ಗೆಲುವಿನ ಸಂಭ್ರಮಿಸು ವೇಳೆ ಭಾರತ ಫುಟ್ಬಾಲ್ ತಂಡದ ಆಟಗಾರ ಜಾಕ್ಸನ್ ಸಿಂಗ್ ಮಣಿಪುರದ ಧ್ವವಜ ಹಿಡಿದು ಸಂಭ್ರರಮಾಚರಣೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಕುವೈತ್ ವಿರುದ್ಧ ಗೆದ್ದ ನಂತರ ಜಾಕ್ಸನ್ ಸಿಂಗ್ ಏಳು ಬಣ್ಣ ಹೊಂದಿರುವ ಸಾಲಾಯಿ ಟಾರೆಟ್ ಎಂದು ಕರೆಯಲ್ಪಡುವ ಧ್ವಜ ಹಿಡಿದು ಸಂಭ್ರಮಿಸಿದರು. ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ಎರಡು ಸಮುದಾಯ ನಡುವೆ ಘರ್ಷಣೆ ಸಂಭವಿಸಿದೆ. ಮೆಟಿಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಾಕ್ಸನ್ ಟ್ವೀಟ್ಗೆ ನೆಟ್ಟಿಗರಿಂದ ಭಾರೀ ಟೀಕೆಗಳು ಕೇಳಿ ಬಂದಿವೆ. ವಿವಾದವಾಗುತ್ತಿದ್ದಂತೆ ಮಿಡೀಲ್ಡರ್ ಜಾಕ್ಸನ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪ್ರೀತಿಯ ಅಭಿಮಾನಿಗಳೇ, ಮಣಿಪುರದ ಧ್ವಜ ಹಿಡಿದು ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುಲು ಇಷ್ಟಪಡಲ್ಲ. ಮಣಿಪುರ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಗಮನ ಸೆಳೆಯುವದಷ್ಟೆ ನನ್ನ ಇರಾದೆಯಾಗಿತ್ತು. ಈ ಗೆಲುವು ಇಡೀ ದೇಶಕ್ಕೆ ಅರ್ಪಣೆಯಾಗಿದೆ ಎಂದು ಬರೆದಿದ್ದಾರೆ.