ಸುದೀರ್ಮನ್ ಕಪ್ ಟೂರ್ನಿಯ ನಿರಾಸೆ ಅನುಭವದಿಂದ ಹೊರಬಂದಿರುವ ಭಾರತ ಬ್ಯಾಡ್ಮಿಂಟನ್ ತಂಡ ಇಂದಿನಿಂದ ಮಲೇಷ್ಯಾ ಮಾಸ್ಟರ್ಸ್ ಸೂಪರ್ ಟೂರ್ನಿಯನ್ನು ಆಡಲಿದೆ. ತಾರಾ ಆಟಗಾರ್ತಿ ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್ ಕಣದಲ್ಲಿದ್ದಾರೆ.
ಮೊನ್ನೆ ಸುದೀರ್ ಮನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಸಿಂಧು, ಪ್ರಣಯ್ ವಿಫಲರಾದರು. ಡಬಲ್ಸ್ ಹಾಗು ಮಿಶ್ರ ಡಬಲ್ಸ್ ವಿಭಾಗದಲ್ಲೂ ಭಾರತ ಸೋಲು ಕಂಡಿತು.
ಪ್ಯಾರಿಸ್ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಭಾರತ ಪ್ರದರ್ಶನ ನೀಡಲಿದೆ. ಟೂರ್ನಿಯಲ್ಲಿ ಆರನೆ ಶ್ರೇಯಾಂಕಿತೆ ಸಿಂಧು ಮೊದಲ ಸುತ್ತಿನಲ್ಲಿ ಡೆನ್ ಮಾರ್ಕ್ನ ಲೈನ್ ಕ್ರಿಸ್ಟೊಫರೆಸೆನ್ ಅವರನ್ನು ಎದುರಿಸಲಿದ್ದಾರೆ.
ಪ್ರಣಯ್ ಚೌ ಟೀನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಶ್ರೀಕಾಂತ್ ಜಪಾನ್ನ ಕಾಂಟ ಸುನೆಯಾಮಾ ಅವರನ್ನು ಎದುರಿಸಲಿದ್ದಾರೆ.
ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಲೊಹ್ ಕೇನ್ ಯೆವ್ ವಿರುದ್ಧ ಸೆನಸಲಿದ್ದಾರೆ.