ಕರ್ನಾಟಕ ಫುಟ್ಬಾಲ್ ತಂಡ ಬರೋಬ್ಬರಿ 54 ವರ್ಷಗಳ ಬಳಿಕ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಶಿಪ್ ಗೆದ್ದುಕೊಂಡಿದೆ. ಫೈನಲ್ನಲ್ಲಿ ಮೇಘಾಲಯ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.
ರಿಯಾದ್ ನಲ್ಲಿ ನಡೆದ 76ನೇ ಆವೃತ್ತಿಯ ಸಂತೋಷ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೂರ್ನಿಯುದ್ದಕ್ಕೂ ಕರ್ನಾಟಕ ಅದ್ಭುತ ಪ್ರದರ್ಶನ ನೀಡಿತು.
ಪಂದ್ಯ ಆರಂಭವಾದ 2ನೇ ನಿಮಿಷದಲ್ಲೆ ಕರ್ನಾಟಕ ಗೋಲು ಹೊಡೆಯಿತು. ಸುನಿಲ್ ಕುಮಾರ್ ಮೊದಲ ಗೋಲು ಹೊಡೆದರು. ಕೂಡಲೆ ಎಚ್ಚೆತ್ತ ಮೇಘಾಲಯ ಕರ್ನಾಟಕ ಮಾಡಿದ ತಪ್ಪಿನ ಲಾಭ ಪಡೆಯಿತು. 8ನೇ ನಿಮಿಷದಲ್ಲಿ ಮೇಘಾಲಯ ಪೆನಾಲ್ಟಿ ದೊರೆಯಿತು. 9ನೇ ನಿಮಿಷದಲ್ಲಿ ಬ್ರೊಲಿಂಗ್ಟನ್ ಗೋಲು ಹೊಡೆದ ಸಮಬಲ ಸಾಧಸಿದರು.
19ನೇ ನಿಮಿಷದಲ್ಲಿ ರಾಜ್ಯದ ಬೀಕೆ ಒರಮ್ಗೋಲು ಹೊಡೆದು ಮುನ್ನಡೆ ನೀಡಿದರು. ನಂತರ 44ನೇ ನಿಮಿಷದಲ್ಲಿ ಫ್ರೀ ಕಿಕ್ ಅವಕಾಶ ಪಡೆದ ರಾಜ್ಯ ತಂಡ ರಾಬಿನ್ ಯಾದವ್ ಅವರ ನೆರವಿನಿಂದ 3-1 ಮುನ್ನಡೆ ಪಡೆಯಿತು.
ನಿರ್ಣಾಯಕ ಎರಡನೆ ಅವಯಲ್ಲಿ ಮೇಘಾಲಯ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 60ನೇ ನಿಮಿಷದಲ್ಲಿ ಗೋಲು ಹೊಡೆದು ಶೀನ್ ಸ್ಟೀವನ್ಸನ್ ಗೋಲಿನ ಅಂತರವನ್ನು ಕಡಿಮೆ ಮಾಡಿದರು.ಕೊನೆಯ 20 ನಿಮಿಗಳಲ್ಲಿ ಉಭಯ ತಂಡಗಳು ರೋಚಕತೆಯಿಂದ ಕೂಡಿತ್ತುಘಿ. ಗೋಲು ಹೊಡೆಯಲು ಭಾರೀ ಪ್ರಯತ್ನ ಪಟ್ಟ ಮೇಘಾಲಯ ಗೋಲು ಹೊಡೆಯದೇ ನಿರಾಸೆ ಅನುಭವಿಸಿತು. ರಾಜ್ಯದ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರು.