ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಬೆಂಗಳೂರು ಬುಲ್ಸ್ ಹಾಗೂ ತಮಿಳು ತಲೈವಾಸ್ ತಂಡಗಳು ಪ್ರೋ ಕಬಡ್ಡಿ ಟೂರ್ನಿಯಲ್ಲಿ ಸೆಣಸಾಟ ನಡೆಸಲಿವೆ.
ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಬುಲ್ಸ್ ಗೆಲುವಿನ ಲಯಕ್ಕೆ ಮರಳಲು ಪ್ಲಾನ್ ಮಾಡಿಕೊಂಡಿದೆ. ಇನ್ನು ತಲೈವಾಸ್ ಮೊದಲ ಪಂದ್ಯದಲ್ಲಿ ಟೈ ಸಾಧಿಸಿದ್ದರಿಂದ ಪೂರ್ಣ ಅಂಕ ಕಲೆ ಹಾಕುವ ಕನಸಿನಲ್ಲಿದೆ.
ಬೆಂಗಳೂರು ತಂಡದ ಸ್ಟಾರ ಆಟಗಾರ ಪವನ್ ಶೇರಾವತ್ ತಂಡಕ್ಕೆ ರೈಡಿಂಗ್ ವಿಭಾಗದಲ್ಲಿ ಬಲ ತುಂಬಿದ ಆಟಗಾರ. ಉಳಿದಂತೆ ಚಂದ್ರನ್ ರಂಜೀತ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಇನ್ನು ರಕ್ಷಣ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಬೇಕಿದೆ.
ತಲೈವಾಸ್ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಕೆ.ಪ್ರಪಂಜನ್, ಸುರ್ಜಿತ್ ಸಿಂಗ್, ಮಂಜೀತ್ ದಾಳಿಯ ಮೂಲಕ ಅಂಕಗಳನ್ನು ಕಲೆ ಹಾಕುವ ವಿಶ್ವಾಸ ಹೊಂದಿದ್ದಾರೆ. ರಕ್ಷಣಾ ವಿಭಾಗದಲ್ಲಿ ಸಾಗರ್, ಸಾಹೀಲ್ ಸಿಂಗ್, ಮೋಹಿತ್ ಎದುರಾಳಿ ತಂಡಕ್ಕೆ ಅಂಕಗಳನ್ನು ನೀಡದಂತೆ ತಡೆಯುವ ಯೋಜನೆ ರೂಪಿಸಿಕೊಂಡಿದ್ದಾರೆ.
ಸಂಭಾವ್ಯ ಬುಲ್ಸ್ ತಂಡ: ಪವನ್ ಕುಮಾರ್ ಶೇರಾವತ್, ಚಂದ್ರನ್ ರಂಜಿತ್ , ಅಬೋಲ್ಫಜ್ಲ್ ಮಗ್ಸೋಡ್ಲೌ, ಮಹೇಂದರ್ ಸಿಂಗ್, ಮೋಹಿತ್ ಸೆಹ್ರಾವತ್, ಅಮಿತ್ ಶೆರಾನ್ ಮತ್ತು ಸೌರಭ್ ನಂದಲ್
ಸಂಭಾವ್ಯ ತಲೈವಾಸ್ ತಂಡ: ಕೆ.ಪ್ರಪಂಜನ್, ಸುರ್ಜಿತ್ ಸಿಂಗ್, ಮೋಹಿತ್, ಭವಾನಿ ರಾಜಪುತ್, ಸಾಗರ್, ಸಾಹಿಲ್. ಅಜಿಂಕ್ಯ, ಹಿಮಾಂಶು, ಆಶೀಶ್.