ನಾಯಕ ಎಂ.ಎಸ್.ಧೋನಿ ಚೆನ್ನೈ ತಂಡವನ್ನು ಮತ್ತೊಮ್ಮೆ ಐಪಿಎಲ್ ಫೈನಲ್ ಗೇರಿಸಿದ್ದಾರೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಕ್ವಾಲಿಫೈಯರ್ ಕದನದಲ್ಲಿ 15 ರನ್ ಗೆಲುವು ಸಾಧಿಸಿತು.
ಕಳೆದ 14 ಆವೃತ್ತಿಗಳಿಂದ ಚೆನ್ನೈ 10ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಈ ಸಾಧನೆ ಮಾಡಿದ ಮೊದಲ ತಂಡವೆನಿಸಿದೆ.
12ನೇ ಬಾರಿಗೆ ಪ್ಲೇಆಫ್ ಆಡಿದ ಚೆನ್ನೂ ಐದನೆ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾತರಿಸುತ್ತಿದೆ. ಗುಜರಾತ್ ಈ ಪಂದ್ಯವನ್ನು ಸೋತಿದ್ದರೂ ಫೈನಲ್ ಗೇರಲು ಮತ್ತೊಂದು ಅವಕಾಶ ಪಡೆದಿದ್ದು ಮೇ 26 ಕ್ವಾಲಿಫೈಯರ್ 2ರಲ್ಲಿ ಸೆಣಸಲಿದೆ.
ಮೊದಲು ಬ್ಯಾಟ್ ಮಾಡಿದ ಆತಿಥೇಯ ಚೆನ್ನೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿತು. ಗುಜರಾತ್ ತಂಡ 20 ಓವರ್ ನಲ್ಲಿ 157 ರನ್ಗಳಿಗೆ ಆಲೌಟ್ ಆಯಿತು.
ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್ಗೆ ನಿರೀಕ್ಷಿತಾ ಆರಂಭ ಸಿಗಲಿಲ್ಲ. ಶುಭ್ಮನ್ ಗಿಲ್ (42 ರನ್) ರನ್ ಗಳಿಸಲು ಪರದಾಡಿದರು. 15ನೇ ಓವರ್ ವೇಳೆಗೆ ಗುಜರಾತ್ 6 ವಿಕೆಟ್ ಕಳೆದುಕೊಂಡು 98 ರನ್ಗೆ ಸೋಲಿನ ಸುಳಿಯಲ್ಲಿ ಸಿಲುಕಿತ್ತು.ವಿಜಯ್ ಶಂಕರ್ , ರಶೀದ್ ಖಾನ್ ಸಿಡಿಯದಂತೆ ಚೆನ್ನೈ ಬೌಲರ್ಗಳು ನೋಡಿಕೊಂಡರು.ಪೀಲ್ಡಿಂಗ್ ಬದಲಾವಣೆ, ಬೌಲರ್ಗಳ ನಿರ್ವಹಣೆಯಲ್ಲಿ ಧೋನಿ ಚಾಣಾಕ್ಷತನ ಮೆರೆದರು.
ಇದಕ್ಕೂ ಮುನ್ನ ಓಪನರ್ ಋತುರಾಜ್ ಗಾಯಕ್ವಾಡ್ 2 ರನ್ ಗಳಿಸಿದ್ದಾಗ ದರ್ಶನ್ ಎಸೆತದಲ್ಲಿ ಕ್ಯಾಚ್ ನೀಡಿದ್ದರು. ಈ ಎಸೆತ ನೋ ಬಾಲ್ ಆಗಿದ್ದರಿಂದ ಋತುರಾಜ್ ಜೀವದಾನ ಪಡೆದರು. ಈ ಲಾಭದಿಂದ ಋತುರಾಜ್ 44 ಎಸೆತದಲ್ಲಿ 60 ರನ್ ಚಚ್ಚಿದರು.
ಡೆವೊನ್ ಕಾನ್ವೆ (40ರನ್) ಜತೆ ಮೊದಲ ವಿಕೆಟ್ಗೆ 87 ರನ್ ಕಲೆ ಹಾಕಿದರು.ರಹಾನೆ, ರಾಯ್ಡು ತಲಾ 17, ಜಡೇಜಾ 22 ರನ್ ಕೊಡುಗೆ ನೀಡಿದರು.