ಐಪಿಎಲ್ 2022 ರ 47 ನೇ ಪಂದ್ಯ ಸೋಮವಾರ ರಾಜಸ್ಥಾನ ಮತ್ತು ಕೋಲ್ಕತ್ತಾ ನಡುವೆ ನಡೆಯಿತು. ಪಂದ್ಯದಲ್ಲಿ ಅಚ್ಚರಿಯ ಘಟನೆ ನಡೆದಿದೆ. KKR ನ ಇನ್ನಿಂಗ್ಸ್ನ, 13 ನೇ ಓವರ್ನಲ್ಲಿ, ಟ್ರೆಂಟ್ ಬೌಲ್ಟ್ ಅವರ ಲೆಗ್-ಸ್ಟಂಪ್ನ ಹೊರಗೆ ಚೆಂಡನ್ನು ಎಸೆದರು. ಶ್ರೇಯಸ್ ಅಯ್ಯರ್ ಆಡಲು ಪ್ರಯತ್ನಿಸಿದ್ದರು. ಲೆಗ್ ಸ್ಟಂಪ್ ಆಚೆ ಬಿದ್ದಿದ್ದರಿಂದ ಅಂಪೈರ್ ನಾಟೌಟ್ ನೀಡಿದರು. ತಡ ಮಾಡದೆ ಸಂಜು ಡಿಆರ್ ಎಸ್ ಬಳಿಸಿದರು.
![ಇದು ಗುರು ಟೆಕ್ನಾಲಜಿಯ ಉಪಯೋಗ ಅಂದ್ರೆ, ವೆಲ್ ಡನ್ ಸಂಜು 3 sanju samson umpire drs](http://sportskarnataka.com/wp-content/uploads/2022/05/sanju-samson-umpire-drs.jpg)
ಅಂಪೈರ್ ಬಾಲ್ ವೈಡ್ ಎಂದು ಘೋಷಿಸಿದರು. ಸಂಜು ಕೂಡಲೇ ಡಿಆರ್ ಎಸ್ ತೆಗೆದುಕೊಂಡರು. ಅಂಪೈರ್ ನಿರ್ಣಯ ತಪ್ಪೆಂದು ಎಂದು ಮರುಪ್ರಸಾರದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಚೆಂಡು ಅಯ್ಯರ್ ಅವರ ಗ್ಲೌಸ್ಗೆ ತಗುಲಿ ಸಂಜು ಕೈ ಸೇರಿತು. ಅಂಪೈರ್ ತನ್ನ ನಿರ್ಧಾರವನ್ನು ಬದಲಾಯಿಸಬೇಕಾಯಿತು. ಶ್ರೇಯಸ್ 32 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ ಅವರ ಈ ನಿರ್ಧಾರವನ್ನು ಮೊಹಮ್ಮದ್ ಕೈಫ್ ಮತ್ತು ಸುರೇಶ್ ರೈನಾ ಕೂಡ ಪ್ರಶಂಸಿಸಿದ್ದಾರೆ.
![ಇದು ಗುರು ಟೆಕ್ನಾಲಜಿಯ ಉಪಯೋಗ ಅಂದ್ರೆ, ವೆಲ್ ಡನ್ ಸಂಜು 4 sanju sa](http://sportskarnataka.com/wp-content/uploads/2022/05/sanju-sa.webp)
ಈ ಪಂದ್ಯದ 19ನೇ ಓವರ್ ನಲ್ಲಿ ಮತ್ತೊಂದು ತಿರುವು ಕಂಡಿತು. ಪ್ರಸಿದ್ಧ ಕೃಷ್ಣ ಬೌಲಿಂಗ್ ನ ಓವರ್ ಕೊನೆಯ ಎಸೆತವನ್ನು ಆಫ್ ಸ್ಟಂಪ್ ಆಚೆ ಎಸೆದರು. ಚೆಂಡು ವೈಡ್ ಗೆರೆ ಹತ್ತಿರ ಸಾಗಿತು. ರಿಂಕು ಸಿಂಗ್ ಆಫ್-ಸ್ಟಂಪ್ ಆಚೆ ಬಂದು ಹೊಡೆಯಲು ಪ್ರಯತ್ನಿಸಿದರು. ಆದರೆ ಅಂಪೈರ್ ವೈಡ್ ಎಂದು ನೀಡಿದರು. ಈ ನಿರ್ಧಾರದಿಂದ ಸಂಜು ಅಸಮಾಧಾನ ಗೊಂಡರು.
ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವು ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು, 5 ಪಂದ್ಯಗಳಲ್ಲಿ ಸೋತಿರುವ ಕೋಲ್ಕತ್ತಾ ಗೆಲುವಿನ ರುಚಿ ಕಂಡಿದೆ.