ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಸೋಲನ್ನು ಮರೆಯಲು ಪ್ಲಾನ್ ಮಾಡುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ವಿಶ್ವಕಪ್ ಸೋಲಿನ ಕಹಿ ಸ್ವಲ್ಪ ಮಾಸಬಹುದು. ಅಷ್ಟೇ ಅಲ್ಲ ಹೊಸ ನಾಯಕ ಮತ್ತು ಹೊಸ ಕೋಚ್ ಟೀಮ್ ಇಂಡಿಯಾಕ್ಕೆ ಹೊಸ ಕನಸನ್ನು ತುಂಬಬಹುದು. ಹೀಗಾಗಿ ರಾಂಚಿಯಲ್ಲಿ ನಡೆಯುವ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ 2ನೇ ಟಿ20 ಪಂದ್ಯ ನಿರ್ಣಾಯಕವಾಗಿದೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದರೆ ಸರಣಿ ಗೆದ್ದಂತಾಗುತ್ತದೆ. ಕಿವೀಸ್ ಈ ಪಂದ್ಯವನ್ನು ಗೆದ್ದರೆ ಕೊಲ್ಕತ್ತಾದಲ್ಲಿ ನಡೆಯುವ ಕೊನೆಯ ಪಂದ್ಯ ಸರಣಿ ನಿರ್ಣಾಯಕವಾಗಲಿದೆ.
ಜೈಪುರದಲ್ಲಿ ನಡೆದ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಒದ್ದಾಡಿ ಗೆದ್ದಿತ್ತು. ಗುರಿ ಸುಲಭವಾಗಿದ್ದರೂ ಕೊನೆಯಲ್ಲಿ ಎಡವಟ್ಟು ಮಾಡಿದ್ದು ಒತ್ತಡ ಹೇರಿತ್ತು. ಆದರೆ ಆ ತಪ್ಪನ್ನು ಟೀಮ್ ಇಂಡಿಯಾ ಮತ್ತೆ ಮಾಡಲು ಇಷ್ಟಪಡುವುದಿಲ್ಲ. ಹೀಗಾಗಿ ಬ್ಯಾಟಿಂಗ್ ಬಗ್ಗೆ ಭರವಸೆ ಇಟ್ಟಿದೆ. ರಾಹುಲ್, ರೋಹಿತ್ ಮತ್ತು ಸೂರ್ಯ ಕುಮಾರ್ ಜೊತೆಗೆ ಪಂತ್, ಶ್ರೇಯಸ್ ಮತ್ತು ವೆಂಕಟೇಶ್ ಅಯ್ಯರ್ ಸಾಥ್ ನೀಡಬೇಕಿದೆ. ಬೌಲಿಂಗ್ನಲ್ಲಿ ಭುವನೇಶ್ವರ್ ಮತ್ತು ಅಶ್ವಿನ್ ಮೊದಲ ಪಂದ್ಯದಲ್ಲಿ ಯಶಸ್ವಿ ಆಗಿದ್ದರು. ಆದರೆ ದೀಪಕ್ ಚಹರ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಸರ್ ಪಟೇಲ್ ಕೊಂಚ ದುಬಾರಿ ಆಗಿದ್ದರು. ಹೀಗಾಗಿ ಅವರ ಮೇಲೆ ಕೊಂಚ ಒತ್ತಡವಿದೆ. ಯುಜುವೇಂದ್ರ ಚಹಲ್ ಪ್ಲೇಯಿಂಗ್ 11ನಲ್ಲಿ ಕಾಣಿಸಬೇಕು ಅನ್ನುವ ಲೆಕ್ಕಾಚಾರ ವಿದ್ದರೂ ಯಾರ ಸ್ಥಾನದಲ್ಲಿ ಆಡಬೇಕು ಅನ್ನುವುದು ಕೂಡ ಚರ್ಚೆಯಲ್ಲಿದೆ.
