Tuesday, February 7, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

K.L.rahul – ಅಯ್ಯೋ ಪಾಪ… ನಮ್ಮ ರಾಹುಲ್ ಗೆ ಹೀಗಾಗಬಾರದಿತ್ತು…!

January 25, 2022
in Cricket, ಕ್ರಿಕೆಟ್
kl rahul team india sportskarnataka

kl rahul team india sportskarnataka

Share on FacebookShare on TwitterShare on WhatsAppShare on Telegram

K.L.rahul  ಅಯ್ಯೋ ಪಾಪ… ನಮ್ಮ ರಾಹುಲ್ ಗೆ ಹೀಗಾಗಬಾರದಿತ್ತು…!

kl rahul team india sportskarnatakaಕೆ.ಎಲ್. ರಾಹುಲ್ ನಾಯಕನಾಗಿ ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಸೋತ ನಂತರ ಕ್ರಿಕೆಟ್ ಪಂಡಿತರ ವಿಶ್ಲೇಷನೆ, ಟೀಕೆಗಳು ಕೇಳಿಬಂದಿದ್ದು ಅಷ್ಟಿಷ್ಟಲ್ಲ.
ಸಾಮಾಜಿಕ ಜಾಲ ತಾಣದಲ್ಲಿ ಕೆಲವರು ರಾಹುಲ್ ಅವರನ್ನು ಮನಬಂದಂತೆ ಟೀಕಿಸಿದ್ರೆ ಮತ್ತೆ ಕೆಲವರು ರಾಹುಲ್ ಬಗ್ಗೆ ಕರುಣೆ ಕೂಡ ವ್ಯಕ್ತಪಡಿಸಿದ್ದಾರೆ.
ಆಟ ಅಂದ ಮೇಲೆ ಅಲ್ಲಿ ಸೋಲು ಗೆಲುವು ಇದ್ದದ್ದೇ. ಅದು ಆಟದ ಭಾಗ. ಅದನ್ನು ಸಮನಾಗಿ ಸ್ವೀಕರಿಸಿ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಗಬೇಕು. ಅದನ್ನು ಬಿಟ್ಟು ಮೂರು ಪಂದ್ಯ, ಒಂದು ಸರಣಿ ಸೋತ ಕೂಡಲೇ ಆತ ನಾಯಕನಾಗಲು ಲಾಯಕ್ಕಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಮೂಡುತ್ತಿದೆ.
ಅಷ್ಟಕ್ಕೂ ಟೀಮ್ ಇಂಡಿಯಾ ಪರ ಏಕದಿನ ಸರಣಿಯ ಮೂರು ಪಂದ್ಯಗಳನ್ನು ಸೋತ ನಾಯಕ ರಾಹುಲ್ ಮೊದಲಿಗರಲ್ಲ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕ್ವದಲ್ಲೂ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಮೂರು ಪಂದ್ಯಗಳ ಸರಣಿಯನ್ನು ಸೋತಿತ್ತು. ಅದಕ್ಕೂ ಹಿಂದೆ ಮೂರು ಬಾರಿ ಸೋತಿತ್ತು
ಹಾಗಂತ ಟೀಮ್ ಇಂಡಿಯಾದ ಮುಂದಿನ ನಾಯಕ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿಯಂತೆ ಆಕ್ರಮಣಕಾರಿ ಪ್ರವೃತ್ತಿಯಾರಬೇಕಿಲ್ಲ. ಧೋನಿ, ಅಜರುದ್ದೀನ್, ರಾಹುಲ್ ದ್ರಾವಿಡ್, ಕಪಿಎಲ್ ದೇವ್, ಸುನೀಲ್ ಗವಾಸ್ಕರ್ ನಂತವರು ತಾಳ್ಮೆ, ಸಯಂನದಿಂದ ತಂಡವನ್ನು ಮುನ್ನಡೆಸಿದ್ದಾರೆ
ಮೊದಲೇ ಒಡಕಿನ ಮನೆಯಂತಿರುವ ಟೀಮ್ ಇಂಡಿಯಾವನ್ನು ಸಡನ್ ಆಗಿ ಕೆ.ಎಲ್. ರಾಹುಲ್ ಅವರಿಗೆ ಸಾರಥ್ಯ ವಹಿಸುವಂತೆ ಮಾಡಿದ್ದು ಬಿಸಿಸಿಐ. ಇಲ್ಲಿ ಬಿಸಿಸಿಐ ರಾಹುಲ್ ಅವರನ್ನು ಹರಕೆಯ ಕುರಿಯನ್ನಾಗಿಸಿದೆ ಎಂಬುದು ಮಾತ್ರ ಸುಳ್ಳಲ್ಲ.
ನಿಜ, ನಾಯಕನಾಗಿ ಕೆ.ಎಲ್. ರಾಹುಲ್ ಗೆ ಅನುಭವಿಲ್ಲ. ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿರುವುದನ್ನು ಬಿಟ್ರೆ ರಾಹುಲ್ ರಾಜ್ಯ ತಂಡಕ್ಕೂ ನಾಯಕನಾಗಿಲ್ಲ. ಹಾಗಂತ ರಾಹುಲ್ ಅವರ ವ್ಯಕ್ತಿತ್ವವನ್ನೇ ಟೀಕೆ ಮಾಡುವುದು ಕ್ರಿಕೆಟ್ ಪಂಡಿತರಿಗೂ ಶೋಭೆ ತರಲ್ಲ.
