Sunday, March 26, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Sanath Jayasuriya – ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ ಮತ್ತೆ ಸ್ಥಾಪನೆಯಾಗುತ್ತದೆ

July 14, 2022
in Cricket, ಕ್ರಿಕೆಟ್
samath jayasurya srilanka sports karnataka

samath jayasurya srilanka sports karnataka

Share on FacebookShare on TwitterShare on WhatsAppShare on Telegram

Sanath Jayasuriya – ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ ಮತ್ತೆ ಸ್ಥಾಪನೆಯಾಗುತ್ತದೆ

srilanka President Gotabaya Rajapaksa sports karnataka
srilanka President Gotabaya Rajapaksa sports karnataka

ಶ್ರೀಲಂಕಾದಲ್ಲಿ ನಡೆಯುತ್ತಿರುವ ನಾಗರೀಕ ಅಶಾಂತಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪರಿಸ್ಥಿತಿಯ ಬಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ನಾಗರೀಕರು ಅನುಭವಿಸುತ್ತಿರುವ ನೋವು ಯಾತನೆಯನ್ನು ನೋಡಿದಾಗ ದುಃಖವಾಗುತ್ತದೆ. ಅಗತ್ಯ ಆಹಾರ ಪದಾರ್ಥಗಳನ್ನು ಪಡೆಯಲು ಕ್ಯೂನಲ್ಲಿ ನಿಂತಿರುವುದನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ಔಷದಿಗಳು ಸಿಗುತ್ತಿಲ್ಲ. ವಿದ್ಯುತ್ ಇಲ್ಲ, ಇಂಧನ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮೂಲಭೂತ ಅವಶ್ಯಕತೆಗಳೇ ಇಲ್ಲ. ಜನ ಸಾಮಾನ್ಯರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಗೋಟಾಬಯ ರಾಜಪಕ್ಷೆ ಅವರ ಕೆಟ್ಟ ಆರ್ಥಿಕ ನೀತಿಗಳಿಂದ ದ್ವೀಪ ರಾಷ್ಟ್ರ ಪಾತಾಳಕ್ಕೆ ಕುಸಿದಿದೆ. ಗೋಟಾಬಯ ಅವರು ಮಾಲ್ಡೀವ್ಸ್ ಗೆ ಪಲಾಯನ ಮಾಡಿದ್ದಾರೆ. ಅಧ್ಯಕ್ಷರ ನಿವಾಸವನ್ನು ನಾಗರೀಕರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ನಮ್ಮ ದೇಶದ ರಾಜಕಾರಣಿಗಳು ದೇಶವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ವಿವರಿಸಲು ಪದಗಳಿಲ್ಲ. ಶ್ರೀಲಂಕಾದ ಪರಿಸ್ಥಿತಿ ಹದಗೆಟ್ಟಿರುವುದು ದುರಾದೃಷ್ಟಕರ ಎಂದು ಜಯಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

srilanka sports karnataka
srilanka sports karnataka

ಇನ್ನು ರಾಷ್ಟ್ರಪತಿ ಭವನವನ್ನು ನಾಗರೀಕರು ಸ್ವಾಧೀನಪಡಿಸಿಕೊಂಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಅವರು ಮಾಡಿರುವುದು ಪ್ರಮಾದ ಎಂದು ನನಗೆ ಅನ್ನಿಸುತ್ತಿಲ್ಲ. ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಬೇಡಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಜುಲೈ 9ರಂದು ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ಶ್ರೀಲಂಕಾದ ಬೇರೆ ಬೇರೆ ಭಾಗಗಳಿಂದ ಜನರು ಬಂದಿದ್ದಾರೆ ಎಂದು ಹೇಳಿದ್ರು.
ಶ್ರೀಲಂಕಾದಲ್ಲಿ ಮತ್ತೆ ಪ್ರಜಾಪ್ರಭುತ್ವ ಸ್ಥಾಪನೆಯಾಗುತ್ತದೆ. ಹಂಗಾಮಿ ಅಧ್ಯಕ್ಷರಾಗಿ ಪ್ರಧಾನ ಮಂತ್ರಿ ರನಿಲ್ ವಿಕ್ರಮ ಸಿಂಘೆ ಅವರು ಆಯ್ಕೆಯಾಗಿದ್ದಾರೆ. ಅವರು ಸ್ಪೀಕರ್ ಆದೇಶಕ್ಕೆ ಬದ್ಧರಾಗಿರಬೇಕು. ಹಾಗೇ ಪ್ರಜಾಪ್ರಭುತ್ವವನ್ನು ಮತ್ತೆ ಸ್ಥಾಪಿಸಲು ರನೀಲ್ ಅವರು ಎಲ್ಲಾ ರಾಜಕೀಯ ಮುಖಂಡರೊಂದಿಗೆ ಚರ್ಚೆ ಮಾಡಬೇಕು ಎಂದು ಹೇಳಿದ್ರು.
ಇನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಶಾಂತಿಯ ನಡುವೆಯೂ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಟೂರ್ನಿಯನ್ನು ಆಡಿತ್ತು. ಇದಕ್ಕೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ ಮುಂದಿನ ಏಷ್ಯಾಕಪ್ ಟೂರ್ನಿಗೂ ತೊಂದರೆಯಾಗುವುದಿಲ್ಲ. ಯಾಕಂದ್ರೆ ಶ್ರೀಲಂಕಾದ ಜನ ಕ್ರಿಕೆಟ್ ಆಟದ ಮೇಲೆ ಅಪಾರವಾದ ಪ್ರೀತಿಯನ್ನಿಟ್ಟುಕೊಂಡಿದ್ದಾರೆ ಎಂದು ಜಯ ಸೂರ್ಯ ಹೇಳಿದ್ರು.
90ರ ದಶಕದಲ್ಲಿ ಸನತ್ ಜಯಸೂರ್ಯ ಅವರು ಕ್ರಿಕೆಟ್ ನ ಸಂಪ್ರದಾಯವನ್ನು ಮುರಿದು ವೇಗದ ಆಟಕ್ಕೆ ನಾಂದಿ ಹಾಡಿದ ಕ್ರಿಕೆಟಿಗ. ಹೊಡಿಬಡಿ ಆಟದ ಮೂಲಕ ಪವರ್ ಪ್ಲೇ ಲಾಭವನ್ನು ಪಡೆದುಕೊಳ್ಳುವಂತೆ ಮಾಡಿದ್ದ ಜಯಸೂರ್ಯ, 1996ರ ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

6ae4b3ae44dd720338cc435412543f62?s=150&d=mm&r=g

admin

See author's posts

ShareTweetSendShare
Next Post
sourav ganguly bcci team india sports karnataka

Sourav Ganguly - ಬ್ರಿಟನ್ ಸಂಸತ್ ನಲ್ಲಿ ಸೌರವ್ ಗಂಗೂಲಿಗೆ ಗೌರವ

Leave a Reply Cancel reply

Your email address will not be published. Required fields are marked *

Stay Connected test

Recent News

ISSF Shooting ಮನುಗೆ ಭಾಕರ್ಗೆ ಕಂಚು 

ISSF Shooting ಮನುಗೆ ಭಾಕರ್ಗೆ ಕಂಚು 

March 26, 2023
Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

March 26, 2023
World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

March 26, 2023
WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

March 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram