ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆನ್ನುವ ದಶಕಗಳ ಆಸೆಗೆ ಭರ್ಜರಿ ತಯಾರಿಯನ್ನು ಟೀಮ್ ಇಂಡಿಯಾ ಮಾಡಿಕೊಳ್ಳುತ್ತಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಆರಂಭಕ್ಕೆ ಇನ್ನು ಎರಡೇ ಎರಡು ದಿನ ಉಳಿದಿದೆ. ಸೆಂಚೂರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಕಣಕ್ಕಿಳಿಯುವ ಕಾಂಬಿನೇಷನ್ ಬಗ್ಗೆ ಚರ್ಚೆ ಆಗುತ್ತಿದೆ. ಈ ಮಧ್ಯೆ ಟೀಮ್ ಇಂಡಿಯಾಕ್ಕೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಅನುಭವದ ಕೊರತೆ ಕಾಡುತ್ತಿದೆ.
ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹನುಮ ವಿಹಾರಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಜಯಂತ್ ಯಾದವ್ ಟೆಸ್ಟ್ ತಂಡದ ಜೊತೆ ಮೊದಲ ಬಾರಿಗೆ ಪ್ರಯಾಣ ಬೆಳೆಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಪ್ರಥಮ ದರ್ಜೆ ಪಂದ್ಯ ಆಡಿರುವ ಅನುಭವ ಇದ್ದರೂ ಟೆಸ್ಟ್ ಪಂದ್ಯಕ್ಕೆ ಅದು ಸಾಕಾಗುವುದಿಲ್ಲ. ಹೀಗಾಗಿ ಫಾಸ್ಟ್ ಅಂಡ್ ಬೌನ್ಸಿ ಪಿಚ್ನಲ್ಲಿ ಅವರ ಸಾಮರ್ಥ್ಯಕ್ಕೆ ಇದು ಪರೀಕ್ಷೆಯಾಗಿರಲಿದೆ.
ಮಯಾಂಕ್, ಶ್ರೇಯಸ್ ಮತ್ತು ರಿಷಬ್ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಿಚ್ಗಳಲ್ಲಿ ಆಡಿದ ಅನುಭವ ಇವರಿಗಿದೆ. ಆದರೆ ದಕ್ಷಿಣ ಆಫ್ರಿಕಾದ ಪಿಚ್ ಸ್ವರೂಪವೇ ಬೇರೆ.ಇನ್ನು ಹನುಮ ವಿಹಾರಿ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಿಹಾರಿ ಇತ್ತೀಚೆಗೆ ಇಂಡಿಯಾ ಎ ತಂಡದ ಜೊತೆ ಆಡಿದ್ದರು ಅನ್ನುವುದು ಕೂಡ ಗಮನಿಸಬೇಕಿದೆ.
ಬೌಲರ್ಗಳಲ್ಲಿ ಸಿರಾಜ್, ಶಾರ್ದೂಲ್ ಮತ್ತು ಜಯಂತ್ ಯಾದವ್ ಮೊದಲ ಬಾರಿಗೆ ಕಾಮನ ಬಿಲ್ಲಿನ ನಾಡಿಗೆ ಎಂಟ್ರಿ ಕೊಟ್ಟಿದ್ದಾರೆ. ವೇಗ ಮತ್ತು ಬೌನ್ಸ್ ಕಂಡು ಯರ್ರಾಬಿರ್ರಿ ಬೌಲಿಂಗ್ ಮಾಡಿದರೆ ಪ್ರಯೋಜನ ಇಲ್ಲ. ಹೀಗಾಗಿ ಇವರಿಗೂ ಇದು ಟೆಸ್ಟಿಂಗ್ ಟೈಮ್ ಆಗಿರಲಿದೆ. ಒಟ್ಟಿನಲ್ಲಿಸ ಸವಾಲಿನ ಪಿಚ್ಗಳ ಜೊತೆ ತಂಡದ ಅನನುಭವನ್ನು ಮೆಟ್ಟಿನಿಲ್ಲುವುದು ಟೀಮ್ ಇಂಡಿಯಾಕ್ಕೆ ಸವಾಲಾಗಲಿದೆ.