ಇನ್ನು, ಭಾರತೀಯ ಕ್ರಿಕೆಟ್ ನಲ್ಲಿ ದಕ್ಷಿಣ ಭಾರತದ ಆಟಗಾರರನ್ನು ಕಡೆಗಣಿಸುವುದು ಮಾಮೂಲಿ. ನಾಯಕನಾಗಿ ಮಹಮ್ಮದ್ ಅಜರುದ್ದೀನ್ ಅವರನ್ನು ಬಿಟ್ರೆ, ಬಿಸಿಸಿಐ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರನ್ನು ನಾಯಕನಾಗಿ ನೇಮಕ ಮಾಡಿ ಯಾವ ರೀತಿ ನಡೆಸಿಕೊಂಡಿದೆ ಎಂಬುದು ಕೂಡ ಗೊತ್ತಿರುವ ವಿಚಾರವೇ.
ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಆದ್ರೆ ಕೆರೆಬಿಯನ್ ವಿಶ್ವಕಪ್ ಸೋಲಿನಿಂದ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳುವಂತೆ ಮಾಡಿತ್ತು.
ಇದೀಗ ಕೆ.ಎಲ್. ರಾಹುಲ್ ಪರಿಸ್ಥಿತಿ ಕೂಡ ರಾಹುಲ್ ದ್ರಾವಿಡ್ ನಂತೆ ಆಗಿದೆ. ಅಷ್ಟಕ್ಕೂ ಕೆ.ಎಲ್. ರಾಹುಲ್ ಗೆ ಟೀಮ್ ಇಂಡಿಯಾದ ನಾಯಕತ್ವ ಬಯಸದೇ ಬಂದ ಭಾಗ್ಯ. ರಾಹುಲ್ ದುರಾದೃಷ್ಟವೋ ಏನೋ ಸೋಲು ಬೆನ್ನ ಹಿಂದೆಯೇ ಕಾಡಿತ್ತು. ಕೆ.ಎಲ್. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಬಲಿ ಕಾ ಬಕ್ರಾ ಆಗಿಬಿಟ್ರು.
ಒಟ್ಟಿನಲ್ಲಿ ಒಂದು ಸರಣಿ ನಡೆಯುತ್ತಿರುವಾಗ ತಂಡದೊಳಗೆ ಬಿಸಿಸಿಐ ಬಿರುಕು ಮೂಡುವಂತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಗೆ ಸೌರವ್ ಗಂಗೂಲಿ ಉತ್ತರ ನೀಡಬೇಕು.
ವಿರಾಟ್ ಕೊಹ್ಲಿಯವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬುದನ್ನು ಬಿಸಿಸಿಐ ಮೊದಲೇ ಪ್ಲಾನ್ ಮಾಡಿಕೊಂಡಿತ್ತು. ಹಾಗೇ ರೋಹಿತ್ ಶರ್ಮಾ ಗಾಯದ ಸಮಸ್ಯೆಯ ಬಗ್ಗೆಯೂ ಮಾಹಿತಿ ಇತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಗೆ ಮುನ್ನವೇ ಬಿಸಿಸಿಐ ಹೊಸ ನಾಯಕನನ್ನು ಆಯ್ಕೆ ಮಾಡಿ ಈ ಗೊಂದಲಕ್ಕೆ ಇತಿ ಶ್ರೀ ಹಾಡಬೇಕಿತ್ತು. ಆದ್ರೆ ಪ್ರತಿಷ್ಠೆಯನ್ನು ಬಿಟ್ಟುಕೊಡದ ಬಿಸಿಸಿಐ ಕೆ.ಎಲ್. ರಾಹುಲ್ ಅವರನ್ನು ಬಲಿಪಡೆದುಕೊಂಡಿತ್ತು. ರೋಹಿತ್ ವರ್ಸಸ್ ವಿರಾಟ್ ಕೊಹ್ಲಿ, ವಿರಾಟ್ ಕೊಹ್ಲಿ ವರ್ಸಸ್ ಸೌರವ್ ಗಂಗೂಲಿ, ವಿರಾಟ್ ವರ್ಸಸ್ ರಾಹುಲ್ ದ್ರಾವಿಡ್ ಹೀಗೆ ಜಿದ್ದಿನಿಂದಾಗಿ ಕೆ.ಎಲ್. ರಾಹುಲ್ ತಲೆಯ ಮೇಲೆ ದಕ್ಷಿಣ ಆಫ್ರಿಕಾ ವಿರುದ್ದದ ಹೀನಾಯ ಸೋಲನ್ನು ಕಟ್ಟಲಾಗಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: BCCIcricketIPLkl rahulRahul DravidSports Karnatakasports newsTeam IndiaVirat Kohli
ShareTweetSendShare
Next Post
KL Rahul IPL team Lucknow Super Giants Marcus Stoinis, Ravi Bishnoi. sportskarnataka

