ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ 3ನೇ ದಿನ ಆಟ ಆರಂಭಿಸಿದ ಪಶ್ಚಿಮ ಬಂಗಾಳ ಮನೋಜ್ ತಿವಾರಿ ಮತ್ತು ಶಹಬಾಸ್ ಅಹ್ಮದ್ ಮೇಲೆ ಹೆಚ್ಚು ನಂಬಿ ಕೊಂಡಿತ್ತು. ತಿವಾರಿ ಆಕರ್ಷಕ ಶತಕ ಕೂಡ ದಾಖಲಿಸಿದರು. ಆದರೆ 102 ರನ್ಗಳಿಸಿದ್ದ ವೇಳೆ ಔಟಾದರು. ಇವರ ಹಿಂದೆಯೇ 116 ರನ್ಗಳಿಸಿದ ಶಹಬಾಸ್ ಕೂಡ ಔಟಾಗಿ ಬಿಟ್ರು.
ಇವರಿಬ್ಬರ ವಿಕೆಟ್ ಪತನದ ಬಳಿಕ ಮಧ್ಯಪ್ರದೇಶ ಪಂದ್ಯವನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಂಡಿತು. ಅಷ್ಟೇ ಅಲ್ಲ ಬಂಗಾಳ ತಂಡವನ್ನು 273 ರನ್ಗಳಿಗೆ ಆಲೌಟ್ ಮಾಡಿತು. ಮಧ್ಯ ಪ್ರದೇಶ ಪರ ಕುಮಾರ್ ಕಾರ್ತಿಕೇಯ, ಸರಾಂಶ್ ಜೈನ್ ಮತ್ತು ಪುನೀತ್ ಡಾಟೆ ತಲಾ 3 ವಿಕೆಟ್ ಪಡೆದರು.
68 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಹಿಮಾಂಶು ಮಂತ್ರಿ (21) ಮತ್ತು ಯಶ್ ದುಬೆ (12) ಬೇಗನೆ ಔಟಾದರು. ಶುಭಂ ಶರ್ಮಾ 22 ರನ್ಗಳಿಸಿದ್ದಾಗ ಗಾಯಗೊಂಡು ಮೈದಾನ ತೊರೆದರು. ಆದರೆ ರಜತ್ ಪಾಟಿದಾರ್ ಮತ್ತು ನಾಯಕ ಆದಿತ್ಯ ಶ್ರೀವಾಸ್ತವ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 3ನೇ ವಿಕೆಟ್ಗೆ
ಆಕರ್ಷಕ ಅರ್ಧಶತಕ ದಾಖಲಿಸಿರುವ ರಜತ್ ಪಾಟೀದಾರ್ ಅಜೇಯ 63 ಹಾಗೂ ಶ್ರೀವಾಸ್ತವ ಅಜೇಯ 34 ರನ್ಗಳಿಸಿ 4ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಮಧ್ಯ ಪ್ರದೇಶ 2ನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 163 ರನ್ಗಳಿಸಿದೆ. 231 ರನ್ಗಳ ಒಟ್ಟಾರೆ ಮುನ್ನಡೆಯನ್ನು ಪಡೆದುಕೊಂಡಿದೆ.