ಹಾಲಿ ಚಾಂಪಿಯನ್ ಭಾರತ ಫುಟ್ಬಾಲ್ ತಂಡ ಇಂದು ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕುವೈತ್ ತಂಡವನ್ನು ಎದುರಿಸಲಿದೆ.
ನಗರದ ಕಂಠೀರವ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ 9ನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಲು ಪಣತೊಟ್ಟಿದೆ. ಕುವೈತ್ ತಂಡ ಮೊದಲ ಪ್ರಯತ್ನದಲ್ಲೆ ಪ್ರಶಸ್ತಿ ಗೆಲ್ಲಲು ಹೋರಾಡಲಿದೆ.
ಮೊನ್ನೆ ನಡೆದ ಸೆಮಿಫೈನಲ್ನಲ್ಲಿ ಭಾರತ ತಂಡ ಲೆಬನಾನ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ. ಇನ್ನು ಕುವೈತ್ ತಂಡ ಬಾಂಗ್ಲಾದೇಶ ವಿರುದ್ಧ 1-0 ಗೋಲಿನಿಂದ ಗೆದ್ದುಕೊಂಡಿತು.
ಟೂರ್ನಿಯಲ್ಲಿ ಭಾರತ ತಂಡ ಎರಡನೆ ಬಾರಿಗೆ ಕುವೈತ್ ವಿರುದ್ಧ ಸೆಣಸಲಿದೆ. ಆ ಪಂದ್ಯದಲ್ಲಿ ಭಾರತ 1-1 ಗೋಲಿನಿಂದ ಡ್ರಾ ಮಾಡಿಕೊಂಡು ಸೆಮಿಗೆ ಪ್ರವೇಶಕೊಟ್ಟಿತ್ತು. ಕಂಠೀರವ ಮೈದಾನದಲ್ಲಿ ತವರಿನ ಪ್ರೇಕ್ಷಕರ ಬೆಂಬಲ ಪಡೆಯಲಿರುವ ಹಿನ್ನೆಲೆಯಲ್ಲಿ ಭಾರತ ತಂಡ ಕುವೈತ್ ವಿರುದ್ಧ ಮೇಲುಗೈ ಸಾಸುವ ಅವಕಾಶ ಹೆಚ್ಚಿದೆ. ಆದರೆ ಭಾರತ ಫುಟ್ಬಾಲ್ ತಂಡದ ಪ್ರದದರ್ಶನದ ಬಗ್ಗೆ ಕಳವಳಗೊಳ್ಳುವ ಅಂಶ ಇದೆ. ಫೈನಲ್ಗೂ ಮುನ್ನ ಆಡಿದ ಎರಡೂ ಪಂದ್ಯಗಳಲ್ಲೂ ಭಾರತ ಗೋಲು ಹೊಡೆಯಲು ಪರದಾಡಿದೆ.
ಪ್ರದರ್ಶನದ ಕುರಿತು ಒಂದು ವಾರ ಗಡವು ನೀಡಿದರೂ ಏನು ಮಾಡಲು ಆಗಲ್ಲ. ಒಂದು ತಿಂಗಳು ಫಿಟ್ನೆಸ್ಗೆ ಶ್ರಮಿಸಿದ್ದೇವೆ. ನಮ್ಮ ಕೋಚ್ ಲೂಕಾ ರಾದಮಾನ್ ಒಳ್ಳೆಯ ಕೆಲಸ ಮಾಡಿದ್ದಾರೆ. ಗಾಯದ ಸಮಸ್ಯೆ ಇಲ್ಲದೇ ಆಟಗಾರರು ಆಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ತಂಡದ ತಾರಾ ಡಿಫೆಂಡರ್ ಸಂದೇಶ್ ಜ್ಹಿನ್ಗಾನ್ ಮೊನ್ನೆ ಲೆಬನಾನ್ ವಿರದ್ಧು ಆಡಿರಲಿಲ್ಲ. ಇವರ ಬದಲು ಆಡಿದ ಅನ್ವರ್ ಅಲಿ ಲೆಬನಾನ್ ತಂಡವನ್ನು ಸೆಮಿಫೈನಲ್ಗೆ ಹೋಗದಂತೆ ನಿಯಂತ್ರಿಸುವಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸಿದ್ದರು.
ಇನ್ನು ಎರಡು ಪಂದ್ಯಗಳಿಗೆ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಕೋಚ್ ಇಗೊರ್ ಸ್ಟಿಮಾಕ್ ಡಗೌಟ್ನಲ್ಲಿ ಅವರ ಅನುಪಸ್ಥಿತಿ ಕಾಡಲಿದೆ. ಕುವೈತ್ ವಿರುದ್ಧದ ಪಂದ್ಯದಲ್ಲಿ ಕೋಚ್ ಇಗೊರ್ ಸ್ಟಿಮಾಕ್ ಎರಡನೆ ರೆಡ್ ಕಾರ್ಡ್ ಪಡೆದರು. ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ರೆಡ್ ಕಾರ್ಡ್ ಪಡೆದಿದ್ದರು.
ನಾಯಕ ಸುನಿಲ್ ಚೆಟ್ರಿ ಅಡಿಯಲ್ಲಿ ಭಾರತ ತಂಡ ಅಡೆತಡೆಗಳ ನಡುವೆ ಪ್ರದರ್ಶನದಲ್ಲಿ ಬದ್ಧತೆ ತೋರಿಸಿದೆ. ಗುಂಪು ಹಂತದಲ್ಲಿ ಮೂರು ಪಂದ್ಯಗಳಲ್ಲಿ ಗೋಲಿನ ಮಳೆ ಸುರಿಸಿದ ನಂತರ ಲೆಬನಾನ್ ವಿರುದ್ಧ ಸುನಿಲ್ ಚೆಟ್ರಿ ಗೋಲು ಹೊಡೆಯಲಿಲ್ಲಘಿ. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಜವಾಬ್ದಾರಿಯನ್ನು ಸುನಿಲ್ ಚೆಟ್ರಿ ನಿರ್ವಹಿಸಬೇಕಿದೆ.
ತಂಡದ ಆಟಗಾರರಾದ ಅಬ್ದುಲ್ ಸಮಾದ್, ಮಹೇಶ್ ಸಿಂಗ್ ಮತ್ತು ಉದಾಂತಾ ಸಿಂಗ್ ಚುರುಕಿನ ಆಟವಾಡಬೇಕಿದ್ದು ನಾಯಕನಿಗೆ ಸೂಕ್ತ ಬೆಂಬಲ ನೀಡಬೇಕಿದೆ. ಲೆಬನಾನ್ ವಿರುದ್ಧದ ಪಂದ್ಯದಲ್ಲಿ ನಾಯಕನಿಗೆ ನೆರವು ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇದೇ ತಂತ್ರವನ್ನು ಫೈನಲ್ನಲ್ಲಿ ಬಳಸಲು ಯೋಜನೆ ರೂಪಿಸಲಾಗಿದೆ. ಕುವೈತ್ ತಂಡ ಭಾರೀ ಸವಾಲು ನೀಡುವ ತಂಡವಾಗಿದ್ದು ಒಳ್ಳೆಯ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ.