ತಾರಾ ಶಟ್ಲರ್ಗಳಾದ ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ.ಸಿಂಧು ಸತತ ಸೋಲು ಕಂಡ ಪರಿಣಾಮ `ಭಾರತ ಸುದೀರ್ಮನ್ ಕಪ್ ಟೂರ್ನಿಯಿಂದ ಹೊರ ಬಿದ್ದಿದೆ.
ಸೋಮವಾರ ನಡೆದ ಸಿ ಗುಂಪಿನ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 0-5 ಅಂಕಗಳಿಂದ ಸೋಲು ಕಂಡಿತು.
ಮೊನ್ನೆಯಷ್ಟೆ ಚೀನಾ ತೈಪೈ ವಿರುದ್ಧ 1-4 ಅಂತರದಿಮದ ಸೋತಿದ್ದ ಭಾರತ ಕಾಮನ್ವೆಲ್ತ್ ಚಾಂಪಿಯನ್ ಮಲೇಷ್ಯಾ ವಿರುದ್ಧವೂ ಹೀನಾಯ ಪ್ರದರ್ಶನ ನೀಡಿತು. ವಿಶ್ವ ಮಿಶ್ರ ತಂಡ ಚಾಂಪಿಯನ್ಶಿಪ್ನಲ್ಲಿ ಸತತ ಎರಡನೆ ಬಾರಿಯೂ ಕಳಪೆ ಪ್ರದರ್ಶನ ನೀಡಿತು.
ಕಳೆದ ಆವೃತ್ತಿಯಲ್ಲೂ ಭಾರತ ನಾಕೌಟ್ ಹಂತಕ್ಕೂ ಅರ್ಹತೆ ಪಡೆದಿರಲಿಲ್ಲ.
ಮಿಶ್ರ ಡಬಲ್ಸ್ನಲ್ಲಿ `ಬರುವ ಕಪಿಲಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಸೂನ್ ಹಾಗೂ ಜೆಮ್ಮಿ ಜೋಡಿ ವಿರುದ್ಧ 16-21, 17-21 ಅಂಕಗಳಿಂದ ಸೋತಿತು.
ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಲೀ ಜ್ಹೀ ಜಿಯಾ ವಿರುದ್ಧ 16-21, 11-21 ಅಂಕಗಳಿಂದ ಸೋತರು.
ಮಹಿಳಾ ಸಿಂಗಲ್ಸ್ನಲ್ಲಿ ಸಿಂಧು ಎದುರಾಳಿ ಜಿನ್ ವ್ಹಿ ವಿರುದ್ಧ 21-14, 10-21, 20-22 ಅಂಕಗಳಿಂದ ಸೋತರು.
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಹಾಗು ರಾಣಕಿ ರೆಡ್ಡಿ 18-21, 19-21 ಅಂಕಗಳಿಂದ ಸೋತರು.
ಮಹಿಳಾ ಡಬಲ್ಸ್ನಲ್ಲಿ ತ್ರೀಸಾ ಜಾಲಿ, ಗಾಯತ್ರಿ ಜೋಡಿ ಎದುರಾಳಿ ತಾನ್ ಹಾಗೂ ಮುರಳಿಧರನ್ ವಿರುದ್ಧ 15-21, 13-21 ಅಂಕಗಳಿಂದ ಮಣಿದರು.
ಇಂದು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.