ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ 3ನೇ ಏಕದಿನ ಪಂದ್ಯಕ್ಕೆ ಅಖಾಡ ಸಿದ್ಧವಾಗಿದೆ. ಟೀಮ್ ಇಂಡಿಯಾಕ್ಕೆ ಈ ಪಂದ್ಯ ಮಾಡು ಇಲ್ಲವೆ ಮಡಿ ಅನ್ನುವಂತಾಗಿದ್ದರೆ, ದಕ್ಷಿಣ ಆಫ್ರಿಕಾದ ಪಾಲಿಗೆ ಇದು ಸರಣಿ ಗೆಲ್ಲಲು ಇರುವ ಮತ್ತೊಂದು ಪಂದ್ಯ. ಹೀಗಾಗಿ ಆತಿಥೇಯ ಭಾರತ ಒತ್ತಡದಲ್ಲಿಯೇ ಕಣಕ್ಕಿಳಿಯಲಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ನಲ್ಲಿ ಮತ್ತು ಬೌಲಿಂಗ್ನಲ್ಲಿ ಸುಧಾರಿಸಬೇಕಿದೆ. ರುತುರಾಜ್ ಗಾಯಕ್ವಾಡ್ ವೈಫಲ್ಯ ದುಬಾರಿ ಆಗುತ್ತಿದೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಸ್ಥಿರ ಆಟ ಆಡಿದರೂ ನಾಯಕ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯಾ ಬ್ಯಾಟ್ನಿಂದ ದೊಡ್ಡ ಕೊಡುಗೆ ಬಂದಿಲ್ಲ. ದಿನೇಶ್ ಕಾರ್ತಿಕ್ ಫಿನಿಷರ್ ಸ್ಥಾನ ತುಂಬಿದ್ದಾರೆ.
ಬೌಲಿಂಗ್ ಬದಲಾವಣೆ ಖಚಿತ. ಭುವನೇಶ್ವರ್ ಜೊತೆಗೆ ಉಮ್ರನ್ ಮಲಿಕ್ ಕಣಕ್ಕಿಳಿಯಬಹುದು. ಹರ್ಷಲ್ ಪಟೇಲ್ ಮತ್ತು ಹಾರ್ದಿಕ್ಪಾಂಡ್ಯಾ ಇನ್ನೆರಡು ಆಯ್ಕೆಗಳು. ಯಜುವೇಂದ್ರ ಚಹಲ್ ಬದಲು ರವಿ ಬಿಷ್ಣೋಯಿ ಆಡಬಹುದು. ಅಕ್ಸರ್ ಪಟೇಲ್ ಬದಲಿಗೆ ದೀಪಕ್ ಹೂಡಗೆ ಅವಕಾಶ ಕೊಟ್ಟರೆ ಬ್ಯಾಟಿಂಗ್ಗೂ ಬಲ ಬರುತ್ತದೆ.
ದಕ್ಷಿಣ ಆಫ್ರಿಕಾ ತಂಡದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ನಲ್ಲಿ ತೆಂಬ ಬವುಮಾ, ಕ್ವಿಂಟಾನ್ ಡಿಕಾಕ್, ರಾಸಿ ವ್ಯಾಂಡರ್ ಡ್ಯುಸನ್, ಹೆನ್ರಿಚ್ ಕ್ಲಾಸನ್ ಮತ್ತು ಡೇವಿಡ್ ಮಿಲ್ಲರ್ ಬಗ್ಗೆ ನಂಬಿಕೆ ಇದೆ. ರಬಾಡಾ, ನೋರ್ಟ್ಜೆ, ಮಹಾರಾಜ್ ಮತ್ತು ಪ್ರಿಟೋರಿಯಸ್ ಬೌಲಿಂಗ್ ಕೂಡ ಲಯದಲ್ಲಿದೆ.
ವಿಶಾಖಪಟ್ಟಣಂ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ ಆಗಿರಬಹುದು. ಹೀಗಾಗಿ ಮತ್ತೊಂದು ಬಿಗ್ ಸ್ಕೋರ್ ಮ್ಯಾಚ್ ನಿರೀಕ್ಷೆ ಮಾಡಲಾಗಿದೆ.