ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ಕೊನೆಯ ದಿನದ ಕುತೂಹವನ್ನು ಹೆಚ್ಚಿಸಿದೆ. ಪಶ್ಚಿಮ ಬಂಗಾಳ ಕೊನೆಯ ದಿನ ಉಳಿದಿರುವ 6 ವಿಕೆಟ್ಗಳಿಂದ 254 ರನ್ಗಳಿಸಬೇಕಿದೆ.
4ನೇ ದಿನ ಆಟ ಆರಂಭಿಸಿದ ಮಧ್ಯಪ್ರದೇಶಕ್ಕೆ ರಜತ್ ಪಾಟಿದಾರ್ ಮತ್ತು ನಾಯಕ ಆದಿತ್ಯ ಶ್ರೀವಾಸ್ತವ ಜೋಡಿ ಹೆಚ್ಚಿನ ಕೊಡುಗೆ ನೀಡಲಿಲ್ಲ. ಪಾಟಿದಾರ್ 79 ರನ್ಗಳಿಸಿ ಔಟಾದರು. ಶ್ರೀವಾಸ್ತವ ಒಬ್ಬರೇ ಹೋರಾಟ ಮಾಡಿ 82 ರನ್ಗಳಿಸಿದರು. ಉಳಿದವರ ಕೊಡುಗೆ ತಂಡಕ್ಕೆ ದೊಡ್ಡ ಮೊತ್ತ ಸೇರಿಸಲು ನೆರವಾಗಲಿಲ್ಲ. 2ನೇ ಇನ್ನಿಂಗ್ಸ್ನಲ್ಲಿ ಮಧ್ಯ ಪ್ರದೇಶ 281 ರನ್ಗಳಿಗೆ ಅಲೌಟ್ ಆಯಿತು. ಶಹಬಾಸ್ ಅಹ್ಮದ್ 5 ಹಾಗೂ ಪ್ರದೀಪ್ತಾ ಪ್ರಾಮಾಣಿಕ್ 4 ವಿಕೆಟ್ ಪಪಡೆದರು.
350 ರನ್ಗಳ ಗೆಲುವಿನ ಗುರಿ ಪಡೆದ ಪಶ್ಚಿಮ ಬಂಗಾಳ ಎರಡನೇ ಇನ್ನಿಂಗ್ಸ್ನಲ್ಲೂ ಕುಸಿಯಿತು. ಅಭಿಷೇಕ್ ರಾಮನ್ ಶೂನ್ಯಕ್ಕೆ ಔಟಾದರೆ, ಸುದೀಪ್ ಕುಮಾರ್ 19 ರನ್ಗಳಿಸಿದರು. ಅಭಿಷೇಕ್ ಪೊರೆಲ್ ಮತ್ತು ಮನೋಜ್ ತಿವಾರಿ ತಲಾ 7 ರನ್ಗಳನ್ನಷ್ಟೇ ಗಳಿಸಿದರು.
ನಾಯಕ ಅಭಿಮನ್ಯು ಈಸ್ವರನ್ ಅಜೇಯ 52 ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅನುಸ್ತುಪ್ ಮಜುಂದಾರ್ ಕೂಡ 8 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಬಂಗಾಳ 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 96 ರನ್ಗಳಿಸಿದೆ. ಬಂಗಾಳ ಈ ಪಂದ್ಯ ಗೆದ್ರೆ ಮಾತ್ರ ಫೈನಲ್ ಎಂಟ್ರಿ ಪಡೆಯಲಿದೆ.