ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ಗಳೆಂದೇ ಖ್ಯಾತಿ ಪಡೆದಿದ್ದ ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಶ್ರೀಲಂಕಾ ವಿರುದ್ಧದ ಸರಣಿಗೆ ತಂಡದಿಂದ ಹೊರಬಿದ್ದಿದ್ದಾರೆ. ಬಿಸಿಸಿಐ ರಹಾನೆ ಮತ್ತು ಪೂಜಾರಾ ಜಾಗಕ್ಕೆ ಭವಿಷ್ಯದ ಕ್ರಿಕೆಟರ್ಗಳನ್ನು ಹುಡುಕುತ್ತಿದೆ. ಪೂಜಾರಾ ಮತ್ತು ರಹಾನೆ ಜಾಗ ತುಂಬುವುದು ಕಷ್ಟದ ಮಾತೇ ಆಗಿದ್ದರೂ ಟೀಮ್ ಇಂಡಿಯಾದಲ್ಲಿ ಖಾಲಿ ಆಗಿರುವ 2 ಸ್ಥಾನಕ್ಕೆ ಮೂವರ ನಡುವೆ ಟಫ್ ಫೈಟ್ ನಡೆಯುತ್ತಿದೆ.
ಹನುಮ ವಿಹಾರಿ, ಶ್ರೇಯಸ್ ಅಯ್ಯರ್ ಮತ್ತು ಶುಬ್ಮನ್ ಗಿಲ್ ನಡುವೆ ಪೂಜಾರಾ ಮತ್ತು ರಹಾನೆ ಜಾಗ ಪಡೆಯಲು ತೀವ್ರ ಪೈಪೋಟಿ ಇದೆ. ಹನುಮ ವಿಹಾರಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಹನುಮ ವಿಹಾರಿ ಆಟವೂ ಟೆಸ್ಟ್ ಪಂದ್ಯಕ್ಕೆ ಸೂಕ್ತವಾಗಿದೆ. 11 ಟೆಸ್ಟ್ ಪಂದ್ಯಗಳ ಅನುಭವಿ ವಿಹಾರಿ 34.2ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಪೂಜಾರಾ ಜಾಗಕ್ಕೆ ಸೂಕ್ತ ರಿಪ್ಲೇಸ್ಮೆಂಟ್ ಅನಿಸಿದರೂ, 5ನೇ ಕ್ರಮಾಂಕದಲ್ಲಿ ಆಡುವ ಫ್ಲೆಕ್ಸಿಬಿಲಿಟಿ ಕೂಡ ವಿಹಾರಿಗಿದೆ.
ಶ್ರೇಯಸ್ ಅಯ್ಯರ್ ಕೌಂಟರ್ ಅಟ್ಯಾಕ್ ಮಾಡಬಲ್ಲ ಕ್ರಿಕೆಟರ್. ವೇಗವಾಗಿ ರನ್ಗಳಿಸಿ ಎದುರಾಳಿಗಳ ಮೇಲೆ ಒತ್ತಡ ಹೇರಬಲ್ಲ ಆಟ ಇವರಲ್ಲಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಶ್ರೇಯಸ್ ಶತಕ ಮತ್ತು ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಒನ್ ಡೌನ್ ಸ್ಥಾನಕ್ಕೆ ಹೊಂದಿಕೊಳ್ಳಬಲ್ಲ ಆಟಗಾರನಾಗಿದ್ದರೂ 5ನೇ ಕ್ರಮಾಂಕದಲ್ಲಿ ಆಡುವ ತಾಕತ್ತು ಇದೆ ಅನ್ನುವುದುನ್ನು ತೋರಿಸಿಕೊಟ್ಟಿದ್ದಾರೆ.
ಇನ್ನು ಶುಭ್ಮನ್ ಗಿಲ್ ಆರಂಭಿಕ ಆಟಗಾರ. ಸದ್ಯ ರೋಹಿತ್ ಮತ್ತು ಮಯಾಂಕ್ ಸ್ಥಾನ ಗಟ್ಟಿಯಾಗಿರುವುದರಿಂದ ಗಿಲ್ ಬೇರೆ ಸ್ಥಾನದ ಕಡೆ ಕಣ್ಣಿಟ್ಟಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಲ್ಲಿ ಆಡಿದ ಅನುಭವ ಇದೆ. 3ನೇ ಕ್ರಮಾಂಕಕ್ಕೆ ಸೂಟ್ ಆಗಬಲ್ಲ ಆಟಗಾರನೂ ಹೌದು. ತಾಂತ್ರಿಕವಾಗಿ ಗಿಲ್ ಮತ್ತು ವಿಹಾರಿ ಪಕ್ಕಾ ಟೆಸ್ಟ್ ಬ್ಯಾಟ್ಸ್ಮನ್ಗಳು. ಶ್ರೇಯಸ್ ಹೊಸ ಜನರೇಷನ್ ಶೈಲಿ ಹೊಂದಿದ್ದಾರೆ.
10 ವರ್ಷಗಳ ಬಳಿಕ ಪೂಜಾರಾ ಮತ್ತು ರಹಾನೆ ಇಲ್ಲದೆ ಭಾರತ ಟೆಸ್ಟ್ ಆಡುತ್ತಿದೆ. ಅವಕಾಶ ಯಾರಿಗೆ ಸಿಗುತ್ತದೆ ಅನ್ನುವುದಕ್ಕಿ ಅವಕಾಶವನ್ನು ಯಾರು ಬಳಸಿಕೊಳ್ತಾರೆ ಅನ್ನುವುದೇ ಮುಖ್ಯ.