IPL 15ನೇ ಆವೃತ್ತಿಗೆ ಲೆಕ್ಕಾಚಾರಗಳು ಆರಂಭವಾಗಿದೆ. 2 ಬಾರಿಯ ಚಾಂಪಿಯನ್ ಮತ್ತು ಹಾಲಿ ರನ್ನರ್ ಅಪ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಹೊಸ ನಾಯಕ ಶ್ರೇಯಸ್ ಅಯ್ಯರ್ ತಂಡಕ್ಕೆ ಸ್ಪೂರ್ತಿ ತುಂಬಲಿದ್ದಾರೆ. ಇಷ್ಟಾದರೂ ಹಳೆಯ ಹುಲೆಗಳೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಧಾರ. ಅವರ ಪ್ರದರ್ಶನದಲ್ಲೇ ಕೆಕೆಆರ್ ತಂಡದ ಭವಿಷ್ಯ ನಿಂತಿದೆ.
ಶ್ರೇಯಸ್ ಮತ್ತು ವೆಂಕಟೇಶ್ ಅಯ್ಯರ್ ಕೆಕೆಆರ್ ತಂಡದ ಶಕ್ತಿಗಳು. ಇವರ ಜೊತೆ ನಿತಿಶ್ ರಾಣಾ ಮತ್ತು ಹೊಸಬ ಬಾಬಾ ಇಂದ್ರ ಜಿತ್ ಇದ್ದಾರೆ. ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಲಭ್ಯತೆ ತಂಡಕ್ಕೆ ಬೋನಸ್. ಬ್ಯಾಟಿಂಗ್ನಲ್ಲಿ ಸ್ಪೋಟಕ ಶಕ್ತಿ ಇದ್ದರೆ, ಬೌಲಿಂಗ್ನಲ್ಲಿ ಅನುಭವದ ಲಾಭವಿದೆ.
ಸಂಭಾವ್ಯ XI
-
ವೆಂಕಟೇಶ್ ಅಯ್ಯರ್
-
ಸ್ಯಾಮ್ ಬಿಲ್ಲಿಂಗ್ಸ್
-
ನಿತಿಶ್ ರಾಣಾ
-
ಶ್ರೇಯಸ್ ಅಯ್ಯರ್
-
ಬಾಬಾ ಇಂದ್ರಜಿತ್
-
ಆ್ಯಂಡ್ರೆ ರಸೆಲ್
-
ಸುನೀಲ್ ನರೈನ್
-
ಪ್ಯಾಟ್ ಕಮಿನ್ಸ್
-
ಶಿವಂ ಮಾವಿ
-
ವರುಣ್ ಚಕ್ರವರ್ತಿ
-
ಉಮೇಶ್ ಯಾದವ್
ಕೆಕೆಆರ್ ತಂಡಕ್ಕೆ ವೆಂಕಟೇಶ್ ಅಯ್ಯರ್ ಓಪನರ್ ಆಗುವುದು ಫಿಕ್ಸ್. ಇವರ ಜೊತೆ ಸ್ಯಾಮ್ ಬಿಲ್ಲಿಂಗ್ಸ್ ಅಥವಾ ಸುನೀಲ್ ನರೈನ್ ಕಣಕ್ಕಿಳಿಯಬಹುದು. ನರೈನ್ ಓಪನರ್ ಆದರೆ ಬಿಲ್ಲಿಂಗ್ಸ್ ಫಿನಿಷರ್ ರೋಲ್ ನಿಭಾಯಿಸಲಿದ್ದಾರೆ. ಬಿಲ್ಲಿಂಗ್ಸ್ ಆರಂಭಿಕನಾದರೆ ನರೈನ್ ಫ್ಲೋಟರ್ ಆಗಿ ಕಣಕ್ಕಿಳಿಯಬಹುದು. ನಿತೀಶ್ ರಾಣಾ,ಶ್ರೇಯಸ್ ಅಯ್ಯರ್ ಜೊತೆಗೆ ಬಾಬಾ ಇಂದ್ರಜಿತ್ ಟಾಪ್ ಆರ್ಡರ್ಗೆ ಬಲ ತುಂಬಲಿದ್ದಾರೆ. ಆ್ಯಂಡ್ರೆ ರಸೆಲ್ ಮತ್ತು ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಜೊತೆ ಬೌಲಿಂಗ್ ಕೂಡ ಮಾಡಬಲ್ಲರು. ಶಿವಂ ಮಾವಿ, ವರುಣ್ ಚಕ್ರವರ್ತಿ ಮತ್ತು ಉಮೇಶ್ ಯಾದವ್ ಪಕ್ಕಾ ಬೌಲರ್ಗಳು.
ಕೆಕೆಆರ್ ತಂಡದಲ್ಲಿ ಮೇಲ್ನೋಟಕ್ಕೆ ವೀಕ್ನೆಸ್ ಕಾಣುತ್ತಿಲ್ಲ.ಪಕ್ಕಾ ಟಿ20 ತಂಡವಾದರೂ ತಂಡ ಕುಸಿತ ಕಂಡರೆ ಆಧರಿಸುವವರಾರು ಅನ್ನುವ ಪ್ರಶ್ನೆ ಇದೆ. ಸಿಕ್ಸರ್ಗಳಿಗೆ ಕೊರತೆ ಇಲ್ಲದೆ ಪ್ರೇಕ್ಷಕರನ್ನು ಕೆಕೆಆರ್ ಎಂಟರ್ ಟೈನ್ ಮಾಡುವುದು ಖಚಿತ.