ರಣಜಿ ಟ್ರೋಫಿಯಲ್ಲಿ ಇಂದಿನಿಂದ ಸೆಮಿಫೈನಲ್ ಹೋರಾಟ ಆರಂಭವಾಗಲಿದೆ. ಸೆಮಿಫೈನಲ್ ಹೋರಾಟದಲ್ಲಿ ಬಲಿಷ್ಠ 4 ತಂಡಗಳು ಹೋರಾಟ ಮಾಡಲಿವೆ.
1st ಸೆಮಿಫೈನಲ್
ಮುಂಬೈ VS ಉತ್ತರ ಪ್ರದೇಶ
ಜೂನ್ 14 ರಿಂದ 18
ಜಸ್ಟ್ ಕ್ರಿಕೆಟ್ ಗ್ರೌಂಡ್, ಬೆಂಗಳೂರು
ಮೊದಲ ಸೆಮಿಫೈನಲ್ ಪಂದ್ಯ ಮುಂಬೈ ಮತ್ತು ಉತ್ತರ ಪ್ರದೇಶ ನಡುವೆ ನಡೆಯಲಿದೆ. ಜಸ್ಟ್ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಪಂದ್ಯ ನಡೆಯಲಿದೆ. ಮುಂಬೈ ತಂಡ ಬಲಿಷ್ಠ ತಂಡವಾಗಿ ಕಾಣುತ್ತಿದೆ. ಯಶಸ್ವಿ ಜೈಸ್ವಾಲ್, ಪೃಥ್ವಿ ಷಾ, ಅದಿತ್ಯ ತಾರೆ, ಸರ್ಫರಾಜ್ ಅಹ್ಮದ್ರಂತಹ ಅದ್ಭುತ ಆಟಗಾರರನ್ನು ಹೊಂದಿದೆ ಉತ್ತರ ಪ್ರದೇಶ ಯಶ್ ದಯಾಳ್, ಕರ್ಣ್ ಶರ್ಮಾ, ಉಪೇಂದ್ರ ಯಾದವ್ ರಂತಹ ಕ್ರಿಕೆಟಿಗರನ್ನು ಹೊಂದಿದೆ.
2nd ಸೆಮಿಫೈನಲ್
ಪಶ್ಚಿಮ ಬಂಗಾಳ VS ಮಧ್ಯಪ್ರದೇಶ
ಜೂನ್ 14 ರಿಂದ 18
ಆಲೂರು, ಬೆಂಗಳೂರು
ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶ ನಡುವೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಆಲೂರು ಮೈದಾನದಲ್ಲಿ ನಡೆಯಲಿದೆ. ಪಶ್ಚಿಮ ಬಂಗಾಳ ತಂಡದಲ್ಲಿ ಅನುಸ್ತುಪ್ ಮಜುಂದಾರ್, ಮನೋಜ್ ತಿವಾರಿ, ಶಹಬಾಸ್ ಅಹ್ಮದ್, ಅಭಿಮನ್ಯು ಈಶ್ವರನ್ ರಂತಹ ಆಟಗಾರರನ್ನು ಹೊಂದಿದೆ. ಮಧ್ಯ ಪ್ರದೇಶ ತಂಡ ಅಂಕಿತ್ ಶರ್ಮಾ, ಪುನೀತ್ ಡಾಟಿ, ರಜತ್ ಪಾಟೀದಾರ್ ರಂತಹ ಯುವ ಆಟಗಾರರನ್ನು ಹೊಂದಿದೆ.
ಈ ಎರಡು ಪಂದ್ಯಗಳ ವಿಜೇತರು ಫೈನಲ್ ಪಂದ್ಯದಲ್ಲಿ ರಣಜಿ ಚಾಂಪಿಯ್ ಪಟ್ಟಕ್ಕಾಗಿ ಹೋರಾಟ ಮಾಡಲಿದ್ದಾರೆ. ಫೈನಲ್ ಜೂನ್ 23 ರಿಂದ ಜೂನ್ 27ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.