ಮುಂಬೈ ಟೆಸ್ಟ್ ಪಂದ್ಯದ ಆರಂಭ ಒದ್ದೆಯಾದ ಔಟ್ ಫೀಲ್ಡ್ನಿಂದ ತಡವಾಗಿದೆ. ಆದರೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಕ್ಕೆ ಅಂಗಳಕ್ಕೆ ಇಳಿಯುವ ಮುನ್ನವೇ ಶಾಕ್ ಎದುರಾಗಿದೆ. ಟೀಮ್ ಇಂಡಿಯಾ ತನ್ನ ಪ್ರಮುಖ ಮ್ಯಾಚ್ ವಿನ್ನರ್ಗಳನ್ನು ಮುಂಬೈ ಟೆಸ್ಟ್ನಿಂದ ಕಳೆದುಕೊಂಡಿದೆ. ನ್ಯೂಜಿಲೆಂಡ್ ತಂಡ ತನ್ನ ನಾಯಕನ ಸೇವೆಯನ್ನೇ ಕಳೆದುಕೊಂಡಿದೆ. ಹೀಗಾಗಿ ಎರಡೂ ತಂಡಗಳನ್ನೂ ಬದಲಾವಣೆ ಅನಿವಾರ್ಯವಾಗಿದೆ.
ಆಲ್ರೌಂಡರ್ ರವೀಂದ್ರ ಜಡೇಜಾ, ಉಪನಾಯಕ ಅಜಿಂಕ್ಯಾ ರಹಾನೆ ಮತ್ತು ವೇಗಿ ಇಶಾಂತ್ ಶರ್ಮಾ ವಿವಿಧ ಗಾಯಗಳಿಂದಾಗಿ ಮುಂಬೈ ಟೆಸ್ಟ್ನಲ್ಲಿ ಆಡುತ್ತಿಲ್ಲ. ಮೊದಲ ಟೆಸ್ಟ್ನ ಅಂತಿಮ ದಿನ ವೇಗಿ ಇಶಾಂತ್ ಶರ್ಮಾ ಅವರ ಎಡಗೈಯ ಕಿರು ಬೆರಳಿಗೆ ಗಾಯವಾದ ಕಾರಣ ಅವರು ಅಲಭ್ಯರಾಗಿದ್ದಾರೆ. ರವೀಂದ್ರ ಜಡೇಜಾ ಬಲ ಮುಂಗೈ ಗಾಯದಿಂದ ಬಳಲುತ್ತಿದ್ದಾರೆ. ರಹಾನೆ ಮೊದಲ ಟೆಸ್ಟ್ನ ಕೊನೇ ದಿನ ಫೀಲ್ಡಿಂಗ್ ಮಾಡುವಾಗ ಎಡ ಮಂಡಿ ನೋವಿಗೆ ತುತ್ತಾಗಿದ್ದರು. ಹೀಗಾಗಿ ಈ ಮೂವರು ಮುಂಬೈ ಟೆಸ್ಟ್ಗೆ ಅಲಭ್ಯರಾಗಿದ್ದಾರೆ.
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಎರಡನೇ ಟೆಸ್ಟ್ಗೆ ಅಲಭ್ಯರಾಗಿದ್ದಾರೆ. ಎಡ ಮೊಣಕೈ ಗಾಯಕ್ಕೆ ತುತ್ತಾಗಿರುವ ಕೇನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಕಿವೀಸ್ ಪಡೆಯನ್ನು ಟಾಮ್ ಲ್ಯಾಥಂ ಮುನ್ನಡೆಸುತ್ತಿದ್ದಾರೆ.
ಮುಂಬೈನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ವಾಂಖೆಡೆ ಮೈದಾನ ಸಂಪೂರ್ಣ ಒದ್ದೆಯಾಗಿದೆ. ಹೀಗಾಗಿ ಟೆಸ್ಟ್ ಪಂದ್ಯದ ಮೊದಲ ಆಟ ಆರಂಭವಾಗುವುದು ತಡವಾಗಿದೆ. ಎರಡೂ ತಂಡಗಳಲ್ಲೂ ಬದಲಾವಣೆ ಅನಿವಾರ್ಯ ಆಗಿರುವುದುರಿಂದ ಪ್ಲೇಯಿಂಗ್ 11 ಹೇಗಿರುತ್ತದೆ ಅನ್ನುವುದು ಕುತೂಹಲ ಮೂಡಿಸಿದೆ.