ನ್ಯೂಜಿಲೆಂಡ್ ಜೈಪುರದಲ್ಲಿ ಹೋರಾಟ ಮಾಡಿದ್ದು ತಂಡಕ್ಕೆ ಆತ್ಮವಿಶ್ವಾಸ ತುಂಬಿದೆ. ಮಾರ್ಕ್ ಚಾಪ್ಮನ್ ಮತ್ತು ಮಾರ್ಟಿನ್ ಗಪ್ಟಿಲ್ ಬಿಟ್ಟರೆ ಉಳಿದವರು ಹೆಚ್ಚು ಕೊಡುಗೆ ನೀಡಿರಲಿಲ್ಲ. ಹೀಗಾಗಿ ಕಿವೀಸ್ ಬ್ಯಾಟಿಂಗ್ ಬಗ್ಗೆ ಸಂದೇಹವಿದೆ. ಬೌಲಿಂಗ್ನಲ್ಲಿ ಟಾಡ್ ಆ್ಯಸ್ಟಲ್ ದುಬಾರಿ ಆಗಿದ್ದರು. ಹೀಗಾಗಿ ಈಶ್ ಸೋಧಿ ತಂಡಕ್ಕೆ ಎಂಟ್ರಿಕೊಡಬಹುದು. ಸರಣಿ ನಿರ್ಣಾಯಕ ಪಂದ್ಯ ಆಗಿರುವುದರಿಂದ ಜೇಮ್ಸ್ ನಿಶಾಮ್ ರಚಿನ್ ರವೀಂದ್ರ ಜಾಗದಲ್ಲಿ ಆಡಬಹುದು.
ರಾಂಚಿ ದೊಡ್ಡ ಬೌಂಡರಿಗಳನ್ನು ಹೊಂದಿದೆ. ಹೀಗಾಗಿ ಸ್ಪಿನ್ನರ್ಗಳಿಗೆ ನೆರವು ಇದ್ದರೂ ಡ್ಯೂ ಫ್ಯಾಕ್ಟರ್ ಪಂದ್ಯದ ಮೇಲೆ ಇಂಪ್ಯಾಕ್ಟ್ ಮಾಡಬಹುದು.
ಸಂಭಾವ್ಯ XI
ಟೀಮ್ ಇಂಡಿಯಾ
- ರೋಹಿತ್ ಶರ್ಮಾ, 2. ಕೆ.ಎಲ್. ರಾಹುಲ್, 3. ಸೂರ್ಯಕುಮಾರ್ ಯಾದವ್, 4. ಶ್ರೇಯಸ್ ಅಯ್ಯರ್ 5.ವೆಂಕಟೇಶ್ ಅಯ್ಯರ್, 6. ರಿಷಬ್ ಪಂತ್, 7. ಅಕ್ಸರ್ ಪಟೇಲ್/ ಯಜ್ವೆಂದ್ರ ಚಹಲ್, 8. ರವಿಚಂದ್ರನ್ ಅಶ್ವಿನ್, 9. ಭುವನೇಶ್ವರ್ ಕುಮಾರ್, 10. ಮೊಹಮ್ಮದ್ ಸಿರಾಜ್, 11. ದೀಪಕ್ ಚಹರ್
ನ್ಯೂಜಿಲೆಂಡ್
- ಮಾರ್ಟಿನ್ ಗಪ್ಟಿಲ್, 2. ಡೆರಿಲ್ ಮಿಚೆಲ್, 3. ಗ್ಲೆನ್ ಫಿಲಿಫ್ಸ್, 4. ಮಾರ್ಕ್ ಚಾಪ್ಮನ್ಮ 5. ಟಿಮ್ ಸೀಫರ್ಟ್, 6. ಜೇಮಿ ನಿಶಾಮ್, 7. ಮಿಚೆಲ್ ಸ್ಯಾಟ್ನಂಟ್, 8. ಟ್ರೆಂಟ್ ಬೋಲ್ಟ್, 9. ಟಿಮ್ ಸೌಥಿ, 10. ಆ್ಯಡಂ ಮಿಲ್ನೆ, 11. ಈಶ್ ಸೋಧಿ