ಬೆಂಗಳೂರು: ಕೊನೆಯ ಕ್ಷಣದಲ್ಲಿ ಕಮಲೇಶ್ ಬಾರಿಸಿದ ಗೋಲಿನ ಸಹಯಾದಿಂದ ಕರ್ನಾಟಕ ಫುಟ್ಬಾಲ್ ತಂಡ ದಕ್ಷಿಣ ವಲಯ ಸಂತೋಷ್ ಟ್ರೋಫಿ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡವನ್ನು ಮಣಿಸಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಜಯ ಸಾಧಿಸಿರುವ ಕರ್ನಾಟಕ ಎ ಗುಂಪಿನಲ್ಲಿ ಮೊದಲ ಸ್ಥಾನವನ್ನು ಹೊಂದಿದೆ.
ಮೊದಲಾವಧಿಯ ಪಂದ್ಯದಲ್ಲಿ ಕರ್ನಾಟಕ ಅಂಕಗಳಿಸುವತ್ತ ಚಿತ್ತ ನೆಟ್ಟಿತು. ಅಲ್ಲದೆ ಈ ಅವಧಿಯಲ್ಲಿ ಗೋಲು ಬಾರಿಸುವ ಆಸೆಯೊಂದಿಗೆ ಆಟ ಪ್ರದರ್ಶಿಸಿತು. ಆದರೆ ಉಭಯ ತಂಡದ ರಕ್ಷಣಾತ್ಮಕ ಆಟ ಉತ್ತಮವಾಗಿದ್ದರಿಂದ ಈ ಅವಧಿಯ ಪಂದ್ಯ ಡ್ರಾದಲ್ಲಿ ಸಾಗಿತು.
ಎರಡನೇ ಅವಧಿಯಲ್ಲೂ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಆದರೆ ಅಂಕಗಳಿಸಿ ನೆರೆದ ಅಭಿಮಾನಿಗಳ ಮುದ ನೀಡುವ ಕರ್ನಾಟಕ ತಂಡದ ಆಸೆ ಕೊನೆಗೆ ಫಲಿಸಿತು. ಆತಿಥೇಯ ತಂಡದ ಪರ ಕಮಲೇಶ್ ಸಿಕ್ಕ ಅವಕಾಶದಲ್ಲಿ ಗೋಲು ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
ಇನ್ನೊಂದು ಪಂದ್ಯದಲ್ಲಿ ತಮಿಳುನಾಡು 1-0ಯಿಂದ ತೆಲಂಗಾಣ ವಿರುದ್ಧ ಜಯ ಸಾಧಿಸಿತು.