ipl 2022 - ಲಕ್ನೋ ಸೂಪರ್ ಜೈಂಟ್ಸ್ ತಂಡದ ಟಾಪ್ ಸಿಕ್ರೇಟ್ ಏನು ? ರಾಹುಲ್ ಹೇಳಿದ್ದು ಹೀಗೆ..!

Leave a Reply Cancel reply

Your email address will not be published. Required fields are marked *

Stay Connected test

Recent News

ZIMvWi ಜಿಂಬಾಬ್ವೆ ವಿರುದ್ಧ ವಿಂಡೀಸ್ 321

ZIMvWi ಜಿಂಬಾಬ್ವೆ ವಿರುದ್ಧ ವಿಂಡೀಸ್ 321

February 6, 2023
INDvAUS ಭಾರತದ ಪ್ಲೈಟ್ ಮಿಸ್ ಮಾಡಿಕೊಂಡ ಖವಾಜಾ

Ashwin ಎದುರಿಸಲು ಆಸೀಸ್ MIND GAME ಸ್ಟಾರ್ಟ್

February 6, 2023
Athletics ಗ್ರ್ಯಾನ್ ಪ್ರಿ ಹೈಜಂಪ್ ಚಿನ್ನ ಗೆದ್ದ ತೇಜ್ವಸ್ವಿನ್

Athletics ಗ್ರ್ಯಾನ್ ಪ್ರಿ ಹೈಜಂಪ್ ಚಿನ್ನ ಗೆದ್ದ ತೇಜ್ವಸ್ವಿನ್

February 6, 2023
IND v AUS Series: ನಾಗ್ಪುರ ಅಂಗಳದಲ್ಲಿ ವಿರಾಟ್‌ ಕೊಹ್ಲಿ “ಕಿಂಗ್‌”

IND v AUS Series: ನಾಗ್ಪುರ ಅಂಗಳದಲ್ಲಿ ವಿರಾಟ್‌ ಕೊಹ್ಲಿ “ಕಿಂಗ್‌”

February 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram