ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಉತ್ತರ ಪ್ರದೇಶ ವಿರುದ್ಧ ಪೂರ್ಣ ಮೇಲುಗೈ ಸಾಧಿಸಿದೆ. ಅಷ್ಟೇ ಅಲ್ಲ ಫೈನಲ್ಗೇರುವುದು ಖಚಿತವಾಗಿದೆ. 4ನೇ ದಿನದಾಟದಲ್ಲಿ ಅದ್ಭುತ ಆಟವಾಡಿದ ಮುಂಬೈ ತನ್ನ ಮುನ್ನಡೆಯನ್ನು 662 ರನ್ಗಳಿಗೆ ಹೆಚ್ಚಿಸಿಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ 2ನೇ ಇನ್ನಿಂಗ್ಸ್ನಲ್ಲಿ ಮ್ಯಾರಾಥಾನ್ ಇನ್ನಿಂಗ್ಸ್ ಕಟ್ಟಿದರು. 4ನೇ ದಿನ ಆಟ ಆರಂಭಿಸಿದ ಜೈಸ್ವಾಲ್ ಮತ್ತು ಅರ್ಮನ್ ಜಾಫರ್ ಯುಪಿ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. 2ನೇ ವಿಕೆಟ್ಗೆ ಈ ಜೋಡಿ 286 ರನ್ಗಳ ಜೊತೆಯಾಟ ಕಟ್ಟಿತು. ಜೈಸ್ವಾಲ್ 2ನೇ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿ ಮಿಂಚಿದರು.
ಇನ್ನೊಂದೆಡೆ ಅರ್ಮನ್ ಜಾಫರ್ ಕೂಡ ಶತಕದ ಸಂಭ್ರಮ ಆಚರಿಸಿಕೊಂಡರು. ಜಾಫರ್ 127 ರನ್ಗಳಿಸಿ ನಿರ್ಗಮಿಸಿದರು. ಸುವೇದ್ಪಾರ್ಕರ್ 22 ರನ್ಗಳಸಿ ಔಟಾದರು. ಜೈಸ್ವಾಲ್ 372 ಎಸೆತಗಳಲ್ಲಿ 23 ಬೌಂಡರಿ ಮತ್ತು 1 ಸಿಕ್ಸರ್ ನೆರವನಿಂದ 181 ರನ್ ಸಿಡಿಸಿ ಪವೆಲಿಯನ್ ಸೇರಿಕೊಂಡರು.
ದಿನದ ಕೊನೆಯಲ್ಲಿ ಸರ್ಫಾಜ್ ಖಾನ್ ಅಜೇಯ 23 ಮತ್ತು ಶಂಸ್ ಮುಲಾನಿ ಅಜೇಯ 10 ರನ್ಗಳಿಗೆ ಅಂತಿಮ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಮುಂಬೈ 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 449 ರನ್ಗಳಿಸಿದೆ. ಒಟ್ಟಾರೆ ಮುನ್ನಡೆ 662 ರನ್ಗಳಾಗಿವೆ. ಐದನೇ ದಿನ ಯುಪಿ ಔಪಚಾರಿಕತೆ ಮುಗಿಸಲು ಕಣಕ್ಕಿಳಿಯಲಿದೆ.