ಕಠಿಣ ಬಯೋ ಬಬಲ್ನಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರಿದ್ದರೂ ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಮತ್ತು ನವದೀಪ್ ಸೈನಿಗೆ ಕೊರೊನಾ ಅಂಟಿಕೊಂಡಿತ್ತು. ಇದು ಟೀಮ್ ಇಂಡಿಯಾದ ಕ್ಯಾಂಪ್ನಲ್ಲಿ ಗೊಂದಲ ಹುಟ್ಟಿಸಿತ್ತು. ಏಕದಿನ ಸರಣಿಯ ಅರಂಭ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಆದರೆ ಈಗ ಎಲ್ಲವೂ ಸರಿಯಾಗಿದೆ. ಬಿಸಿಸಿಐ ಏಕದಿನ ಸರಣಿ ನಿಗದಿಯಂತೆ ನಡೆಯಲಿದೆ ಎಂದು ಹೇಳಿದೆ.
ಫೆಬ್ರವರಿ 6 ರಂದು ಅಹ್ಮದಾಬಾದ್ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಫೆಬ್ರವರಿ 9 ಮತ್ತು 11 ರಂದು ಕೊನೆಯ 2 ಏಕದಿನ ಪಂದ್ಯಗಳು ನಡೆಯಲಿವೆ. ಸೋಂಕಿತ ಆಟಗಾರರ RTPCR ವರದಿ ನೆಗೆಟಿವ್ ಬಂದಿದೆ. ಆದರೆ ನಿಯಮದಂತೆ ನಾಲ್ವರು ಆಟಗಾರರು ಏಕದಿನ ಸರಣಿಯ ಭಾಗವಾಗಿರುವುದಿಲ್ಲ. 7 ದಿನಗಳ ಕ್ವಾರಂಟೈನ್ ಮುಗಿದ ಬಳಿಕವೇ ಆಯ್ಕೆಗೆ ಲಭ್ಯರಿರುತ್ತಾರೆ.
ಏಕದಿನ ತಂಡಕ್ಕೆ ಮಯಾಂಕ್ ಅಗರ್ವಾಲ್ ಮತ್ತು ವಿಕೆಟ್ ಕೀಪರ್, ಬ್ಯಾಟರ್ ಇಶಾನ್ ಕಿಶನ್ ಸೇರ್ಪಡೆಯಾಗಿದ್ದಾರೆ. ಮಯಾಂಕ್ ಗುರುವಾರ ತಂಡವನ್ನು ಸೇರಿಕೊಂಡಿದ್ದಾರೆ. ನಿಯಮದ ಪ್ರಕಾರ ಅವರು ಮೂರು ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ನಲ್ಲಿ ಇರಬೇಕಾಗಿದೆ. ಹೀಗಾಗಿ ನೇರವಾಗಿ ಪಂದ್ಯಕ್ಕೆ ಲಭ್ಯ ಇರುತ್ತಾರೆ. ಇಶಾನ್ ಕಿಶನ್ ಕೂಡ ಇದೇ ನಿಯಮ ಅನುಸರಿಸಲಿದ್ದಾರೆ