ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಆತಿಥೇಯ ಭಾರತ ತಂಡ ಫೈನಲ್ ತಲುಪಿದೆ. ಫೈನಲ್ನಲ್ಲಿ ಜುಲೈ 4ರಂದು ಕುವೈತ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡ ಕುವೈತ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 4-2 ಗೋಲುಗಳಿಂದ ಗೆದ್ದುಕೊಂಡಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಯಾವುದೇ ಗೋಲುಗಳು ದಾಖಲಾಗಿರಲಿಲ್ಲ. ಫಲಿತಾಂಶಕ್ಕಾಗಿ ಪೆನಾಲ್ಟಿ ಮೊರೆ ಹೋಗಬೇಕಾಯಿತು.
ಮೊದಲ ಪೆನಾಲ್ಟಿಯಲ್ಲಿ ನಾಯಕ ಸುನಿಲ್ ಚೆಟ್ರಿ ಮೊದಲ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ಲಬನಾನ್ ಹೊಡೆದ ಮೊದಲ ಪ್ರಯತ್ನದಲ್ಲಿ ಭಾರತದ ಗೋಲ್ ಕೀಪರ್ ಗುರುಪ್ರೀತ್ ತಡೆದರು.
ಎರಡನೆ ಪ್ರಯತ್ನದಲ್ಲಿ ಭಾರತದ ಅನ್ವಾರ್ ಅಲಿ ಗೋಲು ಹೊಡೆದು 2-0 ಮುನ್ನಡೆ ನೀಡಿದರು. ನಂತರ ಗೋಲ್ ಕೀಪರ್ ಗುರುಪ್ರೀತ್ ಚೆಂಡನ್ನು ತಡೆಯುವಲ್ಲಿ ವಿಫಲರಾದರು. ಲೆಬನಾನ್ 1-2 ಅಂಕ ಪಡೆಯಿತು. ನಂತರ ಭಾರತತ ಮೂರನೆ ಪ್ರಯತ್ನದಲ್ಲಿ ಮಹೇಶ್ ಸಿಂಗ್ ಗೋಲು ಹೊಡೆದು ಮುನ್ನಡೆ ನೀಡಿದರು. ನಾಲ್ಕನೆ ಪ್ರಯತ್ನದಲ್ಲಿ ಗುರುಪ್ರೀತ್ ಚೆಂಡನ್ನು ತಡೆಯುವಲ್ಲಿ ವಿಫಲರಾದರು.
ಕೊನೆಯಲ್ಲಿ ಉದಾಂತಾ ಗೋಲು ಹೊಡೆದರೂ ಭಾರತ ಗೆಲುವನ್ನು ಕಿತ್ತುಕೊಳ್ಳಲು ಸಾಧ್ಯಯವಾಗಲಿಲ್ಲ.
ಫೈನಲ್ಗೆ ಕುವೈತ್ ಲಗ್ಗೆ
ಬಲಿಷ್ಠ ಕುವೈತ್ ತಂಡ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿದೆ. ಸೆಮಿಫೈನಲ್ನಲ್ಲಿ ಕುವೈತ್ ತಂಡ ಬಾಂಗ್ಲಾದೇಶ ವಿರುದ್ಧ 1-0 ಗೋಲಿನಿಂದ ಗೆದ್ದುಕೊಂಡಿತು.
ಕುವೈತ್ ಪರ ಅಲ್ ಬ್ಲೌಶಿ ಮೊದಲಾರ್ಧದಲ್ಲಿ ಗೋಲು ಹೊಡೆದು ಗೆಲುವಿನ ರೂವಾರಿಯಾದರು. ಎರಡೂ ತಂಡಗಳು ಭಾರೀ ಪೈಪಪೋಟಿ ನೀಡಿದವು. ಮೊದಲಾರ್ಧದ ಎರಡನೆ ನಿಮಿಷದಲ್ಲಿ ಬಾಂಗ್ಲಾದೇಶ ತಂಡದ ಶೇಖ್ ಮೊರಸಾಲಿನ್ ಹೊಡೆದ ಚೆಂಡನ್ನು ಕುವೈತ್ ಗೋಲ್ ಕೀಪರ್ ಅನಿಸುರ್ ರೆಹಮಾನ್ ತಡೆದರು.