ಐಪಿಎಲ್ ಮುಗಿಯುತ್ತಿದ್ದಂತೆ ರಣಜಿ ಟ್ರೋಫಿ ಕಡೆ ಕಣ್ಣು ನೆಟ್ಟಿದೆ. ಲೀಗ್ ಹಂತದಲ್ಲಿ ಪ್ರಾಬಲ್ಯ ಮೆರೆದಿದ್ದ ಮುಂಬೈ ಈಗ ಉತ್ತರಾಖಂಡ್ ವಿರುದ್ಧದದ ಲೀಗ್ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಜೂನ್ 6 ರಿಂದ ಜೂನ್ 10ರ ತನಕ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮುಂಬೈ ತಂಡ ಪ್ರಕಟಿಸಲಾಗಿದ್ದು, ಸ್ಟಾರ್ ಆಟಗಾರರಾದ ಅಜಿಂಕ್ಯಾ ರಹಾನೆ ಮತ್ತು ಶಿವಂ ದುಬೆಗೆ ಗೇಟ್ಪಾಸ್ ನೀಡಲಾಗಿದೆ.
ರಹಾನೆ ಮತ್ತು ದುಬೆ ಐಪಿಎಲ್ ಪಂದ್ಯಗಳಲ್ಲಿ ಗಾಯಗೊಂಡಿದ್ದರು. ಹೀಗಾಗಿ ಇವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಸಲೀಲ್ ಅಂಕೋಲಾ ನೇತೃತ್ವದ ಆಯ್ಕೆ ಸಮಿತಿ 21 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಅರ್ಜುನ್ ತೆಂಡುಲ್ಕರ್ ಅವರನ್ನು ಹೊರಗಿಟ್ಟಿದೆ. ಈ ಜಾಗದಲ್ಲಿ ಸರ್ಫರಾಜ್ ಖಾನ್ ಸಹೋದರ 18 ವರ್ಷದ ಮುಶೀರ್ ಖಾನ್ಗೆ ಅವಕಾಶ ನೀಡಿದೆ. ಸರ್ಫರಾಜ್ ಲೀಗ್ ಹಂತದಲ್ಲಿ 137..75 ಸರಾಸರಿಯಲ್ಲಿ551 ರನ್ಗಳಿಸಿದ್ದರು.
ಪೃಥ್ವಿ ಷಾ ತಂಡವನ್ನು ಮುನ್ನಡೆಸಲಿದ್ದಾರೆ. ಯಶಸ್ವಿ ಜೈಸ್ವಾಲ್, ಆದಿತ್ಯ ತಾರೆ, ಅರ್ಮನ್ ಜಾಫರ್, ಸರ್ಫರಾಜ್ ಖಾನ್ ತಂಡದ ಸ್ಟಾರ್ ಬ್ಯಾಟರ್ಗಳಾಗಿದ್ದಾರೆ. ತುಷಾರ್ ದೇಶಪಾಂಡೆ, ಧವಲ್ ಕುಲಕರ್ಣಿ ಮತ್ತು ಮುಲಾನಿ ಬೌಲಿಂಗ್ನ ಆಧಾರ ಸ್ತಂಭಗಳು.