ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ 4ನೇ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ರೋಚಕ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಈ ಪಂದ್ಯ ಗೆದ್ರೆ 2-2 ರಿಂದ ಸರಣಿಯಲ್ಲಿ ಸಮಬಲ ಸಾಧಿಸಲಿದೆ. ದಕ್ಷಿಣ ಆಫ್ರಿಕಾ ಗೆದ್ದರೆ ಒಂದು ಪಂದ್ಯಕ್ಕೂ ಮೊದಲೇ ಸರಣಿ ಕೈ ವಶ ಮಾಡಿಕೊಳ್ಳಲಿದೆ.
ಟೀಮ್ ಕಾಂಬಿನೇಷನ್ಬಗ್ಗೆ ಮಾತನಾಡಿದರೆ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಕಷ್ಟ. ರುತುರಾಜ್ ಗಾಯಾಕ್ವಾಡ್ ಮತ್ತು ಇಶಾನ್ ಕಿಶನ್ ಮತ್ತೊಮ್ಮೆ ಉತ್ತಮ ಆರಂಭ ತಂದುಕೊಡಬೇಕಿದೆ. ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಬ್ಯಾಟ್ನಿಂದ ರನ್ ಸಿಡಿಯುವು ಅನಿವಾರ್ಯವಾಗಿದೆ. ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯಾ ಫಿನಿಷರ್ ಆಗಿ ಕೆಲಸ ನಿರ್ವಹಿಸಲು ಸಜ್ಜಾಗಿದ್ದಾರೆ. ಅಗತ್ಯ ಬಿದ್ದರೆ ಹರ್ಷಲ್ ಪಟೇಲ್ ಕೂಡ ಬ್ಯಾಟ್ ಬೀಸಬಲ್ಲರು.
ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ ಅಮೋಘ ಫಾರ್ಮ್ನಲ್ಲಿದ್ದಾರೆ. ಆದರೆ ಹೊಸ ಚೆಂಡು ಹಂಚಿಕೊಳ್ಳುವ ಆವೇಶ್ ಖಾನ್ ಉತ್ತಮ ಪ್ರದರ್ಶನ ನೀಡಿಲ್ಲ. ಹರ್ಷಲ್ ಪಟೇಲ್ ವಿಕೆಟ್ ಕೀಳುತ್ತಿದ್ದಾರೆ ಅನ್ನುವುದು ಸಮಾಧಾನ. ಯಜುವೇಂದ್ರ ಚಹಲ್ ಮತ್ತು ಅಕ್ಸರ್ ಪಟೆಲ್ ಸ್ಪಿನ್ ಮತ್ತೆ ಮೋಡಿ ಮಾಡುವುದು ಅನಿವಾರ್ಯ. ಹಾರ್ದಿಕ್ ಪಾಂಡ್ಯಾ 6ನೇ ಬೌಲರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿದೆ. ಕ್ವಿಂಟಾನ್ ಡಿ ಕಾಕ್ ವಾಪಾಸಾದರೆ ಟಾಪ್ ಆರ್ಡರ್ಗೆ ಬಲ ಬರಲಿದೆ. ರಿಜಾ ಹೆಂಡ್ರಿಕ್ಸ್, ನಾಯಕ ತೆಂಬ ಬವುಮಾ, ರಾಸಿ ವ್ಯಾಂಡರ್ ಡ್ಯುಸನ್ ಮತ್ತು ಡೇವಿಡ್ ಮಿಲ್ಲರ್ ನಿರ್ಣಾಯಕ ಆಟ ಆಡಲಿದ್ದಾರೆ. ಹೆನ್ರಿಚ್ ಕ್ಲಾಸನ್ ಕ್ಲಾಸಿಕ್ ಆಟದ ಬಲವಿದೆ.
ಬೌಲಿಂಗ್ನಲ್ಲಿ ಹರಿಣಗಳಿಗೆ ಸಮಸ್ಯೆ ಇರುವುದು ಸ್ಪಿನ್ ವಿಭಾಗದಲ್ಲಿ. ತಬ್ರೈಝ್ ಸಂಶಿ ಮತ್ತು ಕೇಶವ್ ಮಹಾರಾಜ್ ಎಫೆಕ್ಟಿವ್ ಆಗಿಲ್ಲ ಅನ್ನುವುದು ಚಿಂತೆ ಹೆಚ್ಚಿಸಿದೆ. ಕಗಿಸೋ ರಬಾಡಾ, ವೇಯ್ನ್ ಪಾರ್ನೆಲ್ ಮತ್ತು ಡ್ವೈನ್ ಪ್ರಿಟೋರಿಯಸ್ ಚಾಣಾಕ್ಷ ಬೌಲಿಂಗ್ನಿಂದ ಎದುರಾಳಿಯನ್ನು ಕಟ್ಟಿ ಹಾಕುತ್ತಿದ್ದಾರೆ.
ರಾಜ್ಕೋಟ್ ಬ್ಯಾಟಿಂಗ್ ಫ್ರೆಂಡ್ಲಿ ಟ್ರ್ಯಾಕ್ ಅನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವುದು ಬಹುತೇಕ ಖಚಿತ.