ವಿಜಯ್ ಹಜಾರೆ ಟ್ರೋಫಿ | ಕ್ವಾರ್ಟರ್ ಫೈನಲ್ ಗೆ ಕರ್ನಾಟಕ Vijay Hazare saaksha tv
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ತಲುಪಿದೆ.ರಾಜಸ್ಥಾನದ ವಿರುದ್ಧ ಜೈಪುರದಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ಬಳಕ 8 ವಿಕೆಟ್ ಗಳ ಜಯ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಬೌಲರ್ ಗಳ ಆರ್ಭಟಕ್ಕೆ ಬೆದರಿದ ರಾಜಸ್ಥಾನ್ 30ರ ಆಸುಪಾಸಿದ್ದಾಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.
ಈ ವೇಳೆ ಕ್ರೀಸ್ ಗೆ ಬಂದ ದೀಪಕ್ ಹೂಡಾ, ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದರು. ಹಾಗೇ ಶತಕದ ಸಂಭ್ರಮ ಆಚರಿಸಿಕೊಂಡರು.
ಸಮರ್ಪಿತ್ ಜೋಶಿ 33, ರವಿ ಬಿಷ್ಣೋಯ್ 17 ರನ್ ಗಳಿಸಿದರು. ಅಂತಿಮವಾಗಿ 41.4 ಓವರ್ ಗಳಲ್ಲಿ 199 ರನ್ ಗಳಿಗೆ ಆಲೌಟ್ ಆಯಿತು.
ಕರ್ನಾಟಕದ ಪರ ವೈಶಾಖ್ ವಿಜಯ್ ಕಮಾರ್ 22/4, ಕೆ ಗೌತಮ್ 61/2 ವಿಕೆಟ್ ಪಡೆದು ಮಿಂಚಿದರು.
ಗೆಲ್ಲಲು 200 ರನ್ ಗಳ ಸಾಧಾರಣ ಗುರಿ ಪಡೆದ ಕರ್ನಾಟಕ ತಂಡ 44ನೇ ಓವರ್ನಲ್ಲಿ 8 ವಿಕೆಟ್ ಕೈಲಿರುವಂತೆ ಪಂದ್ಯ ಗೆದ್ದಕೊಂಡರು. ಕೆ ಸಿದ್ಧಾರ್ಥ್ ಅಜೇಯ 85 ರನ್ ಗಳಿಸಿ ಗೆಲುವಿನ ಪ್ರಮುಖ ರೂವಾರಿಯಾದರು. ರವಿಕುಮಾರ್ ಸಮರ್ಥ್ 54 ಮತ್ತು ಮನೀಶ್ ಪಾಂಡೆ ಅಜೇಯ 52 ರನ್ ಗಳಿಸಿದರು.