ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅಖಾಡ ಸಜ್ಜಾಗಿದೆ. ಇಲ್ಲಿ ಗೆದ್ದವರು ಸರಣಿ ಗೆಲುವಿನ ಗೌರವ ಪಡೆಯಲಿದ್ದಾರೆ. ಆದರೆ ಈ ಕಪ್ ಕ್ಲೈಮ್ಯಾಕ್ಸ್ಗೆ ಮಳೆ ಅಡ್ಡಿಯಾಗುವ ಆತಂಕವಿದೆ.
ಟೀಮ್ ಇಂಡಿಯಾ ವಿಶಾಖಪಟ್ಟಣಂ ಮತ್ತು ರಾಜ್ಕೋಟ್ನಲ್ಲಿ ಪಂದ್ಯ ಗೆದ್ದು ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ಈಗ ಬೆಂಗಳೂರಿನಲ್ಲಿ ಗೆಲ್ಲುವುದೇ ಟೀಮ್ಇಂಡಿಯಾದ ಗುರಿಯಾಗಿದೆ. ಟೀಮ್ಇಂಡಿಯಾ ಓಪನರ್ ರುತುರಾಜ್ ಗಾಯಕ್ವಾಡ್ರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಮಾಡುತ್ತಿದೆ. ಇಶಾನ್ ಕಿಶನ್ ಬಗ್ಗೆ ಚಿಂತೆ ಇಲ್ಲ. ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಮೇಲೆ ರನ್ಗಳಿಸುವ ಒತ್ತಡವಿದೆ. ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ವಿಭಾಗಕ್ಕೆ ಸ್ಪೋಟಕ ಬಲ ತಂದುಕೊಟ್ಟಿದ್ದಾರೆ.
ಬೌಲಿಂಗ್ನಲ್ಲಿದ್ದ ಸಮಸ್ಯೆಗಳು ದೂರವಾಗಿವೆ. ಭುವನೇಶ್ವರ್ ಲೈನ್ ಅಂಡ್ ಲೆಂಗ್ತ್ ಎದುರಾಳಿಗೆ ಅರ್ಥವಾಗುತ್ತಿದೆ. ಆವೇಶ್ ಖಾನ್ ಆವೇಶ ಚಿನ್ನಸ್ವಾಮಿಯಲ್ಲೂ ಮುಂದುವರೆಯಬೇಕಿದೆ. ಹಾರ್ದಿಕ್ ಪಾಂಡ್ಯಾ ಮೂರನೇ ವೇಗಿ. ಹರ್ಷಲ್ ಪಟೇಲ್ ಡೆತ್ ಓವರ್ ಸ್ಪೆಷಲಿಸ್ಟ್.ಯಜುವೇಂದ್ರ ಚಹಲ್ ಮತ್ತು ಅಕ್ಸರ್ ಪಟೇಲ್ ಸ್ಪಿನ್ನರ್ಗಳು.
ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ತೆಂಬ ಬವುಮಾ ಫಿಟ್ನೆಸ್ ಸಮಸ್ಯೆಯಾಗಿದೆ, ಕ್ವಿಂಟಾನ್ ಡಿ ಕಾಕ್, ಡೇವಿಡ್ ಮಿಲರ್ ಮತ್ತು ರಾಸಿ ವ್ಯಾಂಡರ್ ಡ್ಯುಸನ್ ಬ್ಯಾಟಿಂಗ್ ಮೇಲೆ ಹೆಚ್ಚು ನಂಬಿಕೆ ಇದೆ. ಹನ್ರಿಚ್ ಕ್ಲಾಸನ್ ಮತ್ತು ಡ್ವೈನ್ಪ್ರೊಟೋರಿಯಸ್ ಕೂಡ ಡೇಂಜರಸ್. ಬೌಲಿಂಗ್ನಲ್ಲಿ ಪಾರ್ನೆಲ್, ರಬಾಡಾ ಜೊತೆ ಎನ್ ಗಿಡಿ ಸೇರಿಕೊಂಡಿದ್ದಾರೆ. ಶಂಸಿ ಮತ್ತು ಮಹಾರಾಜ್ ಸ್ಪಿನ್ ಎಫೆಕ್ಟಿವ್ ಆಗಿಲ್ಲ.
ಚಿನ್ನಸ್ವಾಮಿ ಪಿಚ್ ಸ್ಪರ್ಧಾತ್ಪಕವಾಗಿರಲಿದೆ. ಹೀಗಾಗಿ ಬ್ಯಾಟ್ಸ್ಮನ್ಗಳಿಗಿರುವಷ್ಟೇ ಅಡ್ವಾಂಟೇಜ್ ಬೌಲರ್ಗಳಿಗೂ ಸಿಗಲಿದೆ.