಂಕ್ ಪಡೆ ಟೂರ್ನಿಯಲ್ಲಿ ಮೊದಲ ಸೋಲು ಕಂಡು ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಅಸ್ಸಾಂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಶನಿವಾರ ಕೋಲ್ಕತ್ತಾದ ಸಾಲ್ಟ್ ಲೇಕ್ ಮೈದಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಕಲೆ ಹಾಕಿತು. ಅಸ್ಸಾಂ ತಂಡ 48.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು.
ಅಸ್ಸಾಂ ಪರ ಸ್ವರೂಪಮ್ ಪುರ್ಕಾಯಸ್ತಾ ಅಜೇಯ 112 ರನ್, ಸಿಬ್ಸಂಕರ್ ರಾಯ್ ಅಜೇಯ 66, ರಾಹುಲ್ ಹಜರಿಕಾ 50 ರನ್ ಗಳಿಸಿದರು. ಕರ್ನಾಟಕ ಪರ ವೆಂಕಟೇಶ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಕರ್ನಾಟಕ ಪರ ನಿಕಿನ್ ಜೋಶ್ 100, ನಾಯಕ ಮಯಂಕ್ ಅಗರ್ವಲ್ 64, ಮನೀಶ್ ಪಾಂಡೆ ಅಜೇಯ 58 ರನ್ ಹೊಡೆದರು.