ಟೀಮ್ ಇಂಡಿಯಾದ (Team India) ಟ್ರಂಪ್ ಕಾರ್ಡ್ ಆಲ್ರೌಂಡರ್ ರವೀಂದ್ರ ಜಡೇಜಾ (All Rounder) ಯಶಸ್ವಿ ಶಸ್ತಿ ಚಿಕಿತ್ಸೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲೇ ಫೋಟೋ ಅಪ್ಲೋಡ್ ಮಾಡಿರುವ ಜಡೇಜಾ ಶೀಘ್ರದಲ್ಲೇ ಕಂ ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಡೇಜಾ ಟಿ20 ವಿಶ್ವಕಪ್ (T20 World Cup) ವೇಳೆ ತಂಡಕ್ಕೆ ಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.
ಏಷ್ಯಾಕಪ್ನಲ್ಲಿ (Asia Cup) ಪಾಕ್ (Pak) ವಿರುದ್ಧದ ಲೀಗ್ ಪಂದ್ಯದ ಬಳಿಕ ಮೊಣಕಾಲಿನ ಸಮಸ್ಯೆ ಎದುರಿಸಿದ್ದರು. ಆದರೆ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದರು. ಆದರೆ ಬಳಿಕ ಮೊಣಕಾಲಿನ ನೋವು ಹೆಚ್ಚಾಗಿದ್ದರಿಂದ ಟೂರ್ನಿಯಿಂದ ಹೊರಗುಳಿದರು. ಪಾಕ್ ವಿರುದ್ಧದ ಸೂಪರ್ 4 ಪಂದ್ಯದ ವೇಳೆ ಜಡೇಜಾ ಟೀಮ್ ಇಂಡಿಯಾದ ಡಗ್ಔಟ್ನಲ್ಲಿ ಕಾಣಿಸಿಕೊಂಡಿದ್ದರು.
ಜಡೇಜಾ ಬಲ ಮೊಣಕಾಲಿನ ಸಮಸ್ಯೆ ಎದುರಿಸುತ್ತಿರುವುದು ಇದು ಮೊದಲ ಬಾರಿಯಲ್ಲ. ಕಳೆದ ವೆಸ್ಟ್ಇಂಡೀಸ್ ಪ್ರವಾಸದ ವೇಳೆಯೂ ಈ ಸಮಸ್ಯೆ ಅನುಭವಿಸಿದ್ದರು. ಐಪಿಎಲ್ ವೇಳೆಯೂ ಇದೇ ಪ್ರಾಬ್ಲಂ ಎದುರಿಸಿದ್ದರು. ಈಗ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಆಪರೇಷನ್ ಮಾಡಿಸಿಕೊಂಡಿದ್ದಾರೆ.
ಅಕ್ಸರ್ ಪಟೇಲ್ (Axar Patel) ಏಷ್ಯಾಕಪ್ನಲ್ಲಿ ರವೀಂದ್ರ ಜಡೇಜಾ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಇಲ್ಲಿ ತನಕ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ (Australia) ನಡೆಯುವ ಟಿ20 ವಿಶ್ವಕಪ್ ವೇಳೆ ಜಡೇಜಾ ಫಿಟ್ ಆಗುವ ವಿಶ್ವಾಸ ಬಿಸಿಸಿಐಗಿದೆ.